ಟೂರ್ನಿ ಯಾವುದೇ ಕಾರಣಕ್ಕೂ ರದ್ದಾಗದಿರಲಿ ಎಂದ ಸೆಹ್ವಾಗ್
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ವಿವಿಧ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂಬ ಸುದ್ದಿಯನ್ನು ಕೇಳಿ ಆತಂಕಕ್ಕೊಳಗಾಗಿದ್ದೆ, ಯಾವುದೇ ಕಾರಣಕ್ಕೂ ಈ ಬಾರಿಯ ಐಪಿಎಲ್ ಟೂರ್ನಿ ಮತ್ತೆ ಸ್ಥಗಿತಗೊಳ್ಳಬಾರದು ಎಂದು ವಿರೇಂದ್ರ ಸೆಹ್ವಾಗ್ ಹೇಳಿಕೆ ನೀಡಿದ್ದಾರೆ.
ಹೀಗೆ ಪದೇ ಪದೇ ಟೂರ್ನಿ ಮುಂದೂಡಲ್ಪಟ್ಟರೆ ಚೆನ್ನೈ ಆಟಗಾರರು ಮುದುಕರಾಗಿರುತ್ತಾರೆ ಎಂದ ಸೆಹ್ವಾಗ್
ಈಗಾಗಲೇ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಒಮ್ಮೆ ಮುಂದೂಡಲ್ಪಟ್ಟಿದೆ, ಈಗ ಯುಎಇಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿಯೂ ಕೂಡ ಕೊರೋನಾ ಸೋಂಕಿನ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಿರೇಂದ್ರ ಸೆಹ್ವಾಗ್ ಈ ಬಾರಿಯೂ ಐಪಿಎಲ್ ಟೂರ್ನಿಯನ್ನು ಮುಂದೂಡಿದರೆ ಹಾಗೂ ಪ್ರತಿ ಸಲ ಈ ರೀತಿಯ ಕೊರೊನಾ ಸೋಂಕಿನ ಪ್ರಕರಣಗಳು ಬಂದಾಗಲೆಲ್ಲ ಇದೇ ರೀತಿ ಈ ಬಾರಿಯ ಟೂರ್ನಿಯನ್ನು ಮುಂದೂಡುತ್ತಾ ಹೋದರೆ ಮುಂದೊಂದು ದಿನ ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ಸಮಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರೆಲ್ಲಾ ಮುದುಕರಾಗಿರುತ್ತಾರೆ ಹಾಗೂ ಅವರು ವಿಮಾನ ಪ್ರಯಾಣ ಮಾಡುವಾಗ ಕಡಿಮೆ ಮೊತ್ತದ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು ಎಂದು ಹಾಸ್ಯಾಸ್ಪದವಾಗಿ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಕಪ್ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್
ಇನ್ನು ಈ ಹಿಂದೆ ಮಾತನಾಡಿದ್ದ ವಿರೇಂದ್ರ ಸೆಹ್ವಾಗ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅಥವಾ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿಜೇತ ತಂಡವಾಗಿ ಹೊರ ಹೊಮ್ಮಲಿದ್ದು ಟ್ರೋಫಿಯನ್ನು ಗೆಲ್ಲಬಹುದಾದ ತಂಡಗಳಾಗಿವೆ ಎಂದು ಭವಿಷ್ಯ ನುಡಿದಿದ್ದರು.