ಟಿ ನಟರಾಜನ್ ಬಗ್ಗೆ ಚೋಪ್ರ ಕಳವಳ
ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಟಿ ನಟರಾಜನ್ ಬಗ್ಗೆ ಈ ರೀತಿಯ ಕಳವಳವನ್ನು ವ್ಯಕ್ತಪಡಿಸಿದ್ದರೆ. ಇತ್ತೀಚಿನ ಪಂದ್ಯಗಳಲ್ಲಿ ನಟರಾಜನ್ ದುಬಾರಿಯಾಗುತ್ತಿದ್ದು ತಂಡಕ್ಕೆ ಕೂಡ ಹಿನ್ನಡೆಯಾಗಿದೆ. ಗಾಯದಿಂದಾಗಿ ಎರಡು ಪಂದ್ಯವನ್ನು ಕಳೆದುಕೊಂಡಿದ್ದ ನಟರಾಜನ್ ಬಳಿಕ ತಂಡಕ್ಕೆ ಮರಳಿದ್ದರು. ಆದರೆ ಅದಾದ ಬಳಿಕ ನಡರಾಜನ್ ದುಬಾರಿಯಾಗುತ್ತಿದ್ದಾರೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದ ಪಂದ್ಯದಲ್ಲಿ ನಟರಾಜನ್ ನಾಲ್ಕು ಓವರ್ಗಳ ತಮ್ಮ ಕೋಟಾದಲ್ಲಿ ಬರೊಬ್ಬರಿ 60 ರನ್ಗಳನ್ನು ಬಿಟ್ಟುಕೊಡುವ ಮೂಲಕ ದೊಡ್ಡ ಆಘಾತ ನೀಡಿದ್ದರು.
ಲಯ ಕಳೆದುಕೊಂಡಿದ್ದಾರೆ ನಟರಾಜನ್
"ಟಿ ನಟರಾಜನ್ ಗಾಯದಿಂದ ಮರಳಿದ ಬಳಿಕ ತಮ್ಮ ಲಯವನ್ನು ಕಳೆದುಕೊಂಡಿದ್ದಾರೆ. ಅದು ತಂಡಕ್ಕೆ ದೊಡ್ಡ ಸಮಸ್ಯೆಯನ್ನುಂಡು ಮಾಡುತ್ತಿದೆ. ಅವರು ಕಳೆದ ಪಂದ್ಯದಲ್ಲಿ ಯಾರ್ಕರ್ಗಳನ್ನು ಸೂಕ್ತ ಸ್ಥಳಗಳಿಗೆ ಎಸೆಯಲು ವಿಫಲವಾಗುತ್ತಿದ್ದರು. ಅವರು ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಅದು ಅವರಿಂದ ಸಾಧ್ಯವಾಗುತ್ತಿರಲಿಲ್ಲ" ಎಂದು ಟಿ ನಟರಾಜನ್ ಬಗ್ಗೆ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ.
ಭುವಿ ಉಮ್ರಾನ್ ಬಗ್ಗೆಯೂ ಚೋಪ್ರ ಮಾತು
ಮುಂದುವರಿದ ಆಕಾಶ್ ಚೋಪ್ರ ಸನ್ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಹಾಗೂ ವೇಗದ ಅಸ್ತ್ರ ಉಮ್ರಾನ್ ಮಲಿಕ್ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. "ಭುವಿ ಟೂರ್ನಿಯುದ್ದಕ್ಕೂ ಎಕನಾಮಿಕಲ್ ಬೌಲರ್ ಆಗಿ ಯಶಸ್ವಿಯಾಗಿದ್ದಾರೆ. ಅವರಿಂದ ಮುಂದೆಯೂ ಅಂಥಾದ್ದೇ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಉಮ್ರಾನ್ ಮಲಿಕ್ ವೇಗದ ಅಸ್ತ್ರವಾಗಿದ್ದು ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ, ಅವರು ಒಂದೋ ನಾಲ್ಕು ಓವರ್ಗಳಲ್ಲಿ 40ಕ್ಕೂ ಅಧಿಕ ರನ್ ನೀಡುತ್ತಿದ್ದಾರೆ ಇಲ್ಲವೇ 3 ವಿಕೆಟ್ ಪಡೆಯುತ್ತಾರೆ ಎಂದಿದ್ದಾರೆ ಆಕಾಶ್ ಚೋಪ್ರ.
ಪಂಜಾಬ್ ವಿರುದ್ಧ SRH ಆಡುವ ಬಳಗ
ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್
ಬೆಂಚ್: ಟಿ ನಟರಾಜನ್, ಗ್ಲೆನ್ ಫಿಲಿಪ್ಸ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಕಾರ್ತಿಕ್ ತ್ಯಾಗಿ, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಸುಶಾಂತ್ ಮಿಶ್ರಾ