ಗೆಲ್ಲುವ ಪಂದ್ಯ ಸೋತಾಗ ಸಿಟ್ಟು ಬರುವುದು ಸಹಜ
ತಂಡದ ಹೊಸ ನಾಯಕ ಮುರಳಿ ವಿಜಯ್ 89 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಇದಕ್ಕೆ ಕೋಚ್ ಸಂಜಯ್ ಬಂಗಾರ್ ಕಾರಣ ಎಂಬ ಸುದ್ದಿ ಹಬ್ಬಿತು. ಹೀಗಾಗಿ ಪ್ರೀತಿ ಅವರು ಸಂಜಯ್ ವಿರುದ್ಧ ಕಿಡಿಕಾರಿದ್ದು ಸಹಜ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾತ್ರವೇ ತಂಡದ ಸೋಲಿಗೆ ಕಾರಣವಲ್ಲ, ಈ ಕಾರಣಕ್ಕೆ ಪ್ರೀತಿ ಸಿಟ್ಟಾಗಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ.
ಟೀಂ ಮೀಟಿಂಗ್ ನಲ್ಲಿ ಮಾತುಕತೆ ನಡೆಯುತ್ತೆ
ಟೀಂ ಮೀಟಿಂಗ್ ನಲ್ಲಿ ಮಾತುಕತೆ ನಡೆಯುತ್ತೆ, ಆದರೆ, ಮಾಧ್ಯಮಗಳಲ್ಲಿ ವರದಿಯಾದಂತೆ ಪ್ರೀತಿ ಅವರು ಎಫ್ ಪದ ಬಳಸಿ ಬೈಯ್ದಿಲ್ಲ, ಅವಹೇಳನಕಾರಿ ಹೇಳಿಕೆ, ಘಟನೆ ನಡೆದಿಲ್ಲ, ಕಿಂಗ್ಸ್ XI ಉತ್ತಮ ಪ್ರದರ್ಶನ ನೀಡಲು ಬದ್ಧವಾಗಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬಂಗಾರ್ ಬರೆದುಕೊಂಡಿದ್ದಾರೆ.
ಪ್ರೀತಿ ಕೋಪಕ್ಕೆ ಏನು ಕಾರಣ?
ವಿಜಯ್ ಹಾಕಿಕೊಟ್ಟ ಬುನಾದಿ ಮೇಲೆ ರನ್ ಗಳಿಸಿ ಜಯದ ನಿರೀಕ್ಷೆಯಲ್ಲಿದ್ದ ಪಂಜಾಬ್ ಗೆ ಆಘಾತ ತಂದಿದ್ದು, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ.ಅಕ್ಷರ್ ಪಟೇಲ್ಗಿಂತ ಮುಂಚಿತವಾಗಿ ಫರ್ಹಾನ್ ಬೆಹರ್ದಿನ್ರನ್ನು ಸಂಜಯ್ ಬಂಗಾರ್ ಆಡಲು ಕಳಿಸಿದ್ದು ರನ್ ಗಳಿಕೆ ವೇಗ ತಗ್ಗಿಸಿತು. 7 ಎಸೆತಗಳನ್ನು ಎದುರಿಸಿದ್ದ ಬೆಹರ್ದಿನ್ ಔಟಾಗದೆ 9 ರನ್ ಗಳಿಸಿದ್ದರು. ಪಟೇಲ್ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.
ಮಾಧ್ಯಮಗಳ ವಿರುದ್ಧ ಗರಂ ಆದ ಪ್ರೀತಿ
ನಾನು ಹಾಗೂ ಸಂಜಯ್ ಈ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕವೂ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ನಮ್ಮ ನ್ಯಾಯಾಂಗ ವ್ಯವಸ್ಥೆ ನಿಧಾನಗತಿಯಲ್ಲಿದೆ ಎಂದ ಮಾತ್ರಕ್ಕೆ ಸೆಲೆಬ್ರಿಟಿಗಳನ್ನು ಕೆಲ ಪತ್ರಕರ್ತರು ಸಾಫ್ಟ್ ಟಾರ್ಗೆಟ್ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
|
ಸಂಜಯ್ ನೀಡಿದ ಸ್ಪಷ್ಟನೆ ಹಂಚಿಕೊಂಡ ಪ್ರೀತಿ
2002 ರಿಂದ 2004ರ ತನಕ ಭಾರತದ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿರುವ ಮಾಜಿ ಆಟಗಾರ, ಪಂಜಾಬ್ ತಂಡದ ಕೋಚ್ ಬಂಗಾರ್ ಅವರು ಮಾಧ್ಯಮಗಳ ವರದಿ ಖಂಡಿಸಿ ಸ್ಪಷ್ಟನೆ ನೀಡಿದ್ದನ್ನು ಪ್ರೀತಿ ಜಿಂಟಾ ಹಂಚಿಕೊಂಡಿದ್ದಾರೆ.