3. ರಾಹುಲ್ ತ್ರಿಪಾಠಿ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಮ್ಮೆ ಮಿಂಚಿದ ರಾಹುಲ್ ತ್ರಿಪಾಠಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಬೇಕಿತ್ತು. ಆದರೆ, ಅಂದು ಅವಕಾಶ ವಂಚಿತರಾಗಿದ್ದ ರಾಹುಲ್ ತ್ರಿಪಾಠಿ ಈ ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದು, ಈ ಬಾರಿಯೂ ಸಹ ಕಣಕ್ಕಿಳಿಯುವ ಅವಕಾಶ ಅನುಮಾನ ಎನ್ನಬಹುದು. ವಿವಿಧ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸುವ ಸಾಮರ್ಥ್ಯವಿರುವ ರಾಹುಲ್ ತ್ರಿಪಾಠಿಗೆ ತಂಡದಲ್ಲಿ ಸ್ಥಾನ ಸಿಗಬೇಕೆಂದರೆ ಸಂಜು ಸ್ಯಾಮ್ಸನ್ ಅಥವಾ ದೀಪಕ್ ಹೂಡಾ ತಂಡದಿಂದ ಹೊರನಡೆಯಬೇಕು ಹಾಗೂ ಅಗ್ರಕ್ರಮಾಂಕದಲ್ಲಿ ಶಿಖರ್ ಧವನ್, ಶುಬ್ಮನ್ ಗಿಲ್ ಹಾಗೂ ಕೆಎಲ್ ರಾಹುಲ್ ರೀತಿಯ ಆಟಗಾರರು ಇರುವುದರಿಂದ ಇವರ ನಡುವೆ ಅವಕಾಶ ಲಭಿಸುವುದು ಅನುಮಾನ ಎನ್ನಬಹುದು.
2. ರುತುರಾಜ್ ಗಾಯಕ್ವಾಡ್
ಇತ್ತೀಚೆಗಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರುತುರಾಜ್ ಗಾಯಕ್ವಾಡ್ ಸದ್ಯ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದು, ಇನ್ನೂ ಸಹ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಬೇಕಿದೆ. ಇನ್ನು ರಾಹುಲ್ ತ್ರಿಪಾಠಿ ರೀತಿ ವಿವಿಧ ಕ್ರಮಾಂಕದಲ್ಲಿ ಕಣಕ್ಕಿಳಿಯದೇ ಕೇವಲ ಆರಂಭಿಕನಾಗಿ ಮಾತ್ರ ಕಣಕ್ಕಿಳಿಯುವ ಆಟಗಾರನಾಗಿರುವ ರುತುರಾಜ್ ಗಾಯಕ್ವಾಡ್ ಈ ಸರಣಿಯಲ್ಲಿಯೂ ಸಹ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾ್ರ್ಪಣೆ ಮಾಡುವುದು ಅನುಮಾನ ಎನ್ನಬಹುದು. ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಆಡಿರುವ ಶುಬ್ಮನ್ ಗಿಲ್ ಜತೆಗೆ ಶಿಖರ್ ಧವನ್, ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ಇರುವುದರಿಂದ ರುತುರಾಜ್ ಗಾಯಕ್ವಾಡ್ಗೆ ಅವಕಾಶ ಲಭಿಸುವುದು ಅನುಮಾನವೇ ಸರಿ.
1. ಶಹಬಾಜ್ ಅಹ್ಮದ್
ಈ ಸರಣಿಗೆ ಆಯ್ಕೆಯಾಗಿದ್ದ ಆಲ್ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಹೊರಬಿದ್ದ ನಂತರ ಬದಲಿ ಆಟಗಾರನಾಗಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಶಹಬಾಜ್ ಅಹ್ಮದ್ ಅಕ್ಷರ್ ಪಟೇಲ್ ಮುಂದೆ ಅವಕಾಶ ವಂಚಿತರಾಗುವ ಸಾಧ್ಯತೆಗಳಿವೆ. ಶಹಬಾಜ್ ಅಹ್ಮದ್ ಅಕ್ಷರ್ ಪಟೇಲ್ ರೀತಿಯ ಎಡಗೈ ಆಲ್ರೌಂಡರ್ ಆಗಿದ್ದು, ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಅವರಿಗೆ ಅವಕಾಶ ಲಭಿಸಲಿದ್ದು ಶಹಬಾಜ್ ಅಹ್ಮದ್ ಆಡುವ ಅವಕಾಶ ಪಡೆದುಕೊಳ್ಳದೇ ಇರಬಹುದು.