ಬೆಂಗಳೂರು, ಫೆಬ್ರವರಿ 5: ಮಾರ್ಚ್ ತಿಂಗಳಿನಿಂದ ಐಪಿಎಲ್ 12ನೇ ಆವೃತ್ತಿ ಆರಂಭಗೊಳ್ಳಿದ್ದು, ಅದ್ದೂರಿ ಟೂರ್ನಿಯೆಡೆಗಿನ ಕ್ರೇಜ್ ಕಾವೇರ ತೊಡಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈ ಜನಪ್ರಿಯ ಕ್ರಿಕೆಟ್ಗೆ ಸಜ್ಜಾಗುತ್ತಿದೆ. ಆರ್ಸಿಬಿ ತಂಡದ ಪ್ರಮುಖ ಆಟಗಾರರು ಕಂಡೀಷನಿಂಗ್ ಕ್ಯಾಂಪ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
'ಐಪಿಎಲ್ 2019' ಗೊಂದಲಕ್ಕೆ ತೆರೆ, ಅದ್ದೂರಿ ಕ್ರಿಕೆಟ್ ಹಬ್ಬ ಭಾರತದಲ್ಲೆ
ತಂಡದ ಒಟ್ಟು ಎಂಟು ಮಂದಿ ಪ್ರಮುಖ ಆಟಗಾರರು ಕ್ಯಾಂಪ್ನಲ್ಲಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ 16ರ ಹರೆಯದ ಬೆಂಗಾಲ್ ಆಟಗಾರ ಪ್ರಯಾಸ್ ರಾಯ್ ಬರ್ಮನ್ ಮತ್ತು ರಣಜಿಯಲ್ಲಿ ಗಮನ ಸೆಳೆದಿದ್ದ ಮಿಲೀಂದ್ ಕುಮಾರ್ ಕೂಡ ಇರಲಿದ್ದಾರೆ ಎಂದು ತಿಳಿದು ಬಂದಿದೆ.
As part of their preparation for Season 12 of the cash-rich #IPL , Royal Challengers Bangalore (#RCB ) have announced a five-day conditioning camp under the guidance of coaches #GaryKirsten and #AshishNehra at the National Cricket Academy at #MChinnaswamyStadium.
— IANS Tweets (@ians_india) February 4, 2019
Photo: IANS pic.twitter.com/0gTz5ufrII
ಉತ್ತರ ಪ್ರದೇಶ ತಂಡದ ನಾಯಕ ಅಕ್ಷದೀಪ್ ನಾಥ್, ಮುಂಬೈ ಆಲ್ ರೌಂಡರ್ ಶಿವಂ ದೂಬೆ, ದೆಹಲಿಯ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಹಿಮ್ಮತ್ ಸಿಂಗ್, ಬೌಲರ್ ಕುಲವಂತ್ ಖೆಜ್ರೋಲಿಯಾ, ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಮತ್ತು ಕರ್ನಾಟಕದ ದೇವದತ್ ಪಡಿಕಲ್ ಕೂಡ ಎಂಟು ಮಂದಿಯ ಶಿಬಿರಾರ್ಥಿಗಳಲ್ಲಿ ಸೇರಿದ್ದಾರೆ.
ಯುವರಾಜ್ ಮುಂಬೈ ಸೇರಿಕೊಂಡ ಬಗ್ಗೆ ನಂಗೊಂದ್ ಹೇಳ್ಳಿಕ್ಕಿದೆ: ಗಂಗೂಲಿ
ತಂಡದ ತರಬೇತುದಾರರಾದ ಗ್ಯಾರಿ ಕಸ್ಟರ್ನ್ ಮತ್ತು ಆಶೀಷ್ ನೆಹ್ರಾ ಆಟಗಾರರ ಪ್ರಗತಿಯ ಜವಾಬ್ದಾರಿ ಹೊರಲಿದ್ದಾರೆ. ಕ್ಯಾಂಪ್ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಯೋ ಯೋ ಟೆಸ್ಟ್ ಕೂಡ ನಡೆಸಲಾಗುತ್ತದೆ. ಐದು ದಿನಗಳ ಕ್ಯಾಂಪ್ ಇದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.