ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಗಳು ಅತಿ ಹೆಚ್ಚು ಬೆಂಬಲ ನೀಡುತ್ತಿರುವ ತಂಡ ಯಾವುದು ಗೊತ್ತೇ? ರಾಯಲ್ ಚಾಲೆಂಜರ್ಸ್ ಬೆಂಗಳೂರು. ಏಕೆಂದರೆ ಶ್ರೀಲಂಕಾದ ಆಟಗಾರ ಇಸುರು ಉಡಾನಾ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಹೊರತಾಗಿ ಶ್ರೀಲಂಕಾದ ಯಾವ ಆಟಗಾರನೂ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದಿಲ್ಲ.
ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರರು ಇವರು
ಆದರೆ ಉಡಾನಾ ಇದುವರೆಗೂ ಅಂತಹ ಗಮನಾರ್ಹ ಪ್ರದರ್ಶನವನ್ನೇನೂ ನೀಡಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಅವರು 12 ಓವರ್ಗಳನ್ನು ಬೌಲ್ ಮಾಡಿ 126 ರನ್ ಗಳಿಸಿದ್ದಾರೆ. ಅಂದರೆ 10.50ರ ಎಕಾನಮಿಯನ್ನು ರನ್ ಸೋರಿಕೆ ಮಾಡಿದ್ದಾರೆ. ಎದುರಾಳಿ ತಂಡಗಳ ಐದು ವಿಕೆಟ್ಗಳನ್ನು ಅವರು ಪಡೆದಿದ್ದಾರೆ.
ಟಿ20 ಕ್ರಿಕೆಟ್ ಎನ್ನುವುದು ಬ್ಯಾಟ್ಸ್ಮನ್ಗಳ ಆಟ. ಇಲ್ಲಿ ಬೌಂಡರಿ ಸಿಕ್ಸರ್ಗಳು ಸರಾಗವಾಗಿ ಹರಿದುಬರುತ್ತದೆ. ಇಲ್ಲಿ ಬೌಲರ್ಗಳು ಮಿಂಚುವುದು ಸುಲಭವಲ್ಲ. ಅದರಲ್ಲಿಯೂ ಪವರ್ ಪ್ಲೇ ಮತ್ತು ಡೆತ್ ಓವರ್ಗಳು ಸಾಮಾನ್ಯವಾಗಿ ಬೌಲರ್ಗಳ ಮಾರಣಹೋಗಮೇ ನಡೆಯುತ್ತದೆ.
ಆತ ಆಡಿದ್ದು ಸಾಕು, ತಂಡದಿಂದ ಕೈಬಿಡಿ: ಪಂಜಾಬ್ ತಂಡಕ್ಕೆ ಪೀಟರ್ಸನ್ ಸಲಹೆ
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಇಸುರು ಉಡಾನಾ ನಾಲ್ಕು ಓವರ್ಗಳಲ್ಲಿ 40 ರನ್ ಬಿಟ್ಟುಕೊಟ್ಟಿದ್ದರು. ಶಿಖರ್ ಧವನ್ ವಿಕೆಟ್ ಪಡೆದಿದ್ದೇ ಸಮಾಧಾನದ ಸಂಗತಿ. ಇದಕ್ಕೆ ಕ್ರಿಕೆಟ್ ಅಭಿಮಾನಿಯೊಬ್ಬರು ಅವರಿಗೆ ಇನ್ಸ್ಟಾಗ್ರಾಂನಲ್ಲಿ, 'ಪವರ್ ಪ್ಲೇನಲ್ಲಿ ನೀವು ಇಷ್ಟೊಂದು ರನ್ ಏಕೆ ಕೊಡುತ್ತಿದ್ದೀರಿ?' ಎಂದು ಕೆಣಕಿದ್ದರು.
ಇದಕ್ಕೆ ಉಡಾನಾ, ಅಷ್ಟೇ ತಮಾಷೆಯಾಗಿ ಉತ್ತರ ನೀಡಿದ್ದಾರೆ. 'ಏಕೆಂದರೆ ಬ್ಯಾಟ್ಟ್ಮನ್ ತನ್ನ ಬ್ಯಾಟ್ ಜತೆ ಬಂದಿರುತ್ತಾನೆ' ಎಂದು ಉಡಾನಾ ಹೇಳಿದ್ದಾರೆ. ಉಡಾನಾ ಅವರನ್ನು ಆರ್ಸಿಬಿ 50 ಲಕ್ಷ ರೂ ನೀಡಿ ಖರೀದಿಸಿತ್ತು.