ಭಾನುಕಾ ರಾಜಪಕ್ಸ
ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 65 ರನ್ ಗಳಿಸಿ ಲಂಕಾ ಗೆಲುವಿಗೆ ಕಾರಣವಾಗಿದ್ದ ಭಾನುಕಾ ರಾಜಪಕ್ಸ ಅದೇ ಪಂದ್ಯದಲ್ಲಿ ಗಾಯಗೊಂಡಿದ್ದರು. ಹಾರ್ದಿಕ್ ಪಾಂಡ್ಯ ಎಸೆದ ಚೆಂಡು ರಾಜಪಕ್ಸ ಬೆರಳಿಗೆ ತಾಗಿದ್ದು ಈ ಕಾರಣದಿಂದಾಗಿ ರಾಜಪಕ್ಸ ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ಸ್ಲ್ಯಾನಿಂಗ್ನಲ್ಲಿ ಭಾನುಕಾ ಬೆರಳಿಗೆ ತೀವ್ರ ಏಟಾಗಿರುವುದು ಗೊತ್ತಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಕೂಡ ಭಾನುಕಾ ರಾಜಪಕ್ಸ ಆಡಲು ಇಳಿದಿರಲಿಲ್ಲ.
ಯುವ ಆಟಗಾರ ಚರಿತ ಅಲಸಂಕ
24ರ ಹರೆಯದ ಚರಿತ ಅಲಸಂಕ ಶ್ರೀಲಂಕಾ ಪಾಲಿಗೆ ಈ ಸರಣಿಯಲ್ಲಿ ಸಿಕ್ಕ ಪ್ರತಿಭಾವಂತ ಕ್ರಿಕೆಟಿಗ. ಆದರೆ ಮೊದಲ ಟಿ20 ಪಂದ್ಯದ ವೇಳೆ ಮಂಡಿರಜ್ಜು ಗಾಯದಿಂದ ಬಳಲಿದ ಚರಿತ ಅಲಸಂಕ ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲು ಆಡಲಿಳಿಯುವುದು ಅನುಮಾನವಾಗಿದೆ. ಮೊದಲ ಟಿ20 ಪಂದ್ಯದಲ್ಲಿ 44 ರನ್ ಬಾರಿಸಿ ಲಂಕಾ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಏಕದಿನ ಸರಣಿಯಲ್ಲಿ ಲಂಕಾ ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ನೆಟ್ ಅಭ್ಯಾಸದಲ್ಲಿ ಗಾಯಗೊಂಡ ಪತುಮ್ ನಿಸ್ಸಂಕ
ಇನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಮತ್ತೋರ್ವ ಬ್ಯಾಟ್ಸ್ಮನ್ ಪತುಮ್ ನಿಸ್ಸಂಕ ಕೂಡ ನೆಟ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಕೈಗೆ ಚೆಂಡು ಬಡಿದಿದ್ದು ಅವರ ಸ್ಕ್ಯಾನ್ ವರದಿಗಾಗಿ ತಂಡ ಕಾಯುತ್ತಿದೆ. ಮಂಗಳವಾರ ಭಾರತದ ವಿರುದ್ಧದ ಪಂದ್ಯದಲ್ಲಿ ಇವರು ಕೂಡ ಕಣಕ್ಕಿಳಿಯುವುವುದು ಅನುಮಾನವಾಗಿದೆ.