ಡಿಕೆಯಂತಾ ನಾಯಕ ಸಿಕ್ಕಿದ್ದು ಅದೃಷ್ಠ
ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ಹೇಳಿಕೆಯನ್ನು ಕೊಲ್ಕತಾ ನೈಟ್ ರೈಡರ್ಸ್ ವೆಬ್ಸೈಟ್ ಉಲ್ಲೇಖಿಸಿದೆ. " ತಂಡವೇ ಮೊದಲು ಎಂಬ ಭಾವನೆಯನ್ನು ಹೊಂದಿರುವ ದಿನೇಶ್ ಕಾರ್ತಿಕ್ ಅವರಂತಾ ನಾಯಕನನ್ನು ಪಡೆಯಲು ನಾವು ಅದೃಷ್ಠ ಮಾಡಿದ್ದೇವೆ. ಈ ರೀತಿಯ ನಿರ್ಧಾರವನ್ನು ಯಾರೇ ತೆಗೆದುಕೊಳ್ಳುವುದಿದ್ದರೂ ಅದಕ್ಕೆ ಸಾಕಷ್ಟು ಧೈರ್ಯ ಬೇಕು" ಎಂದು ವೆಂಕಿ ಮೈಸೂರ್ ತಿಳಿಸಿದ್ದಾರೆ.
ದಿನೇಶ್ ಕಾರ್ತಿಕ್ ನಿರ್ಧಾರಕ್ಕೆ ಆಶ್ಚರ್ಯ
"ದಿನೇಶ್ ಕಾರ್ತಿಕ್ ಅವರ ನಿರ್ಧಾರಕ್ಕೆ ನಾವು ಆಶ್ಚರ್ಯಗೊಂಡಿದ್ದೇವೆ. ಅದರ ಜೊತೆಗೆ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. 2019ರ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ತಂಡದಲ್ಲಿ ಹೊಂದಿರುವುದಕ್ಕೆ ನಾವು ಅದೃಷ್ಠಹೊಂದಿದ್ದೇವೆ. ಉಪನಾಯಕನಾಗಿದ್ದ ಅವರು ಮುಂದಿನ ಹಂತದಲ್ಲಿ ತಂಡವನ್ನು ಸಂಪೂರ್ಣವಾಗಿ ಮುನ್ನಡೆಸಲಿದ್ದಾರೆ" ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರ್ ಹೇಳಿಕೆಯನ್ನು ನೀಡಿರುವುದನ್ನು ಕೆಕೆಆರ್ ವೆಬ್ಸೈಟ್ ಉಲ್ಲೇಖ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಾಯಕನ ಬದಲಾವಣೆ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬಂದಿತ್ತು. ಇಯಾನ್ ಮಾರ್ಗನ್ ಅವರಂತಾ ವಿಶ್ವಕಪ್ ವಿಜೇತ ತಂಡದ ನಾಯಕ ತಂಡದಲ್ಲಿರುವಾಗ ದಿನೇಶ್ ಕಾರ್ತಿಕ್ಗೆ ಆ ಜವಾಬ್ಧಾರಿ ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿ ಕಾರ್ತಿಕ್ ಹೆಚ್ಚಿನ ಪಂದ್ಯಗಳಲ್ಲಿ ಮಿಂಚಲು ಕೂಡ ವಿಫಲರಾಗಿದ್ದರು. ಈಗ ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನವೇ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
ನಾಯಕನಾಗಿ ದಿನೇಶ್ ಕಾರ್ತಿಕ್
2018ರ ಆವೃತ್ತಿಯ ನಂತರ ದಿನೇಶ್ ಕಾರ್ತಿಕ್ ಕೆಕೆಆರ್ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. 37 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಕೆಕೆಆರ್ ತಂಡವನ್ನು ಮುನ್ನಡೆಸಿದ್ದು 19ರಲ್ಲಿ ಗೆಲುವು ಸಾಧಿಸಿದ್ದರೆ 17 ಪಂದ್ಯಗಳಲ್ಲಿ ಸೋಲು ಕಂಡಿದೆ. 2018ರ ಆವೃತ್ತಿಯ ಟೂರ್ನಿಯಲ್ಲಿ ಕೆಕೆಆರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ ಕಳೆದ 2019ರ ಆವೃತ್ತಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.