ತಂಡಗಳ ಬಲಾಬಲ
ಮುಂಬೈಗೆ ರೋಹಿತ್ ಶರ್ಮಾ ನಾಯಕರಾಗಿದ್ದರೆ, ಕೋಲ್ಕತ್ತಾಕ್ಕೆ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಆಗಿದ್ದಾರೆ. ಕೆಕೆಆರ್ ಕೋಚ್ ಬ್ರೆಂಡನ್ ಮೆಕಲಮ್ ಅಂತೂ ಈ ಬಾರಿ ಮೂರನೇ ಟ್ರೋಫಿ ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ. ಮುಂಬೈಯಲ್ಲಿ ರೋಹಿತ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ ಇದ್ದರೆ, ಕೆಕೆಆರ್ನಲ್ಲಿ ದಿನೇಶ್ ಕಾರ್ತಿಕ್, ಶುಭ್ಮಾನ್ ಗಿಲ್, ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ನಂತ ಬಲಿಷ್ಠರಿದ್ದಾರೆ.
ಪಿಚ್ ಮತ್ತು ಹವಾಮಾನ
ಅಬುಧಾಬಿ ಪಿಚ್ ಬೌಲರ್ಗಳಿಗೆ ಫ್ರೆಂಡ್ಲಿ ಆಗಿರಲಿದೆ. ಬೌಲರ್ಗಳೇ ಪಂದ್ಯದ ನಿರ್ಧಾರಕರಾಗಲಿದ್ದಾರೆ. ಪಿಚ್ ಮೇಲ್ಭಾಗ ವೇಗಿಗಳಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಬೌಲರ್ಗಳು ತಂಡಕ್ಕೆ ಬಲವಾಗಿ ನಿಲ್ಲಬಲ್ಲರು. ಬ್ಯಾಟ್ಸ್ಮನ್ಗಳು ಎಚ್ಚರಿಯಿಂದ ಆಡಬೇಕಷ್ಟೇ. ಇನ್ನು ಅಬುಧಾಬಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರೀ ಸೆಲ್ಶಿಯನ್ ಇದ್ದು ಕನಿಷ್ಠ ತಾಪಮಾನ 30 ಡಿಗ್ರೀ ಸೆಲ್ಶಿಯಸ್ ಇರಲಿದೆ.
ಕೆಕೆಆರ್ ಸಂಭಾವ್ಯ XI
ಸುನಿಲ್ ನರೈನ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ಸಿ, ವಿಕೆ), ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಕಮಲೇಶ್ ನಾಗರ್ಕೋಟಿ/ಸಂದೀಪ್ ವಾರಿಯರ್, ಶಿವಂ ಮಾವಿ, ಪ್ರಸಿದ್ಧ್ ಕೃಷ್ಣ.
ಎಂಐ ಸಂಭಾವ್ಯ XI
ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ/ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್/ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.