ಮುಂಬೈ, ಮೇ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸಿದೆ. ಪಾಂಡ್ಯ ಬ್ರದರ್ಸ್ ಇರಬಹುದು, ವೇಗಿ ಸಿರಾಜ್ ಇರಬಹುದು, ಬಡತನದಿಂದ ಶ್ರೀಮಂತ ಕ್ರಿಕೆಟ್ ಲೀಗ್ ಗೆ ಲಗ್ಗೆ ಇಟ್ಟ ಹೊಚ್ಚ ಹೊಸ ಪ್ರತಿಭೆ ಕುಲ್ವಂತ್ ಖೆಜ್ರೊಲಿಯಾ ಯಶೋಗಾಥೆ ಇಲ್ಲಿದೆ.
ರಾಜಸ್ಥಾನ ಮೂಲದ ಕುಲ್ವಂತ್ ಅವರು ಗೋವಾದ ರೆಸ್ಟೋರೆಂಟ್ ವೊಂದರಲ್ಲಿ ಹೊಟ್ಟೆಪಾಡಿಗಾಗಿ ವೇಯ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಕಣ್ಣಿಗೆ ಬಿದ್ದು, ಐಪಿಎಲ್ 10ರಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಎಡಗೈ ವೇಗಿ ಕುಲ್ವಂತ್ ಖೆಜ್ರೋಲಿಯಾ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು.