ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಭುಜದ ನೋವಿಗೆ ಒಳಗಾಗಿ ಗಾಯಗೊಂಡಿದ್ದರು. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣ ಐಯ್ಯರ್ ಮುಂಬರುವ ಐಪಿಎಲ್ನಿಂದ ಸಂಒಊರ್ಣವಾಗಿ ಹೊರಗುಳಿಯಬೇಕಾದ ಸ್ಥಿತಿ ಉಂಟಾಗಿದೆ.
ಆದರೆ ಶ್ರೇಯಸ್ ಐಯ್ಯರ್ ಐಪಿಎಲ್ನಲ್ಲಿ ಆಡುವ ಅವಕಾಶದಿಂದ ವಂಚಿತರಾದರೂ ಐಪಿಎಲ್ನ ತಮ್ಮ ಸಂಬಳವನ್ನು ಅವರು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲಿದ್ದಾರೆ. ಬಿಸಿಸಿಐನ ಇನ್ಶುರೆನ್ಸ್ ಪಾಲಿಸಿಯ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ ತಮ್ಮ ಸಂಬಳದ ಮೊತ್ತವಾದ 7 ಕೋಟಿಯನ್ನು ಪಡೆಯಲಿದ್ದಾರೆ.
ಆರ್ಸಿಬಿಯ 'ಐಪಿಎಲ್ ಕಪ್'ನ ಬರ ನೀಗಿಸ್ತಾರಾ ಮ್ಯಾಕ್ಸ್ವೆಲ್, ಜೇಮಿಸನ್?
ಶ್ರೇಯಸ್ ಐಯ್ಯರ್ ಕೇಂದ್ರೀಯ ಗುತ್ತಿಗೆ ಹೊಂದಿರುವ ಆಟಗಾರನಾಗಿದ್ದಾರೆ ಮತ್ತು ಅವರು ರಾಷ್ಟ್ರೀಯ ತಂಡದ ಪರವಾಗಿ ಆಡುತ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಈ ಲಾಭವನ್ನು ಅವರು ಪಡೆದುಕೊಳ್ಳಲಿದ್ದಾರೆ. 2011ರಿಂದ ಇದು ಆಟಗಾರರಿಗೆ ಅನ್ವಯವಾಗುತ್ತಿದೆ.
ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುತ್ತಿರುವ ಕಾರಣ ನಾಯಕತ್ವ ಬದಲಾಗಿದೆ. ಯುವ ಆಟಗಾರ ರಿಷಭ್ ಪಂತ್ ಈ ಬಾರಿ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಐಪಿಎಲ್: ಟ್ವಿಟರ್ ವಿರುದ್ಧ ಆರ್ಸಿಬಿ ಅಸಮಾಧಾನ, ಏನಿದು ವಿವಾದ!?
ಮತ್ತೊಂದೆಡೆ ಐಪಿಎಲ್ 2021 ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರದಿಂದ ಸಿದ್ಧತೆಯನ್ನು ನಡೆಸುತ್ತಿದೆ. ಕೋಚ್ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಎಲ್ಲಾ ಆಟಗಾರರು ಕೂಡ ತರಬೇತಿಯನ್ನು ಆರಂಭಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ.