ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಬಾಟಿ ರಾಯುಡು ಮತ್ತೊಂದು ಪಂದ್ಯಕ್ಕೆ ಅಲಭ್ಯ: ಸಿಎಸ್‌ಕೆ ಸಿಇಒ

IPL 2020: Ambati rayudu Might miss one more game : CSK CEO

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಸ್ಟಾರ್ ಆಟಗಾರ ಅಂಬಾಟಿ ರಾಯುಡು ಅವರನ್ನು ಇನ್ನೊಂದು ಪಂದ್ಯದಲ್ಲೂ ಮಿಸ್ ಮಾಡಿಕೊಳ್ಳಲಿದೆ. ಗಾಯಕ್ಕೀಡಾಗಿರುವ ರಾಯುಡು ಮುಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಸಿಎಸ್‌ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಸಿ ವಿಸ್ವನಾಥನ್ ಹೇಳಿದ್ದಾರೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯುಡು ಆಡಿದ್ದರು. ಆ ಪಂದ್ಯದಲ್ಲಿ 48 ಎಸೆತಗಳಿಗೆ 71 ರನ್ ಸಿಡಿಸಿದ್ದ ರಾಯುಡು ತಂಡದ ಗೆಲುವಿಗೆ ಕಾರಣರಾಗಿದ್ದರಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ತನ್ನದಾಗಿಸಿಕೊಂಡಿದ್ದರು.

ವೈಫಲ್ಯ ಸಮರ್ಥಿಸಿಕೊಂಡ ಎಂಎಸ್ ಧೋನಿ, ನಾನ್ಸೆನ್ಸ್ ಎಂದ ಪೀಟರ್ಸನ್ವೈಫಲ್ಯ ಸಮರ್ಥಿಸಿಕೊಂಡ ಎಂಎಸ್ ಧೋನಿ, ನಾನ್ಸೆನ್ಸ್ ಎಂದ ಪೀಟರ್ಸನ್

ಅದಾಗಿ ಮುಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯುಡು ಆಡಿರಲಿಲ್ಲ. ಆ ಪಂದ್ಯದಲ್ಲಿ ಸಿಎಸ್‌ಕೆ 16 ರನ್‌ಗಳಿಂದ ಸೋತಿತ್ತು. ಸೆಪ್ಟೆಂಬರ್ 25ರ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಮೂರನೇ ಪಂದ್ಯ ಆಡಲಿದೆ.

ಸಂಜುಗೆ ಸಾಥ್ ನೀಡಲು ಪವರ್ ಹಿಟ್ಟರ್ ಸಿದ್ಧ: 'ಡಬಲ್ ಬ್ಯಾರೆಲ್' ಮೊರೆತದ ಎಚ್ಚರಿಕೆ ನೀಡಿದ ರಾಜಸ್ಥಾನ್ ನಾಯಕಸಂಜುಗೆ ಸಾಥ್ ನೀಡಲು ಪವರ್ ಹಿಟ್ಟರ್ ಸಿದ್ಧ: 'ಡಬಲ್ ಬ್ಯಾರೆಲ್' ಮೊರೆತದ ಎಚ್ಚರಿಕೆ ನೀಡಿದ ರಾಜಸ್ಥಾನ್ ನಾಯಕ

ರಾಯುಡು ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಕಾಸಿ ವಿಸ್ವನಾಥನ್, 'ರಾಯುಡು ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದಾರೆ. ಅದರ ಬಗ್ಗೆ ಹೆಚ್ಚಿನ ಚಿಂತೆಯಿಲ್ಲ. ಆದರೆ ಅವರು ಮುಂದಿನ ಮತ್ತೊಂದು ಪಂದ್ಯದಲ್ಲಿ ಆಡುತ್ತಿಲ್ಲ ಅನ್ನೋದೆ ಚಿಂತೆಯ ಸಂಗತಿ. ಬಹುಶಃ ಅವರು ಅದರ ಮುಂದಿನ ಪಂದ್ಯಕ್ಕೆ ಬರಲೂಬಹುದು,' ಎಂದಿದ್ದಾರೆ.

Story first published: Thursday, September 24, 2020, 15:12 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X