ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ರಾಹುಲ್ ತ್ರಿಪಾಠಿಗೆ ಖಂಡನೆ ವ್ಯಕ್ತವಾಗಿದೆ. ಅಬುಧಾಬಿಯಲ್ಲಿ ನಡೆದ 35ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತ್ರಿಪಾಠಿಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.
ಐಪಿಎಲ್ 500+ ರನ್: ಕ್ರಿಸ್ ಗೇಲ್ ಸಮಕ್ಕೆ ನಿಂತ ಕೆಎಲ್ ರಾಹುಲ್
'ರಾಹುಲ್ ತ್ರಿಪಾಠಿ ಅವರು ಲೆವೆಲ್ 1ರಲ್ಲಿ 2.3ರ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಲೆವೆಲ್ 1ರ ಪ್ರಕಾರ ಅಂಪೈರ್ ತೀರ್ಮಾನವೇ ಅಂತಿಮ. ಅದನ್ನು ಮೀರುವಂತಿಲ್ಲ' ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆರಂಭಿಕರಾಗಿ ಬಂದಿದ್ದ ರಾಹುಲ್ ತ್ರಿಪಾಠಿ 16 ಎಸೆತಗಳಿಗೆ 23 ರನ್ ಬಾರಿಸಿದ್ದರು.
ಶುಬ್ಮನ್ ಗಿಲ್ ಜೊತೆ ತ್ರಿಪಾಠಿ 48 ರನ್ಗಳ ಜೊತೆಯಾಟ ನೀಡಿದ್ದರು. ಆದರೆ ಆ ಬಳಿಕ ಟಿ ನಟರಾಜನ್ ಓವರ್ನಲ್ಲಿ ತ್ರಿಪಾಠಿ ವಿಕೆಟ್ ಒಪ್ಪಿಸಿದರು. ಇನ್ನು ನಿತೀಶ್ ರಾಣಾ 29, ಇಯಾನ್ ಮಾರ್ಗನ್ 34, ದಿನೇಶ್ ಕಾರ್ತಿಕ್ 29 ರನ್ನೊಂದಿಗೆ ಕೆಕೆಆರ್ 163 ರನ್ ಗಳಿಸಿತು.
ಐಪಿಎಲ್ 2020: ಮತ್ತೊಂದು ಸೂಪರ್ ಓವರ್ ಪಂದ್ಯ: ಪಂಜಾಬ್ಗೆ ಗೆಲುವು
ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ನಿಂದ ಜಾನಿ ಬೇರ್ಸ್ಟೋವ್ 36, ಕೇನ್ ವಿಲಿಯಮ್ಸನ್ 29, ನಾಯಕ ಡೇವಿಡ್ ವಾರ್ನರ್ 47, ಅಬ್ದುಲ್ ಸಮದ್ 23 ರನ್ ಬಾರಿಸಿದರು. ಎಸ್ಆರ್ಎಚ್ ಕೂಡ 20 ಓವರ್ಗೆ 6 ವಿಕೆಟ್ ಕಳೆದು 163 ರನ್ ಗಳಿಸಿತು. ಪಂದ್ಯ ಟೈ ಎನಿಸಿತು. ಆದರೆ ಸೂಪರ್ ಓವರ್ನಲ್ಲಿ ಕೆಕೆಆರ್ ಗೆದ್ದಿತ್ತು.