ವಿಶ್ವಕಪ್ನಲ್ಲಿ ಸ್ಥಾನಗಳಿಸಲು ಪೈಪೋಟಿ
ಟಿ20 ವಿಶ್ವಕಪ್ ಕೂಡ ಸನಿಹದಲ್ಲಿರುವ ಕಾರಣ ಭಾರತ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಈ ಸರಣಿ ಯುವ ಆಟಗಾರರ ಪಾಲಿಗೆ ಅತ್ಯುತ್ತಮ ಅವಕಾಶವಾಗಿದೆ. ಶ್ರೀಲಂಕಾಗೆ ತೆರಳಿರುವ ತಂಡದ ಕನಿಷ್ಠ ನಾಲ್ವರು ಬ್ಯಾಟ್ಸ್ಮನ್ಗಳು ಟಿ20 ವಿಶ್ವಕಪ್ಗೆ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಅನುಭವಿಗಳಿಗೂ ಸವಾಲು
ಲಂಕಾಗೆ ತೆರಳಿರುವ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವುದು ಖಚಿತ. ಆದರೆ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದು ಈ ಅನುಭವಿಗಳಿಗೂ ಸವಾಲಿನ ಕೆಲಸವಾಗಿರಲಿದೆ. ಒಂದು ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇರುವ ಕಾರಣ ತಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಾಬೀತುಪಡಿಸಿ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಸರಿಯಾದ ಸಮಯವಾಗಿದೆ.
ಟಿ20 ವಿಶ್ವಕಪ್ಗೆ ಮತ್ತಷ್ಟು ಆಯ್ಕೆಗಳು
ಬೌಲಿಂಗ್ ವಿಭಾಗದಲ್ಲಿ ಕೂಡ ಕೆಲ ಆಯ್ಕೆಗಳು ಈ ಸರಣಿಯಲ್ಲಿ ನಿರೀಕ್ಷಿಸಬಹುದಾಗಿದೆ. ಸ್ಪಿನ್ನರ್ಗಳಾಗಿ ಯುಜುವೇಂದ್ರ ಚಾಹಲ್ ಜೊತೆಗೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಮಿಸ್ಟ್ರಿ ಬೌಲರ್ ಖ್ಯಾತಿಯ ವರುಣ್ ಚಕ್ರವರ್ತಿ, ರಾಹುಲ್ ಚಹರ್ ಮೊದಲ ಅವಕಾಶದಲ್ಲಿ ಮಿಂಚಲು ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಕಾದಂತೆ ಕಂಡುಬರುತ್ತಿರುವ ಚಾಹಲ್ ಕೂಡ ತಮ್ಮ ಮೇಲಿನ ಭರವಸೆಯನ್ನು ಉಳಿಸಿಕೊಳ್ಳಬೇಕು. ವೇಗದ ಬೌಲರ್ಗಳಾದ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಮೂರನೇ ವೇಗಿಗಳಾಗಿ ಅವಕಾಶ ಪಡೆಯಲು ಪೈಪೋಟಿ ನಡೆಸಲಿದ್ದಾರೆ