ಸಕಾರಾತ್ಮಕವಾಗಿ ನೋಡುತ್ತೇವೆ
"ನಾವು ಇದನ್ನು ಸರಿಯಾದ ರೀತಿಯಲ್ಲಿ ನೋಡಬೇಕಿದೆ. ಈ ಸೋಲು ನಮಗೆ ಸರಿಯಾದ ಸಮಯದಲ್ಲಿ ಬಂದಿದೆ. ಎಡವಬಹುದಾದ ವಿಚಾರಗಳ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ನನ್ನ ಪ್ರಕಾರ ಇದೊಂದು ಸಕಾರಾತ್ಮಕವಾದ ಪ್ರತಿಕ್ರಿಯೆಯಾಗಿದೆ. ಟೂರ್ನಿಯ ಆರಂಭದಲ್ಲಿ ಈ ರೀತಿ ಪ್ರದರ್ಶನ ಪಡೆಯುವುದು ಒಳ್ಳೆಯದು. ಪಂದ್ಯ ಹೆಚ್ಚಿನ ಕಾಲ ನಮ್ಮ ಕೈಯ್ಯಲ್ಲಿಯೇ ಇತ್ತು. ಆದರೆ ಪ್ರಮುಖ ಅಂಶವನ್ನು ನಾವು ಕಳೆದುಕೊಂಡೆವು" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಜಡ್ಡು ನಮ್ಮಿಂದ ಪಂದ್ಯವವನ್ನು ಕಸಿದರು
"ಇಂದಿನ ಆಟದಲ್ಲಿ ರವೀಂದ್ರ ಜಡೇಜಾ ತಮ್ಮ ಅತ್ಯುತ್ತಮ ಕೌಶಲ್ಯವನ್ನು ಪ್ರದರ್ಶಿಸಿದರು. ಕೇವಲ ಓರ್ವ ಆಟಗಾರ ನಮ್ಮನ್ನು ಸೋಲಿಸಿದ ಎಂದು ಬಹುಶಃ ನೀವು ಹೇಳಬಹುದು" ಎಂದು ಆರ್ಸಿಬಿ ನಾತಕ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಹರ್ಷಲ್ ಬೆನ್ನಿಗೆ ನಿಂತ ನಾಯಕ
ಇನ್ನಿ ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಅಂತಿಮ ಓವರ್ನಲ್ಲಿ 37 ರನ್ಗಳನ್ನು ಬಿಟ್ಟುಕೊಟ್ಟ ಹರ್ಷಲ್ ಪಟೇಲ್ ಬಗ್ಗೆಯೂ ಮಾತನಾಡಿದರು. "ನಾವು ಆತನಿಗೆ ನೀಡುವ ಜವಾಬ್ಧಾರಿಯನ್ನು ಮುಂದುವರಿಸುತ್ತೇವೆ. ಆತ ಇಬ್ಬರು ಸೆಟ್ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದ್ದ. ಅದೊಂದು ಓವರ್ ಎಲ್ಲವನ್ನೂ ಕಸಿದುಕೊಂಡಿತು. ಈ ವಿಚಾರವನ್ನು ಸೂಕ್ತವಾದ ಕೋನದಿಂದ ನೋಡಬೇಕಿದೆ. ಅದನ್ನು ಬದಿಗೆ ಸರಿಸಿ ಅದರಿಂದ ಪಾಠ ಕಲಿಯಬೇಕು" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಶ್ರೇಷ್ಠ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಂಪೂರ್ಣ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. ಮೊದಲಿಗೆ ಬ್ಯಾಟ್ನಲ್ಲಿ ಒಂದೇ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿ ಸ್ಪೋಟಕ ಅರ್ಧ ಶತಕ ಸಿಡಿಸಿದ ರವೀಂದ್ರ ಜಡೇಜಾ ಬಳಿಕ ಬೌಲಿಂಗ್ನಲ್ಲಿಯೂ ಆರ್ಸಿಬಿ ಕಂಟಕವಾದರು. ಪ್ರಮುಖ ಮೂರು ವಿಕೆಟ್ಗಳು ಜಡ್ಡು ಪಾಲಾಯಿತು. ಜೊತೆಗೆ ಒಂದು ರನ್ಔಟ್ಗೂ ರವೀಂದ್ರ ಜಡೇಜಾ ಕಾರಣರಾದರು.