6 ಓವರ್ಗಳಲ್ಲಿ ಹಿಡಿತ ಸಾಧಿಸಬಹುದಿತ್ತು
ನಾಯಕ ಇಯಾನ್ ಮಾರ್ಗನ್ ಅವರ ಈ ತಂತ್ರವನ್ನು ಗಂಭೀರ್ ಕಟುವಾಗಿ ಟೀಕಿಸಿದ್ದಾರೆ. "ಇದು ನಾನು ನನ್ನ ಜೀವನದಲ್ಲಿ ಕಂಡ ಅತ್ಯಂತ ಕಳಪೆ ಹಾಗೂ ವಿಲಕ್ಷಣವಾದ ನಾಯಕತ್ವ. ವರುಣ್ ಚಕ್ರವರ್ತಿ ಮೊದಲ ಓವರ್ನಲ್ಲಿ ಎರಡು ವಿಕೆಟ್ ಪಡೆದರು. ಆದರೆ ಮುಂದಿನ ಓವರ್ ಎಸೆಯಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಅವರನ್ನು ಉತ್ತಮವಾಗಿ ಬಳಸಿಕೊಂಡಿದ್ದರೆ ಮೊದಲ ಆರು ಓವರ್ನಲ್ಲಿ ಪಂದ್ಯವನ್ನು ನಿಮ್ಮತ್ತ ವಾಲುವಂತೆ ಮಾಡಬಹುದಿತ್ತು" ಎಂದು ಗಂಭೀರ್ ಹೇಳಿದ್ದಾರೆ.
ಭಾರತೀಯ ನಾಯಕನಿಂದ ಈ ಪ್ರಮಾದವಾಗಿಲ್ಲ!
" ಮೊದಲ ಆರು ಓವರ್ಗಳಲ್ಲಿ ವರುಣ್ ಚಕ್ರವರ್ತಿ ಮೂರನೇ ವಿಕೆಟ್ ಪಡೆದಿದ್ದರೆ ಅಥವಾ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಫೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾಗಿರುತ್ತಿದ್ದರೆ ಈ ಆಟ ಬಹುತೇಕ ಅಲ್ಲಿಗೆ ಅಂತ್ಯವಾಗುತ್ತಿತ್ತು. ಖುಷಿಯ ಸಂಗತಿಯೆಂದರೆ ಈ ಪ್ರಮಾದವನ್ನು ಭಾರತೀಯ ನಾಯಕ ಮಾಡಿಲ್ಲ. ಯಾಕೆಂದರೆ ಭಾರತೀಯ ನಾಯಕ ಈ ರೀತಿ ಮಾಡಿದ್ದರೆ ಸಾಕಷ್ಟು ಜನರು ಆ ನಾಯಕನ ವಿರುದ್ಧ ಕಟು ಮಾತುಗಳನ್ನು ಹೊರಹಾಕುತ್ತಿದ್ದರು" ಎಂದು ಗಂಭೀರ್ ಹೇಳಿದ್ದಾರೆ.
ಇದನ್ನು ನಾನು ನಿರೀಕ್ಷಿಸಿರಲಿಲ್ಲ
"ನಾನು ಕಂಡ ಅತ್ಯಂತ ವಿಚಿತ್ರವಾದ ನಾಯಕತ್ವ ಇದು. ಇದನ್ನು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ" ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಪಂದ್ಯದ ಮೊದಲಾರ್ಧದ ವೇಳೆ ಮಾತನಾಡುತ್ತಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬೃಹತ್ ಗುರಿ ನೀಡಿದ ಆರ್ಸಿಬಿ
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರಂಭಿಕ ಆಘಾತದ ನಂತರ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಅದ್ಭುತ ಪ್ರದರ್ಶನದಿಂದ ದೊಡ್ಡ ಮೊತ್ತವನ್ನು ಗಳಿಸಿತು. ಇಬ್ಬರು ಆಟಗಾರರು 70+ ರನ್ಗಳಿಸಿದ್ದು ಆರ್ಸಿಬಿ 205 ರನ್ಗಳ ಗುರಿಯನ್ನು ಮುಂದಿಟ್ಟಿತು.