ರಾಹುಲ್ ವಿಧಾನ ಸಮರ್ಥಿಸಿದ ಜಾಫರ್
ಇನ್ನು ಕಳೆದ ಬಾರಿಯ ಆವೃತ್ತಿಯಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಬ್ಯಾಟಿಂಗ್ ವಿಧಾನವನ್ನು ಸಮರ್ಥನೆ ಮಾಡಿಕೊಂಡರು. ಕಳೆದ ಆವೃತ್ತಿಯಲ್ಲಿ ಐದನೇ ಕ್ರಮಾಂಕದ ನಂತರ ಬಲಿಷ್ಠ ಆಟಗಾರರು ಇರಲಿಲ್ಲ. ಹಾಗಾಗಿ ಅವರು ದೀರ್ಘ ಕಾಲ ಆಡಬೇಕಾಗಿತ್ತು ಎಂದು ವಾಸಿಂ ಜಾಫರ್ ವಿವರಿಸಿದ್ದಾರೆ.
ಅಂಜಿಕೆಯಿಂದ ಬ್ಯಾಟಿಂಗ್ ಮಾಡಿದ್ದರು
"ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಅಂಜಿಕೆಯಿಂದಲೇ ಬ್ಯಾಟಿಂಗ್ ಮಾಡಿದ್ದರು. ಐದನೇ ಕ್ರಮಾಂಕದ ನಂತರ ಹೆಚ್ಚಿನ ಬ್ಯಾಟಿಂಗ್ ಸಾಮರ್ಥ್ಯ ತಂಡದಲ್ಲಿ ಇಲ್ಲವಾಗಿದ್ದ ಕಾರಣ ಹಾಗೂ ಮ್ಯಾಕ್ಸ್ವೆಲ್ ಫಾರ್ಮ್ನಲ್ಲಿ ಇಲ್ಲದ ಕಾರಣದಿಂದಾಗಿ ಅವರು ಸುದೀರ್ಘ ಕಾಲ ಕ್ರೀಸ್ನಲ್ಲಿ ಇರಬೇಕಾಗಿತ್ತು. ಹೀಗಾಗಿ ಅವರು ಆ ಜವಾಬ್ಧಾರಿಯನ್ನು ವಹಿಸಿಕೊಂಡು ಆದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಆದರೆ ಈ ಬಾರಿ ಆಕ್ರಮಣಕಾರಿ ಕೆಎಲ್ ರಾಹುಲ್ ಅವರನ್ನು ನೀವು ಖಂಡಿತವಾಗಿಯೂ ನೋಡಲಿದ್ದೀರಿ" ಎಂದು ವಾಸಿಂ ಜಾಫರ್ ಹೇಳಿದ್ದಾರೆ.
ಒಂದು ಸರಣಿಯಿಂದ ಕೆಟ್ಟ ಆಟಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ
ಇನ್ನು ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವರ ಕಳಪೆ ಪ್ರದರ್ಶನವನ್ನು ಉಲ್ಲೇಖಿಸಿ ಮಾತನಾಡಿದ ಜಾಫರ್ ಒಂದು ಕೆಟ್ಟ ಟಿ20 ಸರಣಿ ಅವರನ್ನು ಕೆಟ್ಟ ಆಟಗಾರ ಎಂದು ಪರಿಗಣಿಸುವಂತೆ ಮಾಡಲಾರದು. ಆತ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿಯೂ ಶತಕವನ್ನು ಬಾರಿಸಿದ ಆಟಗಾರ. ಆತನ ಆಟ ಹೇಗಿದೆ ಎಂಬುದನ್ನು ಎಲ್ಲರಿಗಿಂತಲೂ ಚೆನ್ನಾಗಿ ಆರಿತುಕೊಂಡಿದ್ದಾರೆ" ಎಂದು ಕೆಎಲ್ ರಾಹುಲ್ಗೆ ಬೆಂಬಲಿಸಿ ಮಾತನಾಡಿದರು.