ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಕೊರೊನಾವೈರಸ್ನ ಕಾರಣದಿಂದಾಗಿ ಮುಂದೂಡಿಕೆಯಾಗಿದೆ. ಭಾರತೀಯ ತಂಡದ ಕೃನಾಲ್ ಪಾಂಡ್ಯ ಕೊರೊನಾವೈರಸ್ಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರಣಿಯನ್ನು ಮುಂದೂಡಲಾಗಿದೆ. ಆದರೆ ಈ ಕೊರೊನಾವೈರಸ್ ಪ್ರಕರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ಯೋಜನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಕೊರೊನಾವೈರಸ್ಗೆ ತುತ್ತಾಗಿರುವ ಕೃನಾಲ್ ಪಾಂಡ್ಯ ಅವರಲ್ಲದೆ ಭಾರತೀಯ ತಂಡದ 8 ಸದಸ್ಯರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕವಾಗಿರಿಸಲಾಗಿದೆ. ಇವರೆಲ್ಲರ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಹಾರಲು ಸಜ್ಜಾಗಿರುವ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಪ್ರವಾಸಕ್ಕೆ ಈ ಬೆಳವಣಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಭಾರತ vs ಶ್ರೀಲಂಕಾ: ಕೃನಾಲ್ ಪಾಂಡ್ಯಗೆ ಕೋವಿಡ್-19 ಸೋಂಕು
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಯ್ಕೆಯಾಗಿದ್ದ ಭಾರತ ತಂಡದ ಶುಬ್ಮನ್ ಗಿಲ್ ಹಾಗೂ ವಾಶಿಂಗ್ಟನ್ ಸುಂದರ್ ಸರಣಿಯ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದು ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಇಬ್ಬರ ಸ್ಥಾನಕ್ಕೆ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಹೆಸರಿಸಲಾಗಿತ್ತು. ಲಂಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡ ನಂತರ ಈ ಇಬ್ಬರು ಕೂಡ ನೇರವಾಗಿ ಇಂಗ್ಲೆಂಡ್ಗೆ ಹಾರಬೇಕಾಗಿತ್ತು. ಕೋವಿಡ್ 19 ಪ್ರಕರಣದಿಂದಾಗಿ ಈ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುಕೊಳ್ಳುವ ಸಂದರ್ಭ ಬಂದರೂ ಅಚ್ಚರಿಯಿಲ್ಲ.
ಈ ಬಗ್ಗೆ ಬಿಸಿಸಿಐ ಮೂಲಗಳು ಪ್ರತಿಕ್ರಿಯೆ ನೀಡಿದ್ದು ಎಲ್ಲವೂ ನಿಗದಿಯಂತೆಯೇ ನಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಈ ದಿನ ತಡವಾಗಿ ಕೊರೊನಾವೈರಸ್ನ ವರದಿ ಬರಲಿದ್ದು ಅದು ಬರುವವರೆಗೂ ನಾವು ಕಾಯಲೇಬೇಕಿದೆ. ಎಲ್ಲರೂ ನೆಗೆಟಿವ್ ವರದಿಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಅದಾದ ನಂತರ ಟಿ20 ಸರಣಿಯ ಉಳಿದ ಪಂದ್ಯಗಳು ಹಾಗೂ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಪ್ರಯಾಣ ನಿಗದಿಯಂತೆಯೇ ನಡೆಯಲಿದೆ" ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಂತೆ ಟೋಕಿಯೋ ಒಲಿಂಪಿಕ್ಸ್ ಸ್ಟೇಡಿಯಂನಲ್ಲೂ ನಕಲಿ ಸೌಂಡ್!
ಆದರೆ ಇಂಗ್ಲೆಂಡ್ಗೆ ತೆರಳಲಿರುವ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಪ್ರವಾಸ ಕೈಗೊಳ್ಳುವ ಮುನ್ನ ಕೆಲ ದಿನಗಳ ಕಾಲ ಐಸೋಲೇಶನ್ನಲ್ಲಿ ಇರಬೇಕಾಗುತ್ತದೆ. ಹಾಗೂ ಇಂಗ್ಲೆಂಡ್ನಲ್ಲಿಯೂ 10 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಬೇಕಾಗುವ ಸಾಧ್ಯತೆಯಿದೆ.