ಈ ಆಟಗಾರ ಮೌಲ್ಯ ಗುರುತಿಸಲಿಲ್ಲ
ಈ ಬಾರಿಯ ಐಪಿಎಲ್ನಲ್ಲಿ ಭಾರತದ ಆಟಗಾರರ ಪೈಕಿ ಕನ್ನಡಿಗ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರ ಆಟಕ್ಕೆ ಸಿಗಬೇಕಾದ ಮೌಲ್ಯ ದೊರೆಯಲಿಲ್ಲ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. 30ರ ಹರೆಯದ ಆಟಗಾರ ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದರೂ ಅವರಿಗೆ ದೊರೆಯಬೇಕಾದ ಗೌರವ ನೀಡಿಲ್ಲ ಎಂದಿದ್ದಾರೆ.
ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದ ಆರ್ಸಿಬಿ; ಸೋಲಿಗೆ ಕಾರಣ ತಿಳಿಸಿದ ಕೊಹ್ಲಿ
ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಅಗರ್ವಾಲ್
ಈ ಬಾರಿಯ ಆವೃತ್ತಿಯಲ್ಲಿಯೂ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2021ರ ಆವೃತ್ತಿಯಲ್ಲಿ ಮಯಾಂಕ್ ಅಗರ್ವಾಲ್ 12 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 40.09ರ ಸರಾಸರಿಯಲ್ಲಿ ಮಯಾಂಕ್ 441 ರನ್ಗಳಿಸಿದ್ದಾರೆ. 140.44ರಷ್ಟು ಸ್ಟ್ರೈಕ್ರೇಟ್ನಲ್ಲಿ ಮಯಾಂಕ್ ಬ್ಯಾಟ್ ಬೀಸಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ಮಯಾಂಕ್ ಅಗರ್ವಾಲ್ 8ನೇ ಸ್ಥಾನದಲ್ಲಿದ್ದಾರೆ.
ಧವನ್, ಗಾಯಕ್ವಾಡ್ ಅವರಷ್ಟೇ ಅತ್ಯುತ್ತಮ ಪ್ರದರ್ಶನ
44ರ ಹರೆಯದ ಆಕಾಶ್ ಚೋಪ್ರ ಯೂಟ್ಯೂಬ್ ಚಾನೆಲ್ನ ಸಂವಾದದಲ್ಲಿ ಮಾತನಾಡುತ್ತಾ ಮಯಾಂಕ್ ಅಗರ್ವಾಲ್ ಈ ಬಾರಿಯ ಐಪಿಎಲ್ನಲ್ಲಿ ಬಹಳ ಅಂಡರ್ರೇಟೆಡ್ ಆಟಗಾರ ಎನಿಸಿದ್ದಾರೆ ಎಂದು ವಿವರಿಸಿದರು. ಅಲ್ಲದೆ ಈ ಆಟಗಾರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಅವರಷ್ಟೇ ಯಶಸ್ವೀ ಆರಂಭಿಕ ಆಟಗಾರನಾಗಿದ್ದಾರೆ ಎಂದು ಕೂಡ ಚೋಪ್ರ ಹೇಳಿದರು. "ಜನರು ಶಿಖರ್ ಧವನ್, ಪೃಥ್ವಿ ಶಾ, ಕೆಎಲ್ ರಾಹುಲ್ರಿಂದ ಹಿಡಿದು ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ವರೆಗೆ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಇದು ಬಹಳ ಉತ್ತಮ. ಆದರೆ ಮಯಾಂಕ್ ಅಗರ್ವಾಲ್ ಹೆಸರು ಎಲ್ಲಿದೆ? ಆತನ ಪ್ರದರ್ಶನ ಕೂಡ ಅತ್ಯಂತ ಅಮೋಘವಾಗಿತ್ತು" ಎಂದಿದ್ದಾರೆ ಆಕಾಶ್ ಚೋಪ್ರ.
ರಾಹುಲ್ ಮುಂದೆ ಮಂಕಾದ ಮಯಾಂಕ್
ಇನ್ನು ಈ ಭಾರಿಯ ಐಪಿಎಲ್ನಲ್ಲಿ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನ ನೀಡಿದರೂ ಆ ಪ್ರದರ್ಶನಕ್ಕೆ ಸೂಕ್ತ ಮನ್ನಣೆ ದೊರೆಯದಿರಲು ಪಂಜಾಬ್ ಕಿಂಗ್ಸ್ ತಂಡದ ನಾಯಕನೂ ಆಗಿರುವ ಕೆಎಲ್ ರಾಹುಲ್ ನೀಡಿದ ಪ್ರದರ್ಶನವೂ ಕಾರಣವಾಗಿರಬಹುದು ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ. "ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದಿರುವುದೇ ಅವರ ಆಟಕ್ಕೆ ಹೆಚ್ಚಿನ ಮನ್ನಣೆ ದೊರೆಯದಿರಲು ಕಾರಣ ಎಮದು ಭಾಸವಾಗುತ್ತದೆ. ರಾಹುಲ್ ಓರ್ವ ದೊಡ್ಡ ಆಟಗಾರ. ಮಯಾಂಕ್ ಯಾವಾಗಲೂ ಆತನ ನೆರಳಿನಲ್ಲಿಯೇ ಆಡುತ್ತಾರೆ" ಎಂದು ಕೆಎಲ್ ರಾಹುಲ್ ಮಯಾಂಕ್ ಅಗರ್ವಾಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಯಾಂಕ್ ನಾಯಕತ್ವದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಚೋಪ್ರ
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಮಯಾಂಕ್ ಅಗರ್ವಾಲ್ ನಾಯಕನಾಗಿಯೂ ಮಿಂಚಬಲ್ಲ ಆಟಗಾರ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಐಪಿಎಲ್ಗೆ ಮಯಾಂಕ್ ಅಗರ್ವಾಲ್ರನ್ನು ಪಂಜಾಬ್ ಕಿಂಗ್ಸ್ ಬಿಡುಗಡೆಗೊಳಿಸಿದರೆ ಸೇರ್ಪಡೆಯಾಗಲಿರುವ ಎರಡು ಹೊಸ ತಂಡಗಳ ಪೈಕಿ ಒಂದು ತಂಡಕ್ಕೆ ನಾಯಕನಾಗುವ ಸಾಮರ್ಥ್ಯ ಮಯಾಂಕ್ ಅಗರ್ವಾಲ್ಗೆ ಇದೆ ಎಂದಿದ್ದಾರೆ ಆಕಾಶ್ ಚೋಪ್ರ.