|
ಸೆಪ್ಟೆಂಬರ್ 6ರಂದು ಗೀತೆ ಬಿಡುಗಡೆ
ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್ಗಾಗಿ ಸೆಪ್ಟೆಂಬರ್ 6ರಂದು ಐಪಿಎಲ್ ಗೀತೆ ಬಿಡುಗಡೆ ಮಾಡಲಾಗಿತ್ತು. ಈ ಗೀತೆಯ ಬಗ್ಗೆ ಹಿಂದಿ ರ್ಯಾಪರ್ ಕೃಷ್ಣ (KR$NA) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಗೀತೆಯನ್ನು ಬಿಸಿಸಿಐ ಕಾಪಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಏನೀ ಗೀತೆ ವಿವಾದ?
ಐಪಿಎಲ್ ಗೀತೆ ಬಿಡುಗಡೆಯಾಗುವುದಕ್ಕೂ ಮುನ್ನ ರ್ಯಾಪರ್ ಕೃಷ್ಣ ಅವರು ದೇಖೋ ಕೌನ್ ಆಯಾ ವಾಪಸ್ (ನೋಡು ಯಾರ್ ಬಂದಿದ್ದಾರೆ ವಾಪಸ್) ಎನ್ನುವ ರ್ಯಾಪ್ ಸಾಂಗ್ ಬಿಡುಗಡೆ ಮಾಡಿದ್ದರು. ಇದಕ್ಕೆ ಯುಟ್ಯೂಬ್ನಲ್ಲಿ 7.9 ಲಕ್ಷ ವ್ಯೂಸ್ ಬಂದಿತ್ತು. ವಿಶೇಷವೆಂದರೆ ಐಪಿಎಲ್ ಗೀತೆ ಕೂಡ ರ್ಯಾಪ್ ಕೃಷ್ಣ ಗೀತೆಯನ್ನೇ ಹೋಲುವಂತಿತ್ತು.
ಕೃಷ್ಣ ಗೀತೆಯನ್ನೇ ಹೋಲೋ ಗೀತೆ
ಸೆಪ್ಟೆಂಬರ್ 6ರಂದು ಐಪಿಎಲ್ ಹೊರ ತಂದಿರುವ ಗೀತೆಯೂ ಕೃಷ್ಣ ರ್ಯಾಪ್ ಸಾಂಗನ್ನೇ ಹೋಲುತ್ತಿತ್ತು. ಐಪಿಎಲ್ ಗೀತೆಗೆ ಆಯೇಂಗೆ ಹಮ್ ವಾಪಸ್ (ನಾವು ಮತ್ತೆ ಬರುತ್ತೇವೆ ವಾಪಸ್) ಎಂಬ ಶೀರ್ಶಿಕೆ ನೀಡಲಾಗಿತ್ತು. ಐಪಿಎಲ್ ಗೀತೆಯಲ್ಲಿ ಕೊರೊನಾ ಮತ್ತು ಐಪಿಎಲ್ ವಿಚಾರ ತರಲಾಗಿತ್ತು. ಗೀತೆಯ ಸಂಗೀತ ಕೂಡ ಒಂಥರಾ 'ದೇಖೋ ಕೌನ್ ಆಯಾ ವಾಪಸ್' ಸಂಗೀತವನ್ನೇ ಹೋಲುತ್ತದೆ. ಇದೇ ಕಾರಣಕ್ಕೆ ಕೃಷ್ಣ ಕಾಪಿ ಆರೋಪ ಹೊರಿಸಿದ್ದಾರೆ.
|
ಟ್ವಿಟರ್ ಮೂಲಕ ಅಸಮಾಧಾನ
ಐಪಿಎಲ್ ಗೀತೆಯನ್ನು ಟ್ವಿಟರ್ನಲ್ಲಿ ಹಾಕಿಕೊಂಡಿರುವ ರ್ಯಾಪರ್ ಕೃಷ್ಣ, 'ಹಲೋ ಗೆಳೆಯರೆ, ನನ್ನ ದೇಖೋ ಕೌನ್ ಆಯಾ ವಾಪಸ್ ಗೀತೆಯನ್ನು ಐಪಿಎಲ್ ಕೃತಿಚೌರ್ಯಗೊಳಿಸಿ ಆಯೇಂಗೆ ಹಮ್ ವಾಪಸ್ ಗೀತೆಯನ್ನು ಸೃಷ್ಟಿಸಿದೆ. ಇದಕ್ಕೆ ನನ್ನ ಒಪ್ಪಿಗೆ ಪಡೆದಿಲ್ಲ ಅಥವಾ ನನಗೆ ಗೌರವ ನೀಡಿಲ್ಲ. ಈ ಟ್ವೀಟನ್ನು ರೀ ಟ್ವೀಟ್ ಮಾಡುವ ಮೂಲಕ ನನ್ನ ಸಹ ಕಲಾವಿದರು ಮತ್ತು ಗೆಳೆಯರು ಇತರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ' ಎಂದು ಬರೆದುಕೊಂಡಿದ್ದಾರೆ. ಬಿಸಿಸಿಐ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.