ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯುತ್ತಾ? ಯಾವಾಗ?
ಮಂಗಳವಾರ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟ್ವೆಂಟಿ ಪಂದ್ಯವನ್ನು ಬುಧವಾರ ರಾತ್ರಿ ನಡೆಸಲಾಗುವುದು ಎಂಬ ಸುದ್ದಿ ಇದೆ. ಹಾಗೂ ಮೂರನೇ ಟಿ ಟ್ವೆಂಟಿ ಪಂದ್ಯವನ್ನು ಗುರುವಾರ ರಾತ್ರಿ ನಡೆಸಲಾಗುವುದು ಎಂಬ ಸುದ್ದಿಯೂ ಹರಿದಾಡುತ್ತಿದೆ. ಹೀಗಾಗಿ ಎರಡು ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳ ನಡುವೆ ದಿನದ ಅಂತರ ಇರುವುದಿಲ್ಲ.
ಭಾರತದ 9 ಆಟಗಾರರು ಟೂರ್ನಿಯಿಂದ ಹೊರಕ್ಕೆ!
ಇದೀಗ ಹೆಚ್ಚಾಗಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ 8 ಆಟಗಾರರನ್ನು ಐಸೋಲೇಷನ್ ಮಾಡಿದ್ದರೂ ಸಹ ಅವರಿಗೆ 2 ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎನ್ನಲಾಗುತ್ತಿದೆ. ಟೀಮ್ ಇಂಡಿಯಾದ ಆಟಗಾರರಾದ ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಕೃಷ್ಣಪ್ಪ ಗೌತಮ್, ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶಾನ್ ಸೇರಿದಂತೆ ಇನ್ನೂ ಕೆಲ ಆಟಗಾರರಿಗೆ ಮುಂದಿನ ಪಂದ್ಯಗಳನ್ನು ಆಡಲು ಅವಕಾಶ ಇಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೃನಾಲ್ ಪಾಂಡ್ಯ ಸೇರಿ ಒಟ್ಟು 9 ಭಾರತೀಯ ಕ್ರಿಕೆಟಿಗರು ಟಿ ಟ್ವೆಂಟಿ ಸರಣಿಯಿಂದ ಹೊರ ಉಳಿಯಲಿದ್ದಾರೆ ಎನ್ನಲಾಗ್ತಿದೆ.ಶಿಖರ್ ಧವನ್ ಕೂಡ ಸರಣಿಯಿಂದ ಹೊರ ಬೀಳಲಿದ್ದಾರೆ ಎನ್ನಲಾಗುತ್ತಿದ್ದು ಪರ್ಯಾಯ ನಾಯಕನ ನೇಮಕವಾಗಬಹುದು.
ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ ಎಲ್ಲಾ ಆಟಗಾರರ ಕೊರೊನಾ ರಿಪೋರ್ಟ್ ನೆಗೆಟಿವ್
ಕೊರೊನಾ ಸೊಂಕು ತಗುಲಿದ್ದ ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ ಭಾರತದ 8 ಆಟಗಾರರ ಕೊರೊನಾಸೋಂಕು ರಿಪೋರ್ಟ್ ನೆಗೆಟಿವ್ ಬಂದಿದೆ. ಈ ಎಲ್ಲ ಆಟಗಾರರ ವರದಿ ನೆಗೆಟಿವ್ ಬಂದಿದ್ದರೂ ಸಹ ಐಸೋಲೇಶನ್ನಿಂದ ಮುಕ್ತಿ ಮಾತ್ರ ಸಿಕ್ಕಿಲ್ಲ.
20 ಆಟಗಾರರ ತಂಡವಾದ್ದರಿಂದ ಸಮಸ್ಯೆಯಿಲ್ಲ
ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಒಟ್ಟು 20 ಆಟಗಾರರಿದ್ದಾರೆ. ಹೀಗಾಗಿ ಕೆಲ ಆಟಗಾರರನ್ನು ಐಸೋಲೇಷನ್ ಮಾಡಿದರೂ ಸಹ ಉಳಿದ ಆಟಗಾರರನ್ನು ಬಳಸಿ ಸರಣಿ ಮುಂದುವರಿಸಬಹುದುಸಮಸ್ಯೆಯಿಲ್ಲ ಎಂಬ ಮಾತುಗಳು ಸಹ ಹರಿದಾಡುತ್ತಿವೆ.