ಬೌಲಿಂಗ್ ದಾಳಿ
ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೇಗನೆ ವಿಕೆಟ್ ಕಳೆದು ಬ್ಯಾಟಿಂಗ್ ವೈಫಲ್ಯ ತೋರಿಸಿತಾದರೂ, ಭಾರತದ ಇನ್ನಿಂಗ್ಸ್ ವೇಳೆ ಆ ಸಿಟ್ಟನ್ನು ತೀರಿಸಿಕೊಂಡಿತ್ತು. ನಾಯಕ ಕಾರ್ಲೋಸ್ ಕಾರ್ಲೋಸ್ ಬ್ರಾಥ್ವೈಟ್ 2, ಒಶಾನೆ ಥೋಮಸ್ 2, ಖೇರಿ ಪಿಯರೆ 1 ವಿಕೆಟ್ ಉರುಳಿಸಿ ಬೌಲಿಂಗ್ ದಾಳಿ ಪ್ರದರ್ಶಿಸಿದ್ದರು. ಆದರೆ ಭಾರತ ಪರ ಕುಲದೀಪ್ ದಾಳಿ ತಂಡದ ಗೆಲುವಿನಲ್ಲಿ ಪರಿಣಾಮ ಬೀರಿತ್ತು.
ಪೆವಿಲಿಯನ್ಗೆ ದಾರಿ ತೋರಿಸಿದ್ದರು
ಟಿ20ಗೆ ನೆರವಾಗುವ ಬೌಲಿಂಗ್ ದಾಳಿಯನ್ನು ವಿಂಡೀಸ್ ಮಾಡಬಲ್ಲದು ಎನ್ನುವುದಕ್ಕೆ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ (6), ಶಿಖರ್ ಧವನ್ (3), ಕೆಎಲ್ ರಾಹುಲ್ (16), ರಿಷಬ್ ಪಂತ್ (1) ಅವರನ್ನು ಪೆವಿಲಿಯನ್ ಗೆ ಅಟ್ಟಿದ್ದೇ ಉದಾಹರಣೆಯಿದೆ. ಇತ್ತ ಕೀರನ್ ಪೊಲಾರ್ಡ್ ಕೂಡ ಹೆಚ್ಚುಕಾಲ ಕ್ರೀಸ್ನಲ್ಲಿ ನಿಲ್ಲದಿದ್ದುದು ಭಾರತಕ್ಕೆ ಅನುಕೂಲವೆನಿಸಿತ್ತು.
ಅಪಾಯಕಾರಿ ಆಟಗಾರರ ಬಣ
ಒಂದುವೇಳೆ ಪೊಲಾರ್ಡ್, ಶೈ ಹೋಪ್, ಶಿಮ್ರಾನ್ ಹೆಟ್ಮೇಯರ್ ನಿಂತಿದ್ದರೆ ಪಂದ್ಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿತ್ತು. ಟಿ20 ತಂಡಕ್ಕೆ ಪೊಲಾರ್ಡ್ ಸೇರ್ಪಡೆಗೊಂಡಿದ್ದೇ ಆತ ವಿಂಡೀಸ್ ಹಿಟ್ಮ್ಯಾನ್ ಎನ್ನುವ ಕಾರಣಕ್ಕೆ. ಒಟ್ಟಿನಲ್ಲಿ ದ್ವಿತೀಯ ಪಂದ್ಯವನ್ನು ಭಾರತ ಎಚ್ಚರಿಕೆಯಿಂದ ಆಡಬೇಕಿದೆ.
ಸಂಭಾವ್ಯ ಭಾರತ XI
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಉಮೇಶ್ ಯಾದವ್.