ಬೆಂಗಾಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ಆಲ್ರೌಂಡರ್ ಆಟಗಾರ ಶಹಬಾಜ್ ಅಹ್ಮದ್ ಇದೇ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಶಹಬಾಜ್ ಅಹ್ಮದ್ ವಾಶಿಂಗ್ಟನ್ ಸುಂದರ್ ಬದಲಿಗೆ ಆಯ್ಕೆಯಾಗಿದ್ದಾರೆ. ಈ ಅವಕಾಶ ಪಡೆದ ಬಗ್ಗೆ ಸ್ವತಃ ಯುವ ಆಲ್ರೌಂಡರ್ ಪ್ರತಿಕ್ರಿಯಿಸಿದ್ದು ತಮ್ಮ ಕನಸು ನನಸಾಗಿದೆ ಎಂದಿದ್ದಾರೆ.
ಬಂಗಾಳದ ಕ್ರಿಕೆಟ್ ಅಸೊಸಿಯೇಶನ್ನ ಹೇಳಿಕೆಯಲ್ಲಿ ಶಹಬಾಜ್ ಅಹ್ಮದ್ "ಕ್ರಿಕೆಟ್ ಆಡುವ ಪ್ರತಿಯೊಬ್ಬರೂ ಭಾರತ ತಂಡವನ್ನು ಪ್ರತಿನಿಧಿಸಲು ಬಯಸುತ್ತಾರೆ. ಭಾರತ ತಂಡದಲ್ಲಿ ಆಡುವ ಕನಸು ನನಸಾಗಿದೆ. ನಾನು ಬಂಗಾಳಕ್ಕಾಗಿ ಆಡಿದಾಗಲೆಲ್ಲಾ ನಾನು ನನ್ನ ಸಂಪೂರ್ಣ ಶ್ರಮವನ್ನು ನೀಡಿದ್ದೇನೆ. ಬಂಗಾಳ ತಂಡವು ನನ್ನ ಮೇಲೆ ನಂಬಿಕೆ ಇಟ್ಟಿದ್ದು ಅದರಿಂದಲೇ ಅವಕಾಶ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ನಿಂದ ನಾನು ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲೆ. ತಂಡ ನನ್ನ ಮೇಲೆ ವಿಶ್ವಾಸವನ್ನು ಇರಿಸುವ ನಂಬಿಕೆಯಿದೆ" ಎಂದಿದ್ದಾರೆ ಶಹಬಾಜ್ ಅಹ್ಮದ್.
ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?
ಆರಂಭದಲ್ಲಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ವಾಶಿಂಗ್ಟನ್ ಸುಂದರ್ ಭುಜದ ನೋವಿಗೆ ಒಳಗಾದ ಕಾರಣ ಸರಣಿಯಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಅವರ ಬದಲಿಗೆ ಶಹಬಾಜ್ ಅವರನ್ನು ಆಗಸ್ಟ್ 16ರಂದು ಹೆಸರಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಯುವ ಕ್ರಿಕೆಟಿಗನಿಗೆ ಇದು ಭಾರತ ತಂಡದಿಂದ ಚೊಚ್ಚಲ ಕರೆಯೆಂಬುದು ವಿಶೇಷ. ಅವರು ಎಡಗೈ ಸ್ಪಿನ್ನರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ.
ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುತ್ತಿರುವ ಶಹಬಾಜ್ ಅಹ್ಮದ್ 2020ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಅವಕಾಶವನ್ನು ಪಡೆದುಕೊಂಡರು. ಇದಕ್ಕೂ ಮುನ್ನ 2018ರಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಪ್ರಥಮ ಬಾರಿಗೆ ಅವಕಾಶವನ್ನು ಪಡೆದುಕೊಂಡಿದ್ದರು. ಅವರು ಈಗ 18 ಪ್ರಥಮ ದರ್ಜೆ ಪಂದ್ಯಗಳು, 26 ಲಿಸ್ಟ್-ಎ ಪಂದ್ಯಗಳು ಮತ್ತು 56 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಭಾರತ ಫುಟ್ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ; ಭಾರತಕ್ಕೆ ಭಾರೀ ಮುಖಭಂಗ
ಶಹಬಾಜ್ ಅಹ್ಮದ್ ಐಪಿಎಲ್ನಲ್ಲಿ 29 ಪಂದ್ಯಗಳನ್ನು ಆಡಿದ್ದು ಇದರಲ್ಲಿ 279 ರನ್ ಗಳಿಸಿದ್ದಾರೆ ಜೊತೆಗೆ 13 ವಿಕೆಟ್ಗಳನ್ನು ಕೂಡ ಸಂಪಾದಿಸಿದ್ದಾರೆ. ಇನ್ನು ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಪ್ರಥಮ 41.64 ರ ಸರಾಸರಿಯಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಲಿಸ್ಟ್-ಎ ಕ್ರಿಕೆಟ್ನಲ್ಲಿ 47.28 ರ ಸರಾಸರಿ ಹಾಗೂ 92.45 ರ ಸ್ಟ್ರೈಕ್ ರೇಟ್ನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2022ರ ರಣಜಿ ಟ್ರೋಫಿಯ ಸೆಮಿಫೈನಲ್ನಲ್ಲಿ ಮಧ್ಯ ಪ್ರದೇಶದ ವಿರುದ್ಧ ಅವರು ಬಂಗಾಳದ ಕೊನೆಯ ಪಂದ್ಯದಲ್ಲಿ 138 ರನ್ಗಳನ್ನು ಗಳಿಸಿದ್ದು ಎಂಟು ವಿಕೆಟ್ಗಳನ್ನು ಪಡೆದಿದ್ದರು. ಯುವ ಆಲ್ರೌಂಡರ್ ಇತ್ತೀಚೆಗೆ ನೀಡುತ್ತಿರುವ ಸ್ಥಿರ ಪ್ರದರ್ಶನದಿಂದಾಗಿ ಭಾರತ ರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.