ಸ್ವತಃ ನಾಯಕ ಧವನ್ ಅಲಭ್ಯ
ಇನ್ನು ಸ್ವತಃ ನಾಯಕ ಶಿಖರ್ ಧವನ್ ಅಂತಿಮ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅಸಾಧ್ಯವಾಗಿರುವ ಕಾರಣ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಅನಿವಾರ್ಯವಾಗಿದೆ. ಟೀಮ್ ಇಂಡಿಯಾದ ಅನುಭವು ವೇಗಿ ಭುವನೇಶ್ವರ್ ಕುಮಾರ್ಗೆ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ದೊರೆಯುವ ಸಾಧ್ಯತೆಯಿದೆ.
ಉಪನಾಯಕನ ಜವಾಬ್ಧಾರಿ ನಿರ್ವಹಿಸಿರುವ ಭುವಿ
ಶ್ರೀಲಂಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ನಾಯಕನಾಗಿ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಉಪನಾಯಕನಾಗಿ ಹೆಸರಿಸಲಾಗಿತ್ತು. ಈಗ ಅಂತಿಮ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಭುವಿ ಪಾಲಿಗೆ ದೊರೆಯುವ ಸಾಧ್ಯತೆಯಿದೆ. ಈ ಎರಡು ಪಂದ್ಯಗಳು ಕೂಡ ಭಾರತದ ಪಾಲಿಗೆ ಅತ್ಯಂತ ಸವಾಲಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಟೀಮ್ ಇಂಡಿಯಾದಲ್ಲಿ ಇಲ್ಲ ಆಯ್ಕೆಗಳು
ಕೊರೊನಾ ವೈರಸ್ಗೆ ತುತ್ತಾಗಿರುವ ಕೃನಾಲ್ ಪಾಂಡ್ಯ ಸೇರಿದಂತೆ 9 ಮಂದಿ ಆಟಗಾರರು ಆಡಲಿಳಿಯುವುದು ಅಸಾಧ್ಯವಾಗಿರುವ ಕಾರಣ ಭಾರತೀಯ ತಂಡದಲ್ಲಿ ಆಡಲು ಈಗ ಆಯ್ಕೆಗಳು ಉಳಿದಿಲ್ಲ. ತಂಡದಲ್ಲಿ ಈಗ ಒಟ್ಟು 11 ಆಟಗಾರರು ಉಳಿದುಕೊಂಡಿದ್ದಾರೆ. ಹೀಗಾಗಿ ಈ ಯುವ ಆಟಗಾರರ ಬಳಗ ಲಂಕಾ ವಿರುದ್ಧದ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಆಡಲು ಲಭ್ಯವಿರುವ ಆಟಗಾರರ ಪಟ್ಟಿ
ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ, ಸಂಜು ಸ್ಯಾಮ್ಸನ್, ರಾಹುಲ್ ಚಹರ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ವರುಣ್ ಚಕ್ರವರ್ತಿ, ಚೇತನ್ ಸಕರಿಯಾ ಮತ್ತು ನವದೀಪ್ ಸೈನಿ ಟೀಮ್ ಇಂಡಿಯಾದಲ್ಲಿ ಲಭ್ಯವಿರುವ ಆಟಗಾರರು ಎನ್ನಲಾಗಿದೆ. ಇವರನ್ನು ಹೊರತಪಡಿಸಿ ಇಶಾನ್ ಪೊರೆಲ್, ಸಂದೀಪ್ ವಾರಿಯರ್ ಮತ್ತು ಸಾಯಿ ಕಿಶೋರ್ ನೆಟ್ ಬೌಲರ್ಗಳಾಗಿ ತಂಡದಲ್ಲಿದ್ದಾರೆ.