ಭಾರತದ ಬ್ಯಾಟ್ಸ್ಮನ್ಗಳ ಹೀನಾಯ ಪ್ರದರ್ಶನ
ನಾಯಕ ಶಿಖರ್ ಧವನ್, ಸಂಜು ಸ್ಯಾಮ್ಸನ್ ಸಹಿತ ಎಲ್ಲಾ ಬ್ಯಾಟ್ಸ್ಮನ್ಗಳು ಹೀನಾಯ ಪ್ರದರ್ಶನ ನೀಡಿದರು. ಕುಲ್ದೀಪ್ ಯಾದವ್ ಗಳಿಸಿದ 23 ರನ್ ಭಾರತದ ಪರವಾಗಿ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಉಳಿದಂತೆ ಭುವನೇಶ್ವರ್ ಕುಮಾರ್ ಹಾಗೂ ಋತುರಾಜ್ ಗಾಯಕ್ವಾಡ್ ಮಾತ್ರವೇ ಎರಡಂಕಿ ಮೊತ್ತವನ್ನು ಗಳಿಸಲು ಯಶಸ್ವಿಯಾಗಿದ್ದರು.
ಸುಲಭವಾಗಿ ಗೆದ್ದ ಲಂಕಾ
ಇನ್ನು ಭಾರತ ನೀಡಿದ ಈ ಸುಲಭ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪಿದೆ. ಶ್ರೀಲಂಕಾ ಇನ್ನೂ 33 ಎಸೆತಗಳು ಬಾಕಿಯಿರುವಂತೆಯೇ ಪಂದ್ಯವನ್ನು ಗೆದ್ದು ಬೀಗಿದೆ. ಭಾರತೀಯ ಬೌಲರ್ಗಳು ಉತ್ತಮ ದಾಳಿ ಸಂಘಟಿಸಿದರಾದರೂ ಸಣ್ಣ ಗುರಿ ಶ್ರೀಲಂಕಾ ಮುಂದಿದ್ದರಿಂದ ಅನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ.
ಟಿ20 ಸರಣಿ ಸೋತ ಭಾರತ
ಭಾರತದ ಪರವಾಗಿ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಕಬಳಿಸಿದರೆ ವರುಣ್ ಚಕ್ರವರ್ತಿ ಕುಲ್ದೀಪ್ ಯಾದವ್ ಹಾಗೂ ಮೊದಲ ಪಂದ್ಯವನ್ನಾಡಿದ ಸಂದೀಪ್ ವಾರಿಯರ್ ತಲಾ ಎರಡು ವಿಕೆಟ್ ಕಬಳಿಸಿದರು. ಈ ಫಲಿತಾಂಶದ ಮೂಲಕ ಭಾರತ ಸುದೀರ್ಘ ಕಾಲದ ಬಳಿಕ ಟಿ20 ಸರಣಿಯನ್ನು ಎದುರಾಳಿಗೆ ಬಿಟ್ಟುಕೊಟ್ಟಂತಾಗಿದೆ.
ಭಾರತ ತಂಡಕ್ಕೆ ದುಬಾರಿಯಾದ ಕೊರೊನಾವೈರಸ್
ಇನ್ನು ಈ ಸರಣಿಯಲ್ಲಿ ಭಾರತ ತಂಡಕ್ಕೆ ಕೊರೊನಾವೈರಸ್ ದೊಡ್ಡ ಹಾನಿಯನ್ನುಂಟು ಮಾಡಿತ್ತು. ಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ 7 ಮಂದಿ ಆಟಗಾರರು ಅಂತಿಮ ಎರಡು ಪಂದ್ಯಗಳಿಗೆ ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಟೀಮ್ ಇಂಡಿಯಾದ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೊರೊನಾವೈರಸ್ಗೆ ತುತ್ತಾಗಿದ್ದ ಪರಿಣಾಮವಾಗಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆಟಗಾರರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತು. ಹಿಗಾಗಿ ಟೀಮ್ ಇಂಡಿಯಾ ಬಹುತೇಕ ಹೊಸ ಆಟಗಾರರೊಂದಿಗೆ ಕಣಕ್ಕಿಳಿದಿತ್ತು.