ಟೀಮ್ ಇಂಡಿಯಾ ನ್ಯೂಸ್
ಟೀಮ್ ನ್ಯೂಸ್-ಟೀಮ್ ಇಂಡಿಯಾ: ಇಂದು ಸಂಜೆ ಮೋಡ ಕವಿದ ವಾತಾವರಣದ ಜೊತೆಗೆ ಇಂದೋರ್ನಲ್ಲಿ ಗುಡುಗು ಮಿಂಚಿನ ನಿರೀಕ್ಷೆಯಿದೆ. ಇದು ಪಂದ್ಯದ ಋಣಾತ್ಮಕ ಸುದ್ಧಿ. ಆದರೆ ಮಳೆಯ ಸಾಧ್ಯತೆ ತೀರಾ ಕಡಿಮೆಯಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ಕಳೆದ ಪಂದ್ಯದ ತಂಡವೇ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯಕ್ಕೂ ಕಣಕ್ಕಿಳಿಯಲಿದೆ.
ಟೀಮ್ ನ್ಯೂಸ್-ಶ್ರೀಲಂಕಾ
ಟೀಮ್ ಇಂಡಿಯಾ ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ನಿಂದ ಹೊರಬಿದ್ದ ಬಳಿಕ ಮತ್ತಷ್ಟು ಅದ್ಭುತವಾಗಿ ಆಟವನ್ನಾಡುತ್ತಿದೆ. ಆದರೆ ಶ್ರೀಲಂಕಾ ತಂಡದ ಪರಿಸ್ಥಿತಿ ವಿಭಿನ್ನವಾಗಿದೆ. ಕಳೆದ ಹಲವು ತಿಂಗಳಿನಿಂದ ಶ್ರೀಲಂಕಾ ತಂಡ ಗೆಲುವಿಗಾಗಿ ಪರಿತಪಿಸುವಂತಾಗಿದ್ದು ಭಾರತದ ವಿರುದ್ಧದ ಸರಣಿಯನ್ನು ಡ್ರಾ ಮಾಡಿಕೊಂಡರೂ ಲಂಕಾಗೆ ಬಹುದೊಡ್ಡ ಪ್ರೇರಣೆಯಾಗಲಿದೆ. ಹೀಗಾಗಿ ನಾಳಿನ ಪಂದ್ಯವೇ ಲಂಕಾಗೆ ಮಹತ್ವದ್ದಾಗಿದೆ.
ಭಾರತ vs ಶ್ರೀಲಂಕಾ ಟಿ20: ಮಳೆಗೆ ಅಹುತಿಯಾದ ಮೊದಲ ಪಂದ್ಯ
ಪಿಚ್ ರಿಪೋರ್ಟ್
ಇಂದೋರ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್ಮನ್ಗಳಿಗೆ ಸಹಕಾರಿಯಾಗುವಂತೆ ವರ್ತಿಸುತ್ತದೆ. ಹೀಗಾಗಿ ದೊಡ್ಡ ಮೊತ್ತದ ಪಂದ್ಯವನ್ನು ಇಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಂಡು ದೊಡ್ಡ ಮೊತ್ತ ಪೇರಿಸಿ ಎದುರಾಳಿಗೆ ಒತ್ತಡ ಹೇರುವ ತಂತ್ರವನ್ನು ಮಾಡುವುದು ಬಹುತೇಕ ನಿಶ್ಚಿತ. ಪಿಚ್ನ ವರ್ತನೆಯ ಕಾರಣದಿಂದಾಗಿಯೇ ಈ ಪಂದ್ಯದಲ್ಲೂ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ.
ಸಂಭಾವ್ಯ ತಂಡಗಳು
ಟೀಮ್ ಇಂಡಿಯಾ: ಶಿಖರ್ ಧವನ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ನವದೀಪ್ ಸೈನಿ
ಶ್ರೀಲಂಕಾ: ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಸಲ್ ಪೆರೆರಾ (ವಿಕೆಟ್ ಕೀಪರ್), ಓಷಾದಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ದಾಸುನ್ ಶನಕಾ, ಇಸುರು ಉದಾನ, ವನಿಂದು ಹಸರಂಗ, ಲಹೀರು ಕುಮಾರ, ಲಸಿತ್ ಮಾಲಿಂಗ