ಚಡಪಡಿಸುತ್ತಿದ್ದ ಕಾವ್ಯ
ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ರೋಚಕ ಪಂದ್ಯ ನಡೆಯುವಾಗ ಸನ್ ರೈಸರ್ಸ್ ಹೈದರಾಬಾದ್ ಸಹ ಮಾಲೀಕೆ ಕಾವ್ಯ ಮಾರನ್ ಚಡಪಡಿಸುತ್ತಿರುವುದು ಕಾಣಿಸಿತ್ತು. ಸ್ಟೇಡಿಯಂನ ಬದಿಯಲ್ಲಿ ಕುಳಿತಿದ್ದ ಕಾವ್ಯ, ಮನೀಶ್ ಪಾಂಡೆ ಔಟಾದಾಗಂತೂ ತುಂಬಾ ಬೇಸರ ಪಟ್ಟಿದ್ದರು. ಕಾವ್ಯಾ ಅವರ ಬೇಸರದ ಚಿತ್ರಗಳಿಗೆ ನೆಟ್ಟಿಗರು ಕೂಡ ಮರುಗಿದ್ದಾರೆ.
ಬ್ಯಾಟ್ಸ್ಮನ್ಗಳು ಬೇಗಬೇಗನೆ ಔಟ್
13.2ನೇ ಓವರ್ನಲ್ಲಿ ಡೇವಿಡ್ ವಿಕೆಟ್ ಪತನವಾದಾಗ ಕೂಡ ಕಾವ್ಯ ಮುಖದಲ್ಲಿ ಬೇಸರ ಕಾಣಿಸಿಕೊಂಡಿತ್ತು. ಅದಾಗಿ ಜಾನಿ ಬೇರ್ಸ್ಟೋವ್, ಮನೀಶ್ ಪಾಂಡೆ, ಅಬ್ದುಲ್ ಸಮದ್, ವಿಜಯ್ ಶಂಕರ್, ಜೇಸನ್ ಹೋಲ್ಡರ್ ಎಲ್ಲರೂ ಬೇಗ ಬೇಗನೆ ವಿಕೆಟ್ ಒಪ್ಪಿಸಿದರು.
|
ಜಾಲತಾಣದಲ್ಲಿ ಫೋಟೋ ವೈರಲ್
ಎಸ್ಆರ್ಎಚ್ ಸೋಲಿನಂಚಿಗೆ ನಡೆಯುತ್ತಿದ್ದಾಗ ವೇಳೆ ಕಾವ್ಯ ಚಡಪಡಿಸುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅನೇಕ ಕ್ರಿಕೆಟ್ ಅಭಿಮಾನಿಗಳು ಈಕೆ ಇಷ್ಟು ಬೇಸರಗೊಳ್ಳುವ ರೀತಿ ಆಡಬೇಡಿ, ಇದನ್ನು ನಮ್ಮಿಂದ ನೋಡಲಾಗುತ್ತಿಲ್ಲ,' ಎಂದು ಟ್ವೀಟ್ಗಳನ್ನು ಮಾಡಿದ್ದಾರೆ.
ಯಾರೀ ಕಾವ್ಯ ಮಾರನ್?
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಮಾಲೀಕ ಕಲಾನಿಧಿ ಮಾರನ್ ಅವರ ಪತ್ರಿ ಈ ಕಾವ್ಯ ಮಾರನ್. ಇನ್ನು ಈ ಕಲಾನಿಧಿ ಮಾರನ್ ಯಾರೆಂದರೆ, ಸನ್ ಟಿವಿ ನೆಟ್ವರ್ಕ್ಸ್ನ ಮಾಲೀಕ. ಭಾರತದಲ್ಲಿ ದೊಡ್ಡ ದೂರದರ್ಶನ ಜಾಲ ಹೊಂದಿರುವ ಸನ್ ಟಿವಿ ನೆಟ್ವರ್ಕ್ಸ್ 32 ಟಿವಿ ಚಾನೆಲ್ಗಳು ಮತ್ತು 45 ಎಫ್ಎಂ ರೇಡಿಯೋ ಸ್ಟೇಶನ್ಗಳನ್ನು ಹೊಂದಿದೆ (ಚಿತ್ರದಲ್ಲಿ ಕಲಾನಿಧಿ ಮಾರನ್, ಎಡಬದಿಯಲ್ಲಿ).