|
ಥರ್ಡ್ ಅಂಪೈರ್ನಿಂದ ತಪ್ಪು ತೀರ್ಪು
ದೇವದತ್ ಪಡಿಕ್ಕಲ್ ಬ್ಯಾಟ್ ಸಮೀಪದಿಂದ ಚೆಂಡು ಪಾಸಾಗಿದ್ದರಿಂದ ಅದು ಔಟ್ ಎಂದು ನಾಯಕ ಕೆಎಲ್ ರಾಹುಲ್ ಅಂಪೈರ್ ಅವರಲ್ಲಿ ಕೋರಿಕೊಂಡರು. ಆದರೆ ಆನ್ ಫೀಲ್ಡ್ ಅಂಪೈರ್ ನಾಟ್ ಔಟ್ ತೀರ್ಪು ನೀಡಿದರು. ಆಗ ಡಿಸಿಶನ್ ರಿವ್ಯೂಗಾಗಿ ಆನ್ ಫೀಲ್ಡ್ ಅಂಪೈರ್ ಅವರಲ್ಲಿ ಕೋರಿಕೊಂಡರು. ಡಿಆರ್ಎಸ್ನಲ್ಲಿ ಪಡಿಕ್ಕಲ್ ಬ್ಯಾಟ್ ತಾಗಿದ್ದು ಕಾಣಿಸಿತ್ತು. ಆದರೂ ಥರ್ಡ್ ಅಂಪೈರ್ ಕ್ರಿಷ್ಣಮಾಚಾರಿ ಶ್ರೀನಿವಾಸನ್ ನಾಟ್ ಔಟ್ ತೀರ್ಪಿತ್ತರು. ಹೀಗಾಗಿ ಆನ್ ಫೀಲ್ಡ್ ಅಂಪೈರ್ ಅನಂತ ಪದ್ಮನಾಭನ್ ಕೂಡ ನಾಟ್ ಔಟ್ ಎಂದು ಕೈ ಸನ್ನೆ ಮಾಡಿದರು. ಪಂಜಾಬ್ ಕಿಂಗ್ಸ್ ಇದರಿಂದಾಗಿ ಒಂದು ರಿವ್ಯೂ ಕೂಡ ಕಳೆದುಕೊಂಡಿತು. ಅತ್ತ ಆರ್ಸಿಬಿ ಬ್ಯಾಟ್ಸ್ಮನ್ ಔಟ್ ಕೂಡ ಆಗದ್ದು ನೋಡಿ ರಾಹುಲ್ ತನ್ನ ಅಸಮಾಧಾನವನ್ನು ಅಂಪೈರ್ ಅವರೆದು ತೋರಿಕೊಂಡರು. ಆದರೆ ಥರ್ಡ್ ಅಂಪೈರ್ ತೀರ್ಪು ಅದಾಗಿದ್ದರಿಂದ ಆನ್ ಫೀಲ್ಡ್ ಅಂಪೈರ್ ಏನೂ ಮಾಡಲಾಗಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಆರ್ಸಿಬಿ 164 ರನ್ ಬಾರಿಸಿದೆ.
— Sardar Khan (SardarK07004661) October 3, 2021 |
ಟ್ವಿಟರ್ನಲ್ಲಿ ಅನೇಕ ನೆಟ್ಟಿಗರು ಕಿಡಿ
ಆರ್ಸಿಬಿ ಮತ್ತು ಪಿಬಿಕೆಎಸ್ ಪಂದ್ಯದಲ್ಲಿ ಥರ್ಡ್ ಅಂಪೈರ್ ತಪ್ಪು ತೀರ್ಪು ನೀಡಿದ್ದು ನೋಡಿ ಟ್ವಿಟರ್ನಲ್ಲಿ ಅನೇಕರು ಕಿಡಿ ಕಾರಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ, ಈಗ ಕಾಮೆಂಟೇಟರ್ ಆಗಿರುವ ಸ್ಕಾಟ್ ಸ್ಟೈರಿಸ್ ಕೂಡ ಬೇಸರ ತೋರಿಕೊಂಡು ಟ್ವೀಟ್ ಮಾಡಿದ್ದಾರೆ. "ಈ ಕೂಡಲೇ ಥರ್ಡ್ ಅಂಪೈರ್ ಅನ್ನು ಕಿತ್ತು ಹಾಕಿ. ಔಟ್ ಇದ್ದರೂ ನಾಟ್ ಔಟ್. ಏನು ಜೋಕಿದು," ಎಂದು ಸ್ಟೈರಿಸ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್ನಲ್ಲಿ ಇನ್ನೂ ಅನೇಕರು ತಮ್ಮ ಅಸಮಾಧಾನ ತೋರಿಕೊಂಡಿದ್ದಾರೆ. ದಯವಿಟ್ಟು ಯಾರಾದರೂ ಇವರಿಗೆ ಟ್ಯುಟೋರಿಯಲ್ ನೀಡಿ ಎಂದು ಅನೇಕರು ಬರೆದುಕೊಂಡಿದ್ದಾರೆ. ಥರ್ಡ್ ಅಂಪೈರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ XI
ಆರ್ಸಿಬಿ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆ), ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.
ಪಿಬಿಕೆಎಸ್ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಸಿ & ವಿಕೆ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.