ವಸುಂಧರಾ ಶರ್ಮ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋ ನಿಜಕ್ಕೂ ನನ್ನ ಹೃದಯ ಒಡೆಯುವಂತೆ ಮಾಡಿದೆ. ದಿಲ್ಲಿ ಜನಗಳೇ ದಯವಿಟ್ಟು ನಿಮಗೆ ಸಾಧ್ಯವಾದರೆ ಮಾಳ್ವಿಯಾ ನಗರದಲ್ಲಿರುವ ಬಾಬಾ ಕಾ ಧಾಬಾಗೆ ಹೋಗಿ ಆಹಾರ ಸೇವಿಸಿ, ಈ ವೃದ್ಧ ದಂಪತಿ ಕಣ್ಣೀರು ಒರೆಸಿ, ದಂಪತಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯಿದ್ದರೂ ಅವರಿಗೆ ಸಹಾಯ ಮಾಡುತ್ತಿಲ್ಲ ಎಂದು ವಸುಂಧರಾ ಶರ್ಮ (@VasundharaTankh
) ಬರೆದಿದ್ದರು. This video completely broke my heart. Dilli waalon please please go eat at बाबा का ढाबा in Malviya Nagar if you get a chance Crying faceBroken heart #SupportLocal
ವಿಡಿಯೋದಲ್ಲಿ ಕಣ್ಣೀರಿಡುವ ಕಾಂತಾ ಪ್ರಸಾದ್
ಧಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್ ಹಾಗೂ ಅವರ ಪತ್ನಿ ಬಾದಾಮಿ ದೇವಿ ಲಾಕ್ ಡೌನ್ ಹಾಗೂ ನಂತರದ ಪರಿಸ್ಥಿತಿಯಲ್ಲಿ ವ್ಯಾಪಾರವಿಲ್ಲದೆ, ಮಾಡಿಟ್ಟ ಅಡುಗೆ ತಿನ್ನಲು ಜನರು ಬರದಿದ್ದರಿಂದ ಕಂಗಾಲಾಗಿದ್ದರು. ಬ್ಲಾಗರ್ ಗೌರವ್ ವಾಸನ್ ಅವರು ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, ನಂತರ ವಸುಂಧರಾ ಶರ್ಮ ಹಂಚಿಕೊಂಡು ವೈರಲ್ ಆಗಿದೆ. ಬೆಳಿಗ್ಗೆ 6.30ಕ್ಕೆ ತಮ್ಮ ಮನೆಯಲ್ಲಿ ದಾಲ್, ಪಲ್ಯ, ಪರೋಟ ಮತ್ತು ಅನ್ನ ತಯಾರಿಸಿ 9.30ರೊಳಗಾಗಿ ಈ ಧಾಬಾ ಓಪನ್ ಮಾಡುತ್ತೇವೆ. ಆದರೆ, ಜನ ಬರುತ್ತಿಲ್ಲ, ದಿನಕ್ಕೆ 60 ರು ವ್ಯಾಪಾರವಾದರೆ ಹೆಚ್ಚು ಎಂದು ಕಾಂತಾ ಪ್ರಸಾದ್ ಕಣ್ಣೀರಿಡುತ್ತಾರೆ.
|
ಹರಿದು ಬಂದ ನೆರವಿನ ಮಹಾಪೂರ
ಕ್ರಿಕೆಟ್ ಅಶ್ವಿನ್ ಕೇವಲ ಟ್ವೀಟ್ ಮಾಡಿದ್ದಷ್ಟೇ ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ಸಂಪರ್ಕಿಸಿ ನೆರವು ಒದಗಿಸಲು ಮುಂದಾಗಿದ್ದಾರೆ, ಜೋಮ್ಯಾಟೋ ಕೂಡಾ ನೆರವು ನೀಡಲು ಮುಂದೆ ಬಂದಿದೆ. ನಟಿ ಸೋನಂ ಕಪೂರ್, ಸುನಿಲ್ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಸಾರ್ವಜನಿಕರು ವೀಡಿಯೋ ಪೋಸ್ಟ್ ಹಂಚಿಕೊಂಡು ವೈರಲ್ ಆಗುತ್ತಿದ್ದಂತೆಯೇ ಎನ್ ಡಿಟಿವಿ ಕೂಡಾ ವರದಿ ಮಾಡಿ, ಇನ್ನಷ್ಟು ಜನರಿಗೆ ತಲುಪಿಸಿದೆ.
