ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಸರಣಿ ಭಾರತದ ಪಾಲಿಗೆ ಹೆಚ್ಚು ಮಹತ್ವ ಯಾಕೆ ಗೊತ್ತಾ!

India vs Sri Lanka: 4 reasons for why this Limited over series very important for india

ಶ್ರೀಲಂಕಾ ವಿರುದ್ಧ ಭಾರತ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗುತ್ತಿದೆ. ಆದರೆ ಈ ಪ್ರವಾಸ ಭಾರತದ ಪಾಲಿಗೆ ಬಹಳ ವಿಶೇಷ. ಯಾಕೆಂದರೆ ಭಾರತದ ಒಂದು ತಂಡ ಇಂಗ್ಲೆಂಡ್‌ನಲ್ಲಿರುವಂತೆಯೇ ಇನ್ನೊಂದು ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಭಾರತ ಕಳುಹಿಸಿದೆ. ವೈಟ್‌ಬಾಲ್ ಸ್ಪೆಶಲಿಸ್ಟ್‌ಗಳು ಹಾಗೂ ಯುವ ಆಟಗಾರರನ್ನೇ ತುಂಬಿರುವ ಈ ತಂಡದ ಮೇಲೆ
ಹೆಚ್ಚಿನ ನಿರೀಕ್ಷೆಯಿದೆ.

ಇತ್ತೀಚಿನ ದಿನಗಳಲ್ಲಿ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಕಾಲಿಡಲು ಸಾಕಷ್ಟು ಯುವ ಪ್ರತಿಭಾವಂತ ಆಟಗಾರರು ಪ್ರಯತ್ನಿಸುತ್ತಿದ್ದಾರೆ. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಂತಾ ವೇದಿಕೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು ಎಲ್ಲಾ ಪ್ರತಿಭಾವಂತರಿಗೂ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ. ಈ ಪ್ರವಾಸ ಅಂತಾ ಹೆಚ್ಚಿನ ಪ್ರತಿಭಾವಂತರಿಗೆ ಅವಕಾಶವನ್ನು ಒದಗಿಸುತ್ತಿದೆ.

ಒಲಿಂಪಿಕ್ಸ್‌ ಹತ್ತಿರದಲ್ಲಿರುವಾಗಲೇ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆಒಲಿಂಪಿಕ್ಸ್‌ ಹತ್ತಿರದಲ್ಲಿರುವಾಗಲೇ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಯುವ ಆಟಗಾರರ ಸಾಮರ್ಥ್ಯ ಪರೀಕ್ಷೆ

ಯುವ ಆಟಗಾರರ ಸಾಮರ್ಥ್ಯ ಪರೀಕ್ಷೆ

ಶ್ರೀಲಂಕಾಗೆ ತೆರಳುವ ಈ ತಂಡದಲ್ಲಿ ಬಹುತೇಕ ಯುವ ಆಟಗಾರರೇ ತುಂಬಿದ್ದಾರೆ. ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ 20 ಆಟಗಾರರ ಪೈಕಿ 14 ಮಂದಿ ಈ ಹಿಂದೆ ಭಾರತ ತಂಡವನ್ನು ಪ್ರತಿನಿಧಿಸಿರುವ ಅನುಭವ ಹೊಂದಿದ್ದರೆ ಉಳಿದ ಆಟಗಾರರು ಮೊದಲ ಬಾರಿಗೆ ಭಾರತ ತಂಡದ ಕರೆಯನ್ನು ಸ್ವೀಕರಿಸಿದ್ದಾರೆ. ಟೀಮ್ ಇಂಡಿಯಾವನ್ನು ಈ ಹಿಂದೆ ಪ್ರತಿನಿಧಿಸಿದ್ದರೂ ಕೆಲ ಆಟಗಾರರನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ಹೆಚ್ಚಿನ ಪಂದ್ಯಗಳ ಅನುಭವವನ್ನು ಹೊಂದಿಲ್ಲ. ಹೀಗಾಗಿ ಒತ್ತಡದ ಸಂದರ್ಭದಲ್ಲಿ ಈ ಎಲ್ಲಾ ಆಟಗಾರರು ತಂಡವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದು ಬಹಳ ಮುಖ್ಯವಾಗಿದೆ. ಈ ಮೂಲಕ ತಂಡದ ಬೆಂಚ್ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದಂತಾಗುತ್ತದೆ.

