ಔಟ್ ತೀರ್ಪು ರಿವರ್ಸ್
ಡಿಸಿಶನ್ ರಿವ್ಯೂ ಸಿಸ್ಟಮ್ನಲ್ಲಿ ಟಾಮ್ ಕರಣ್ ಅವರನ್ನು ತಾಗಿ ಹೋಗಿದ್ದ ಚೆಂಡನ್ನು ಧೋನಿ ಕ್ಯಾಚ್ ಮಾಡಿರಲಿಲ್ಲ. ಚೆಂಡು ಗ್ಲೌಸ್ ಕೂಡ ತಾಗಿರಲ್ಲ. ಹೀಗಾಗಿ ಔಟ್ ತೀರ್ಪನ್ನು ರಿವರ್ಸ್ ಮಾಡಲಾಯ್ತು. ಆದರೆ ಇದು ಸಿಎಸ್ಕೆ ನಾಯಕ ಧೋನಿಗೆ ಸರಿ ಕಾಣಲಿಲ್ಲವೋ ಏನೋ.
ಅಂಪೈರ್ ಜೊತೆಗೆ ಧೋನಿ ವಾಗ್ವಾದ
ಔಟ್ ಕೊಟ್ಟಿದ್ದ ಟಾಮ್ ಕರನ್ ಅವರನ್ನು ಮತ್ತೆ ಆಡಲು ಬಿಟ್ಟಿದ್ದಕ್ಕೆ ಸಿಟ್ಟಾದ ಧೋನಿ ಅಂಪೈರ್ ಜೊತೆಗೆ ಸಣ್ಣಗೆ ವಾಗ್ವಾದ ನಡೆಸಿದರು. ಮತ್ತೆ ಸುಮ್ಮನಾದರು. ಧೋನಿ ಇದೇ ರೀತಿ ಕಳೆದ ವರ್ಷ ಜೈಪುರ್ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆಯೂ ಅಂಪೈರ್ ಜೊತೆಗೆ ಸಿಟ್ಟಾಗಿದ್ದರು.
ಹಿಂದೆಯೂ ಇದೇ ರೀತಿಯ ಘಟನೆ
ಸಿಎಸ್ಕೆ ಇನ್ನಿಂಗ್ಸ್ನಲ್ಲಿ ದೇಸಿ ಅಂಪೈರ್ ಉಲ್ಲಾಸ್ ಗಂಧೆ ಜೊತೆಗೆ ಆವತ್ತು ಮೈದಾನಕ್ಕೆ ಬಂದು ಧೋನಿ ವಾಗ್ವಾದ ನಡೆಸಿದ್ದರು. ಆರ್ಆರ್ ಬೌಲರ್ ಹಾಕಿದ್ದ ಫುಲ್ಟಾಸ್ ಎಸೆತವೊಂದನ್ನು ಅಂಪೈರ್ ನೋ ಬಾಲ್ ಕೊಡಲಿಲ್ಲ ಎಂದು ಆವತ್ತು ಧೋನಿ ಸಿಟ್ಟಾಗಿದ್ದರು.
ಸಾಕ್ಷಿ ಧೋನಿ ಟ್ವೀಟ್ ಡಿಲೀಟ್
ಕಳೆದ ವರ್ಷ ತಾಳ್ಮೆ ಕಳೆದು ಮೈದಾನಕ್ಕಿಳಿದಿದ್ದ ಧೋನಿಗೆ ಎಲ್ಲೆ ಮೀರಿ ವರ್ತಿಸಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು. ಈ ಬಾರಿಯ ಘಟನೆಗೆ ಸಂಬಂಧಿಸಿ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈಗ ಆ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.