ಸವಾಲಿನ ಗುರಿ ನೀಡಿದ ಆರ್ಸಿಬಿ
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟವನ್ನು ನೀಡಿದರು. ದೇವದತ್ ಪಡಿಕ್ಕಲ್ ತಮ್ಮ ಪದಾರ್ಪಣಾ ಪಂದ್ಯದಲ್ಲಿ 56 ರನ್ ಸಿಡಿಸಿ ಮಿಂಚಿದರು. ಬಳಿಕ ಬಂದ ಎಬಿ ಡಿವಿಲಿಯರ್ಸ್ 30 ಎಸೆತಗಳಲ್ಲಿ 51 ರನ್ ಸಿಡಿಸಿ ರನ್ ಹೆಚ್ಚುವಂತೆ ಮಾಡಿದರು. ಅಂತಿಮವಾಗಿ ಆರ್ಸಿಬಿ 163ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಹೈದರಾಬಾದ್ ಉತ್ತಮ ಆರಂಭ
ಈ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ವಿಕೆಟ್ ಬೇಗನೆ ಕಳೆದುಕೊಂಡರೂ ಮನೀಶ್ ಪಾಂಡೆ ಹಾಗೂ ಬೈರ್ಸ್ಟೋವ್ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ ಬೇರ್ಪಡುವವರೆಗೂ ಪಂದ್ಯ ಎಸ್ಆರ್ಹೆಚ್ ಕೈಯ್ಯಲ್ಲೇ ಇತ್ತು. ಆದರೆ ಬಳಿಕ ಇದ್ದಕ್ಕಿಂತೆ ಕುಸಿತ ಕಾಣಲು ಆರಂಭಿಸಿತು. ಬೈರ್ಸ್ಟೋವ್(61ರನ್) ಏಕಾಂಗಿಯಾಗಿ ಹೋರಾಡುವ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ.
ಮ್ಯಾಚ್ ವಿನ್ನರ್ ಆದ ಚಾಹಲ್
ಸನ್ ರೈಸರ್ಸ್ ಹೈದರಾಬಾದ್ ಕಡೆಗೆ ವಾಲಿದ್ದ ಪಂದ್ಯವನ್ನು ಮತ್ತೆ ಆರ್ಸಿಬಿಯತ್ತ ತರುವಲ್ಲಿ ಚಾಹಲ್ ಪ್ರಮುಖ ಪಾತ್ರವಹಿಸಿದರು. ನೆಲೆಯೂರಿದ್ದ ಬ್ಯಾಟ್ಸ್ಮನ್ಗಳಾದ ಬೈರ್ಸ್ಟೋವ್ ಮತ್ತು ಮನೀಶ್ ಪಾಂಡೆ ವಿಕೆಟ್ ಪಡೆಯುವುದರ ಜೊತೆಗೆ ವಿಜಯ್ ಶಂಕರ್ ವಿಕೆಟ್ ಕೂಡ ಕೆಡವಿದರು ಯುಜುವೇಂದ್ರ ಚಾಹಲ್. ಈ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಿಹಿಸಿದರು. ಈ ಸಾಧನೆಗೆ ಚಾಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿದರು.
ಎಡವಟ್ಟುಗಳ ಮಧ್ಯೆಯೂ ಆರ್ಸಿಬಿಗೆ ಗೆಲುವು
ಪಂದ್ಯದಲ್ಲಿ ಆರ್ಸಿಬಿ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡಿತು. ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನಕ್ಕೆ ಕಾರಣವಾದ ಕಳಪೆ ಫೀಲ್ಡಿಂಗ್ ಇಲ್ಲೂ ಮುಂದುವರಿದಿತ್ತು. ಅನಗತ್ಯ ರನ್, ಕ್ಯಾಚ್ಗಳನ್ನು ಬಿಡುವ ಅಭ್ಯಾಸ ಈ ಪಂದ್ಯದಲ್ಲೂ ಮುಂದುವರಿದಿರುವುದು ಆರ್ಸಿಬಿ ಪಾಲಿಗೆ ಉತ್ತಮ ಬೆಳವಣಿಗೆಯಲ್ಲ. ಡೆತ್ ಓವರ್ನಲ್ಲಿ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು ಆರ್ಸಿಬಿ ಪಾಲಿಗೆ ಸಮಾಧಾನ ನೀಡುವ ಸಂಗತಿಯಾದರೂ ಪ್ರಮುಖ ಬೌಲರ್ ಉಮೇಶ್ ಯಾದವ್ ಕಳಪೆ ಬೌಲಿಂಗ್ ಪ್ರದರ್ಶನ ಅರ್ಸಿಬಿ ಪಾಲಿಗೆ ತಲೆನೋವಾಗಿದೆ. ಆದರೆ ಈ