ಮತ್ತೊಂದು ರೋಮಾಂಚನಕಾರಿ ಪಂದ್ಯ ಐಪಿಎಲ್ನಲ್ಲಿ ಅಭಿಮಾನಿಗಳನ್ನು ಮನರಂಜಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ ಅಂತಿಮ ಹಂತದಲ್ಲಿ ಅನಿರೀಕ್ಷಿತ ರೀತಿಯಲ್ಲಿ ತಿರುಗಿ ಬಿದ್ದು ಪಂದ್ಯವನ್ನು ಗೆದ್ದುಕೊಂಡಿದೆ. ಈ ಸೋಲಿನ ಬಳಿಕ ಡೆಲ್ಲಿ ನಾಯಕ ರಿಷಭ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ವಿಕೆಟ್ಗಳ ಅಂತರದ ಸೋಲಿನಲ್ಲಿ ಇಬ್ಬನಿ ದೊಡ್ಡ ಪಾತ್ರವನ್ನು ವಹಿಸಿತು ಎಂದು ರಿಷಭ್ ಪಂತ್ ಹೇಳಿದ್ದಾರೆ. ಇದರ ಜೊತೆಗೆ ತಂಡ 15-25 ರನ್ಗಳ ಕೊರತೆಯನ್ನು ಅನುಭವಿಸಿತು ಎಂದು ಪಂತ್ ಒಪ್ಪಿಕೊಂಡಿದ್ದಾರೆ.
ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೇಗಿ ಜಯದೇವ್ ಉನಾದ್ಕಟ್ ಅತ್ಯುತ್ತಮ ಯಶಸ್ಸು ನೀಡಿದರು. 15 ರನ್ಗಳನ್ನು ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂರು ವಿಕೆಟ್ ಪಡೆದುಕೊಂಡರು. ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 147 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿತು. ನಾಯಕ ಪಂತ್ 51 ರನ್ಗಳ ಕೊಡುಗೆಯನ್ನು ನೀಡಿದ್ದರು.
"ಆರಂಭದಲ್ಲಿ ಬೌಲರ್ಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರು. ಆದರೆ ಅಂತಿಮ ಘಟ್ಟದಲ್ಲಿ ನಮಗಿಂತ ಮೇಲೇರಲು ಅವಕಾಶ ಮಾಡಿಕೊಟ್ಟೆವು. ಆ ಹಂತದಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಬೌಲಿಂಗ್ಅನ್ನು ಮಾಡಬಹುದಾಗಿತ್ತು. ಇದು ಆಟದ ಭಾಗ. ಇಬ್ಬನಿ ಪರಿಣಾಮವನನು ಬೀರಿತು. ಜೊತೆಗೆ ನಾವು 15-25 ರನ್ಗಳ ಕೊರತೆಯನ್ನು ಅನುಭವಿಸಿದೆವು" ಎಂದಿದ್ದಾರೆ ರಿಷಭ್ ಪಂತ್
ಐಪಿಎಲ್: ಕೆಟ್ಟ ದಾಖಲೆ ಮುಂದುವರೆಸಿದ ಪೃಥ್ವಿ ಶಾ
"ಆದರೆ ಈ ಪಂದ್ಯದಲ್ಲಿ ವಿಶೇಷವಾದದ್ದನ್ನು ನಾನು ಪಡೆದುಕೊಂಡಿದ್ದೇವೆ. ಆರಂಭದಲ್ಲಿ ಬೌಲರ್ಗಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು" ಎಂದು ರಿಷಭ್ ಪಂತ್ ಹೇಳಿದ್ದಾರೆ. ಈ ಮೂಲಕ ಪಂತ್ ಪಡೆ ಎರಡು ಪಂದ್ಯಗಳಲ್ಲಿ ಮೊದಲ ಸೋಲು ಕಂಡಿದ್ದರೆ ರಾಜಸ್ಥಾನ್ ರಾಯಲ್ಸ್ಗೆ ಇದು ಪ್ರಥಮ ಗೆಲುವಾಗಿದೆ.