ಚೆನ್ನೈ: ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಸೋತು ಹಿನ್ನಡೆಯಲ್ಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಮುಖ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ಗೆ ಮತ್ತೊಂದು ಹಿನ್ನಡೆಯ ಸಂಗತಿ ಕೇಳಿ ಬಂದಿದೆ. ಸಿಎಸ್ಕೆ ಆಲ್ ರೌಂಡರ್ ಸುರೇಶ್ ರೈನಾ ಈ ಬಾರಿಯ ಐಪಿಎಲ್ನಲ್ಲಿ ಆಡುವ ಸಾಧ್ಯತೆಯೇ ಇಲ್ಲ ಎಂದು ಸಿಎಸ್ಕೆ ಸಿಇಒ ಕಾಸಿ ವಿಸ್ವನಾಥನ್ ಹೇಳಿದ್ದಾರೆ.
ಎಸ್ಆರ್ಎಚ್-ಕೆಕೆಆರ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು
ವೈಯಕ್ತಿಕ ಕಾರಣದಿಂದಾಗಿ ಈ ಬಾರಿಯ ಐಪಿಎಲ್ನಲ್ಲಿ ತಾನು ಆಡುತ್ತಿಲ್ಲ ಎಂದು ಸುರೇಶ್ ರೈನಾ ಟೂರ್ನಿಯ ಆರಂಭಕ್ಕೂ ಮುನ್ನವೇ ಹೇಳಿಕೊಂಡಿದ್ದರು. ಇದೇ ನಿರ್ಧಾರಕ್ಕೆ ಗಟ್ಟಿಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಭಾರತಕ್ಕೆ ವಾಪಸ್ಸಾಗಿದ್ದರು. ಆದರೆ ಟೂರ್ನಿ ಮಧ್ಯೆ ರೈನಾ ಅವರು ಸಿಎಸ್ಕೆ ಸೇರಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಆದರೆ ಆ ನಿರೀಕ್ಷೆ ಈಗ ಸುಳ್ಳೆನಿಸಿದೆ.
ಮಾಜಿ ನಾಯಕ ಗೌತಂ ಗಂಭೀರ್ ಹೇಳಿದ ಹಾಲೀ ಐಪಿಎಲ್ ನ ಬೆಸ್ಟ್ ಬ್ಯಾಟ್ಸ್ ಮ್ಯಾನ್
ಸುರೇಶ್ ರೈನಾ ಬಗ್ಗೆ ಮಾತನಾಡಿದರು ಕಾಸಿ ವಿಸ್ವನಾಥನ್, 'ನಾವು ಮತ್ತೆ ಸುರೇಶ್ ರೈನಾ ಅವರತ್ತ ಹಿಂದಿರುಗಿ ನೋಡುವುದಿಲ್ಲ. ಯಾಕೆಂದರೆ ತಾನು ಆಡಲ್ಲ ಅಂತ ಅವರೇ ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರನ್ನು ಮತ್ತೆ ತಂಡಕ್ಕೆ ಕರೆತರುವ ಬಗ್ಗೆ ನಾವು ಯೋಚಿಸುತ್ತಿಲ್ಲ,' ಎಂದಿದ್ದಾರೆ.
ಐಪಿಎಲ್: ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಅರ್ಧ ಶತಕ ಬಾರಿಸಿದ ಬ್ಯಾಟ್ಸ್ಮನ್ಗಳು
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ 16 ರನ್ನಿಂದ ಪರಾಭವಗೊಂಡಿತ್ತು. ಇನ್ನು ಯುವಕರು ಹೆಚ್ಚಿರುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಿಎಸ್ಕೆ 44 ರನ್ ಸೋಲನುಭವಿಸಿತ್ತು. ಸರಣಿ ಸೋಲು ಕಂಡಿರುವ ಸಿಎಸ್ಕೆಗೆ ಈಗ ರೈನಾ ಬಲವೂ ಇಲ್ಲವಾಗಿದೆ. ಅಕ್ಟೋಬರ್ 2ರಂದು ಸಿಎಸ್ಕೆ ತಂಡ ಸನ್ ರೈಸರ್ಸ್ ಹೈದರಾಬಾದ್ ಸವಾಲು ಸ್ವೀಕರಿಸಲಿದೆ.