ಐಪಿಎಲ್ ಕ್ರೀಡಾಕೂಟ
ಒಮ್ಮೆಯೂ ಪ್ರಶಸ್ತಿಯನ್ನು ಪಡೆಯದ ತಂಡಗಳೆಂದರೆ ಕಿಂಗ್ಸ್ ಇಲೆವನ್ ಪಂಜಾಬ್, ರಾಯಲ್ ಚಾಲೆಂಜರ್ಸ್, ಡೆಲ್ಲಿ ಕ್ಯಾಪಿಟಲ್ಸ್. ಇನ್ನು ಕೆಕೆಆರ್ ಎರಡು ಬಾರಿ, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡ ಒಮ್ಮೆ ಪ್ರಶಸ್ತಿಯನ್ನು ಗೆದ್ದಿವೆ್. ಹಾಗಿದ್ದರೆ, ಈ ಬಾರಿ ವಿನ್ನರ್ಸ್ ಮತ್ತು ರನ್ನರ್ಸ್ ಯಾರಾಗಬಹುದು? ಭವಿಷ್ಯ ಏನು ಹೇಳುತ್ತೆ?
ಬೆಂಗಳೂರು ಮೂಲದ ಪಂಡಿತ್ ಜಗನ್ನಾಥ್ ಗುರೂಜಿ
ಬೆಂಗಳೂರು ಮೂಲದ ಪಂಡಿತ್ ಜಗನ್ನಾಥ್ ಗುರೂಜಿ ಈ ಬಾರಿಯ ಪ್ರಶಸ್ತಿ ಸುತ್ತಿಗೆ ಯಾವ ತಂಡ ಹೋಗಬಹುದು ಎನ್ನುವುದರ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಆದರೆ ಗುರೂಜಿ ಯಾವ ತಂಡ ಪ್ರಶಸ್ತಿಯನ್ನು ಗೆಲ್ಲುತ್ತದೆ ಎನ್ನುವುದಕ್ಕೆ ಈ ಎರಡು ತಂಡಗಳಲ್ಲಿ ಯಾವುದಾದರೂ ಒಂದು ಪ್ರಶಸ್ತಿ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ.
ಪ್ರಶಸ್ತಿ ಸುತ್ತಿಗೆ ನಾಲ್ಕು ತಂಡಗಳಿರಲಿವೆ
ಪಂಡಿತ್ ಜಗನ್ನಾಥ್ ಗುರೂಜಿ ಪ್ರಕಾರ ಈ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಥವಾ ಚೆನ್ನೈ ಸೂಪರ್ ಕಿಂಗ್ಸ್. ಆದರೆ, ರನ್ನರ್ ಅಪ್ ಸ್ಥಾನಕ್ಕೆ ಗುರೂಜಿ ಮತ್ತೆರಡು ತಂಡವನ್ನು ಗುರುತಿಸಿದ್ದು ಅವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್. ಆ ಮೂಲಕ, ಪ್ರಶಸ್ತಿ ಸುತ್ತಿಗೆ ಈ ನಾಲ್ಕು ತಂಡಗಳಿರಲಿವೆ ಎನ್ನುವ ಭವಿಷ್ಯವನ್ನು ಗುರೂಜಿ ನುಡಿದಿದ್ದಾರೆ.
ಸರಣಿಯ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ಆಡಲಾಗುತ್ತಿದೆ
ಕೊರೊನಾ ಹಾವಳಿಯಿಂದ ಐಪಿಎಲ್ ಹಾಲೀ ಸರಣಿಯ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ಆಡಲಾಗುತ್ತಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯ ನಗರದ ಪಿಚ್ ಗಳಲ್ಲಿ ಪಂದ್ಯ ನಡೆಯುತ್ತಿದೆ. ನವೆಂಬರ್ ಹತ್ತರಂದು ಈ ಸರಣಿಯ ಫೈನಲ್ ಪಂದ್ಯ ನಡೆಯಲಿದೆ.