ಒಂದು ತಂಡ ಒಂದು ಗುರಿ
ಕನ್ನಡಿಗರ ಬೇಸರವನ್ನು ತುಸು ತಗ್ಗಿಸುವ ಪ್ರಯತ್ನವನ್ನು ಆರ್ಸಿಬಿಯ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆಗಳಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ರೋಮಾಂಚಕ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ ಚಾಹಲ್ , 'ಒಂದು ತಂಡ ಒಂದು ಗುರಿ' ಎಂದು ಕನ್ನಡದಲ್ಲಿ ಕ್ಯಾಪ್ಷನ್ ಬರೆದು ಕಪ್ ಎಮೋಜಿ ಬಳಸಿದ್ದಾರೆ.
ಕೊಹ್ಲಿ ಕಳಪೆ ಪ್ರದರ್ಶನದಲ್ಲೂ ಆರ್ಸಿಬಿ ಖುಷಿ ಪಡುವ ಸಂಗತಿ ಹೇಳಿದ ಆಕಾಶ್ ಚೋಪ್ರ
ಕನ್ನಡ & ಸಂಸ್ಕೃತಿ ಸಚಿವ
ಚಾಹಲ್ ಅವರ ಈ ಭಾಷಾ ಪ್ರೇಮ ಎಲ್ಲರ ಗಮನ ಸೆಳೆದಿದೆ. ಒಂದು ಕಡೆ ಮ್ಯಾಚ್ ಗೆದ್ದು, ಇನ್ನೊಂದೆಡೆ ನಮ್ಮ ಹೃದಯ ಗೆಲ್ಲುತ್ತಿದ್ದೀರಿ ಎಂದು ಆರ್ಸಿಬಿ ಅಭಿಮಾನಿಗಳು ಚಾಹಲ್ ಅವರನ್ನು ಕೊಂಡಾಡಿದ್ದಾರೆ. 'ಚಾಹಲ್ ಅವರನ್ನೇ ನಮ್ಮ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನಾಗಿ ಮಾಡಿ' ಎಂದು ಟ್ವಿಟ್ಟರಿಗರೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ನಮ್ಮ ಬೆಂಗಳೂರು ಕುಟುಂಬ
ಅಂದಹಾಗೆ, ಚಾಹಲ್ ತಾವು ಪ್ರತಿನಿಧಿಸುವ ತಂಡದ ರಾಜ್ಯಭಾಷೆಯನ್ನು ಬಳಸಿದ್ದು ಇದು ಮೊದಲ ಸಲವೇನಲ್ಲ. ಮಾರ್ಚ್ ತಿಂಗಳಲ್ಲಿ ಐಪಿಎಲ್ ಪ್ರಾರಂಭಿಸಲು ತಯಾರಿ ನಡೆಸುವಾಗಲೂ ಅವರು 'ನಮ್ಮ ಬೆಂಗಳೂರು ಕುಟುಂಬ, ರೆಡೀ ನಾ?' ಎಂದು ಕೇಳುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು.
ಐಪಿಎಲ್ನಲ್ಲಿ ಸೂಪರ್ ಓವರ್ನಲ್ಲಿ ಕಡಿಮೆ ರನ್ ನೀಡಿದ ಬೌಲರ್ಗಳು
ಉಮೇಶ್ ಯಾದವ್ ಕನ್ನಡ
ವೇಗದ ಬೌಲರ್ ಉಮೇಶ್ ಯಾದವ್ ಕೂಡ ಕೆಲವು ದಿನಗಳ ಹಿಂದೆ 'ನನ್ನ ಹೃದಯ ಯಾವಾಗಲೂ ಆರ್ಸಿಬಿಗಾಗಿ ಬಡಿಯುತ್ತದೆ' ಎಂದು ಆರ್ಸಿಬಿ ಆಂಥೆಮ್ಅನ್ನು ಹಂಚಿಕೊಂಡಿದ್ದರು. ಆಗ ಉಮೇಶ್ ಯಾದವ್ ಅವರನ್ನು ಫ್ಯಾನ್ಸ್ ಕೊಂಡಾಡಿದ್ದರು. ಆದರೆ ಎರಡು ಪಂದ್ಯಗಳಲ್ಲಿ ಅವರು ನೀಡಿದ ಕಳಪೆ ಪ್ರದರ್ಶನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.