'ಬಿ' ತಂಡ ಹಣೆಪಟ್ಟಿಯನ್ನು ಕಳಚಬೇಕಿದೆ

'ಬಿ' ತಂಡ ಹಣೆಪಟ್ಟಿಯನ್ನು ಕಳಚಬೇಕಿದೆ

ಇನ್ನು ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಶಿಖರ್ ಧವನ್ ನೇತೃತ್ವದ ತಂಡವನ್ನು ಬಿಸಿಸಿಐ ಕಳುಹಿಸಿದ ನಂತರ ಶ್ರೀಲಂಕಾ ಕ್ರಿಕೆಟ್ ತಂಡದ ಕೆಲ ಮಾಜಿ ಆಟಗಾರರು ಭಾರತ ತಂಡದ ಬಗ್ಗೆ ಟೀಕೆಯನ್ನು ಮಾಡಿದ್ದಾರೆ. ಅದರಲ್ಲೂ ಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಭಾರತ ತಂಡವನ್ನು ಬಿ ತಂಡ ಎಂದಿದ್ದಾರೆ. ಹೀಗಾಗಿ ಶ್ರೀಲಂಕಾ ತಂಡದ ವಿರುದ್ಧ ಭಾರತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಜಗಜ್ಜಾಹೀರುಗಿಳಿಸಬೇಕಿದೆ. ಈ ದೃಷ್ಟಿಕೋನದಿಂದಲೂ ಭಾರತಕ್ಕೆ ಈ ಪ್ರವಾಸ ಪ್ರಮುಖವಾಗಿದೆ.

ಬಿಸಿಸಿಐಗೂ ಇದು ಸವಾಲು

ಬಿಸಿಸಿಐಗೂ ಇದು ಸವಾಲು

ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತದ ಯುವ ಆಟಗಾರರ ಸಾಮರ್ಥ್ಯದ ಮೇಲೆ ಭರವಸೆಯಿಟ್ಟು ಈ ಸವಾಲನ್ನು ಸ್ವೀಕರಿಸಿದೆ. ಈ ಹಿಂದೆ ಯಾವುದೇ ತಂಡದಿಂದ ಸಾಧ್ಯವಾಗದ ಪ್ರಯತ್ನ ಇದಾಗಿದೆ. ಈಗಾಗಲೇ ಆರ್ಥಿಕವಾಗಿ ಅತ್ಯಂತ ಬಲಾಢ್ಯ ಎನಿಸಿರುವ ಬಿಸಿಸಿಐ ಪ್ರತಿಬೆಯ ವಿಚಾರದಲ್ಲೂ ತಾನು ಬಲಿಷ್ಟ ಎಂಬುದನ್ನು ಸಾಬೀತುಪಡಿಸಲು ಈ ಪ್ರವಾಸವನ್ನು ಮಹತ್ವದ ವೇದಿಕೆಯಾಗಿ ಬಳಸಿಕೊಳ್ಳಲಿದೆ.

ಇದು ದ್ರಾವಿಡ್ ಪಾಲಿಗೆ ದೊಡ್ಡ ಅಗ್ನಿ ಪರೀಕ್ಷೆ | Oneindia Kannada
ಸನಿಹದಲ್ಲಿದೆ ಟಿ20 ವಿಶ್ವಕಪ್‌

ಸನಿಹದಲ್ಲಿದೆ ಟಿ20 ವಿಶ್ವಕಪ್‌

ಇನ್ನು ಮತ್ತೊಂದು ಮಹತ್ವದ ಸಂಗತಿಯೆಂದರೆ ಇನ್ನೇನು ಕೆಲವೇ ತಿಂಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಕೆಲ ಪ್ರತಿಭಾವಂತ ಆಟಗಾರರು ತಮ್ಮ ಸಾಮರ್ಥ್ಯವನ್ನು ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಂತಾ ವೇದಿಕೆಯಲ್ಲಿ ಸಾಬೀತುಪಡಿಸಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ. ಹೀಗಾಗಿ ಕೆಲ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸುವ ಮೂಲಕ ವಿಶ್ವಕಪ್‌ನ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಯುವ ಆಟಗಾರರು ಮಾತ್ರವಲ್ಲದೆ ನಾಯಕ ಶಿಖರ್ ಧವನ್, ಮನೀಶ್ ಪಾಂಡೆ ಕುಲ್‌ದೀಪ್‌ ಯಾದವ್‌ರಂತಾ ಆಟಗಾರರಿಗೂ ಈ ಪ್ರವಾಸ ವಿಶ್ವಕಪ್ ದೃಷ್ಟಿಯಿಂದ ಮಹತ್ವದ್ದಾಗಲಿದೆ.

Story first published: Friday, July 9, 2021, 13:55 [IST]
Other articles published on Jul 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X