ಕಾಯ್ದಿರಿಸಲ್ಪಟ್ಟ ಆಟಗಾರರು
ವಿಶ್ವಕಪ್ ಟೂರ್ನಿ ವೇಳೆ ತಂಡ ಗಾಯದ ಸಮಸ್ಯೆ ಎದುರಿಸಿದರೆ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಲು ಬಿಸಿಸಿಐ ಈ ಮೊದಲು ಕಾಯ್ದಿರಿಸಲ್ಪಟ್ಟ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಅನುಭವಿ ಬ್ಯಾಟ್ಸ್ಮನ್ ಅಂಬಾಟಿ ರಾಯುಡು, ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ವೇಗಿಗಳಾದ ಇಶಾಂತ್ ಶರ್ಮಾ ಮತ್ತು ನವದೀಪ್ ಸೈನಿ ಹಾಗೂ ಸ್ಪಿನ್ನಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ವಿಶ್ವಕಪ್ಗೆ ಕಾಯ್ದಿರಿಸಲ್ಪಟ್ಟ ಆಟಗಾರರಾಗಿದ್ದರು. ಇದೀಗ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡಿರುವ ಕಾರಣ ಮತ್ತೊಬ್ಬ ಎಡಗೈ ಆಟಗಾರ ರಿಷಭ್ ಪಂತ್ ತಂಡ ಸೇರಿಕೊಳ್ಳುವ ಮೊದಲ ಆಯ್ಕೆಯಾಗಿದ್ದಾರೆ.
ಭಾರತಕ್ಕೆ ನ್ಯೂಜಿಲೆಂಡ್ ಮುಂದಿನ ಎದುರಾಳಿ
ಭಾರತ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 6 ವಿಕೆಟ್ಗಳ ಹೀನಾಯ ಸೋಲುಂಡಿತ್ತು. ಇದೀಗ ಲೀಗ್ ಹಂತದಲ್ಲಿನ ತನ್ನ ಮೂರನೇ ಪಂದ್ಯದಲ್ಲಿ ಗುರುವಾರ ಮತ್ತೊಮ್ಮೆ ಕಿವೀಸ್ ಸವಾಲು ಎದುರಿಸಲಿದ್ದು, ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಶಿಖರ್ ಧವನ್ ಅವರ ಸೇವೆ ಇಲ್ಲದೆ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಜೂನ್ 16ರಂದು ಇಂಡೊ-ಪಾಕ್ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಬಹುಬೇಗ ತನ್ನ ಬ್ಯಾಟಿಂಗ್ ಲೈನ್ ಅಪ್ ಸರಿಪಡಿಸಿಕೊಳ್ಳಬೇಕಿದೆ.
ಪಂತ್ ಕೆರೆತರುವಂತೆ ಸಲಹೆ
ಶಿಖರ್ ಧವನ್ ಗಾಯಗೊಂಡಿರುವ ಬೆನ್ನಲ್ಲೆ ಕೆವಿನ್ ಪೀಟರ್ಸನ್ ಹಾಗೂ ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಈ ಕೂಡಲೇ ರಿಷಭ್ ಪಂತ್ ಅವರನ್ನು ಬದಲಿ ಆಟಗಾರನಾಗಿ ಕತೆತರುವಂತೆ ತಂಡದ ಮ್ಯಾನೇಜ್ಮೆಂಟ್ಗೆ ಟ್ವಿಟರ್ ಮೂಲಕ ಸಲಹೆ ನೀಡಿದ್ದಾರೆ. "ಕೆ.ಎಲ್ ರಾಹುಲ್ ಆರಂಭಿಕರಾಗಿ ಆಡಿ, ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಉತ್ತಮ,'' ಎಂದು ಪೀಟರ್ಸನ್ ಹೇಳಿದ್ದಾರೆ. ಮತ್ತೊಂದೆಡೆ ಸುನಿಲ್ ಗವಾಸ್ಕರ್ ಮಾತನಾಡಿ, "ಬದಲಿ ಆಟಗಾರನಾಗಿ ಪಂತ್ ಆಯ್ಕೆಯಾಗಬೇಕು. ಐಪಿಎಲ್ನಲ್ಲಿ ಪಂತ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆದರೂ ಧವನ್ ಗುಣಮುಖರಾಗುವ ಸಾಶ್ಯತೆ ಇದ್ದರೆ ಪಂತ್ ತಮ್ಮ ಅವಕಾಶಕ್ಕಾಗಿ ಕಾಯಬೇಕು,'' ಎಂದಿದ್ದಾರೆ.
ಶಿಖರ್ ಧವನ್ ಒಡಿಐ ಸಾಧನೆ
130 ಪಂದ್ಯ
5480 ರನ್
143 ಗರಿಷ್ಠ
44.62 ಸರಾಸರಿ
93.79 ಸ್ಟ್ರೈಕ್ರೇಟ್
17 ಶತಕ
27 ಅರ್ಧಶತಕ