ಚೆನ್ನೈನ ಎಂಎ ಚಿದಂಬರ್ಂ ಸ್ಟೇಡಿಯಮ್ನಲ್ಲಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟೀಮ್ ಇಂಡಿಯಾವನ್ನು 8 ವಿಕೆಟ್ಗಳಿಂದ ಸೋಲಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವನ್ನು ಸಾಧಿಸಿ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಭಾರತ ತನ್ನ ಮೊದಲ ಪ್ರಮುಖ ಮೂರು ವಿಕೆಟ್ಗಳು ಆರಂಭದಲ್ಲೇ ಕಳೆದು ಕೊಂಡು ಆಘಾತಕ್ಕೆ ಒಳಗಾಯಿತು, ಆದರೆ ಬಳಿಕ ಚೇತರಿಕೊಂಡು ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.
ಕೆಎಲ್ ರಾಹುಲ್, ವಿರಾಟ್ ಕೋಹ್ಲಿ ಒಂದೇ ಓವರ್ನಲ್ಲಿ ವಿಂಡೀಸ್ ವೇಗಿ ಕಾಟ್ರೆಲ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತಕ್ಕೆ ದೊಡ್ಡ ಆಘಾತವನ್ನು ನೀಡಿದರು. ಬಳಿಕ ರೋಹಿತ್ ಶರ್ಮಾ ದೊಡ್ಡ ಮೊತ್ತದ ಭರವಸೆಯನ್ನು ನೀಡಿದರಾದರು 36 ರನ್ ಗಳಿಸಿ ಔಟಾದರು. ಹೀಗೆ ಭಾರತ 80 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು.
ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಉತ್ತಮ ಪೇರಿಸುವಲ್ಲಿ ಕಾರಣರಾದರು. ಇಬ್ಬರೂ ಶ್ರೇಯಸ್ ಅಯ್ಯರ್ 70 ರನ್ ಬಾರಿಸಿದರೆ ರಿಷಬ್ ಪಂತ್ 71 ರನ್ ಗಳಿಸಿ ಔಟಾದರು. ಬಳಿಕ ಬಂದ ಕೇದಾರ್ ಜಾದವ್ 40 ರನ್ ಬಾರಿಸಿ ತಂಡಕ್ಕೆ ಕೊಡುಗೆ ನೀಡದರು. ಅಂತಿಮವಾಗಿ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 288 ರನ್ ಬಾರಿಸಿದೆ
ಪಂದ್ಯದ ಸ್ಕೋರ್ ಹೀಗಿದೆ;
ಟಿ20 ಸರಣಿಯನ್ನು 2-1ರಿಂದ ಕಳೆದುಕೊಂಡಿರುವ ವೆಸ್ಟ್ಇಂಡೀಸ್ ತಂಡ ಏಕದಿನ ಸರಣಿಯಲ್ಲಾದರೂ ಗೆಲ್ಲಲೇ ಬೇಕು ಎಂಬ ಒತ್ತಡದದಲ್ಲಿದೆ. ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ XI; ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI ಶಯ್ ಹೋಪ್ (ವಿಕೆಟ್ ಕೀಪರ್), ಸುನಿಲ್ ಆಂಬ್ರಿಸ್, ಶಿಮ್ರಾನ್ ಹೆಟ್ಮೇರ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಕೀರನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಕೀಮೋ ಪಾಲ್, ಹೇಡನ್ ವಾಲ್ಷ್, ಅಲ್ಜಾರಿ ಜೋಸೆಫ್, ಶೆಲ್ಡನ್ ಕಾಟ್ರೆಲ್