ಬೇಕೆಂದೇ ಹೀನಾಯವಾಗಿ ಸೋಲುತ್ತೆ
ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸೋದನ್ನು ಭಾರತ ಯಾವತ್ತಿಗೂ ಬಯಸಲಾರದು. ಹೀಗಾಗಿ ವಿರಾಟ್ ಕೊಹ್ಲಿ ಬಳಗ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳನ್ನು ಬೇಕೆಂದೇ ಹೀನಾಯವಾಗಿ ಸೋಲಲಿದೆ ಎಂದು ಬಸಿತ್ ಅಲಿ, ಈ ಮೊದಲು ಹೇಳಿಕೆ ನೀಡಿದ್ದರು. ಪಾಕ್ ಇಬ್ಬರು ಕ್ರಿಕೆಟಿಗರು ಹೇಳಿಕೆ ನೀಡಿರುವಂತೆ ಟೀಮ್ ಇಂಡಿಯಾ,ಒಂದುವೇಳೆ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಕಾಕತಾಳೀಯವಾಗಿ ಸೋತರೆ!?(ಚಿತ್ರದಲ್ಲಿ ಬಸಿತ್ ಅಲಿ).
ಬಾಂಗ್ಲಾಕ್ಕೆ ಅನುಕೂಲವಾಗಲಿದೆ
ಪಾಕಿಸ್ತಾನ ತಂಡ ಭಾರತ ವಿರುದ್ಧ 89 ರನ್ಗಳ ಹೀನಾಯ ಸೋಲನುಭವಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಜಯ ಗಳಿಸಿರುವ ಪಾಕಿಸ್ತಾನ ಒಟ್ಟು 7 ಅಂಕಗಳನ್ನು ಕಲೆ ಹಾಕಿ ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಳ್ಳುವತ್ತ ಕಣ್ಣಿಟ್ಟಿದೆ. ಬಾಂಗ್ಲಾ ದೇಶವೂ ಇಷ್ಟೇ ಅಂಕಗಳನ್ನು ಕಲೆ ಹಾಕಿದೆ. ಹೀಗಾಗಿ ಭಾರತ ತಂಡ ಬಾಂಗ್ಲಾ ವಿರುದ್ಧ ಸೋತು, ಬಾಂಗ್ಲಾ ಸೆಮಿಫೈನಲ್ ಪ್ರವೇಶಿಸಲು ಅನುಕೂಲ ಮಾಡಲಿದೆ ಎಂಬುದು ಪಾಕ್ ಕ್ರಿಕೆಟಿಗರ ಆಲೋಚನೆ.
ಇಂಗ್ಲೆಂಡ್ ಲೀಗ್ನಲ್ಲಿ ಹೊರ ಬೀಳುತ್ತಾ?
ಸದ್ಯ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಒಂದು ಪಂದ್ಯ ರದ್ದು ಸೇರಿ 5 ಗೆಲುವುಗಳನ್ನು ದಾಖಲಿಸಿರುವ ಭಾರತದ ಖಾತೆಯಲ್ಲಿ 11 ಅಂಕಗಳಿವೆ. ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೊಂದೇ ಗೆಲುವು ಬೇಕಿದೆ. ಟೀಮ್ ಇಂಡಿಯಾ ಮುಂದೆ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿರುವುದರಿಂದ ಆಂಗ್ಲರು ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳುವ ಸಂಭವವೂ ಇದೆ.
ಸಿಕಂದರ್, ಬಸಿತ್ ಖತರ್ನಾಕ್ ಊಹೆ!
ಸಿಕಂದರ್ ಬಖ್ತ್ ಮತ್ತು ಬಸಿತ್ ಅಲಿ ಹೇಳುವ ಪ್ರಕಾರ ಭಾರತ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶ ಖಾತ್ರಿಪಡಿಸಿಕೊಳ್ಳಲಿದೆ. ನಂತರ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಸೋಲಲಿದೆ. ಆಗ ಇಂಗ್ಲೆಂಡ್ ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳಲಿದೆ. ಆದರೆ ಸೆಮಿಫೈನಲ್ನತ್ತ ಕಣ್ಣಿಟ್ಟಿರುವ ಬಾಂಗ್ಲಾ ವಿರುದ್ಧ ಭಾರತ ಬೇಕೆಂದೇ ಸೋಲುವುದರಿಂದ ಬಾಂಗ್ಲಾ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತದ ಈ ಸಂಚಿನಿಂದ ಪಾಕಿಸ್ತಾನಕ್ಕೆ ಹಿನ್ನಡೆಯಾಗಲಿದೆ. ಆದರೆ ಕ್ರಿಕೆಟ್ ಪಂಡಿತರ ಪ್ರಕಾರ ಬಾಂಗ್ಲಾ, ಲಂಕಾ ವಿರುದ್ಧ ಟೂರ್ನಿಯ ಪ್ರಬಲ ತಂಡ ಭಾರತ ಗೆಲ್ಲಲಿದೆ(ಚಿತ್ರದಲ್ಲಿ ಸಿಕಂದರ್ ಬಖ್ತ್).