|
ಸಾಮಾಜಿಕ ಜಾಲ ತಾಣ ಸದ್ಬಳಕೆ ಹೀಗೆ ಮಾಡಬಹುದು
ಸಾಮಾಜಿಕ ಜಾಲ ತಾಣವನ್ನು ಒಳ್ಳೆಯದು ಹಾಗೂ ಕೆಟ್ಟದು ಎರಡಕ್ಕೂ ಬಳಸಬಹುದು. ಈ ಘಟನೆ ಸದ್ಬಳಕೆ ಹೇಗೆ ಮಾಡಬಹುದು ಎಂಬುದನ್ನು ತೋರಿಸಿದೆ. ಆಯ್ಕೆ ನಿಮ್ಮ ಮುಂದಿದೆ ಎಂದು ಅಶ್ವಿನ್ ಇಂದು ಟ್ವೀಟ್ ಮಾಡಿ, ವೃದ್ಧ ದಂಪತಿಗೆ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಸೋಷಿಯಲ್ ಮೀಡಿಯಾ ಪವರ್ ಅಂದ್ರೆ ಇದು ಎಂದು ತೋರಿಸಿದ್ದಾರೆ.
|
ಎಎಪಿ ಸಹ ಸಂಸ್ಥಾಪಕ ಸೋಮನಾಥ್ ಭಾರ್ತಿ
ಎಎಪಿ ಸಹ ಸಂಸ್ಥಾಪಕ, ಇದೇ ಕ್ಷೇತ್ರದ ಶಾಸಕರಾದ ಸೋಮನಾಥ್ ಭಾರ್ತಿ ಅವರು ಸೋಷಿಯಲ್ ಮೀಡಿಯಾದ ಈ ವೈರಲ್ ವಿಡಿಯೋ ಗಮನಿಸಿ, ಇಂದು ಬಾಬಾ ಕಾ ಧಾಬಾಗೆ ಭೇಟಿ ನೀಡಿದ್ದಾರೆ. ಭರವಸೆ ನೀಡಿದಂತೆ ಈ ದಂಪತಿ ಮುಖದಲ್ಲಿ ಮಂದಹಾಸ ಮೂಡಿಸಲಾಗಿದೆ. ಇವರ ಆರೈಕೆ ನಮ್ಮ ಜವಾಬ್ದಾರಿ. ಇದೇ ರೀತಿ ಆರ್ಥಿಕ ಹೊಡೆತಕ್ಕೆ ಸಿಲುಕಿದ ಸಣ್ಣ ಪುಟ್ಟ ಆಹಾರ ಮಳಿಗೆಗಳನ್ನು ರಕ್ಷಿಸಲು ಅಭಿಯಾನ ಆರಂಭಿಸಲಾಗುವುದು ಎಂದಿದ್ದಾರೆ.
|
ಬಾಬಾಗೆ ಇನ್ನೂ ಚಿಂತೆಯಿಲ್ಲ
ಬಾಬಾಗೆ ಇನ್ನೂ ಚಿಂತೆಯಿಲ್ಲ, ಜನತೆ ಸೂಕ್ತವಾಗಿ ಸ್ಪಂದಿಸಿದ್ದಾರೆ, ಮಾಳ್ವೀಯ ನಗರದ ಈ ರಸ್ತೆ ಬದಿ ಧಾಬಾ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವೃದ್ಧ ದಂಪತಿ ಬಿಡುವಿಲ್ಲದೆ ರೋಟಿ, ಪನ್ನೀರ್ ಬಟಾಣಿ ಖಾದ್ಯ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳ ಸೂಕ್ತ ಬಳಕೆಯಾಗಿದೆ ಎಂದು ಸಂಕೇತ್ ಉಪಾಧ್ಯಾಯ್ ವರದಿ ಮಾಡಿದ್ದಾರೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