ಅಂತಿಮ ಓವರ್ ಥ್ರಿಲ್ಲರ್
ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 211 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ರಿಂಕು ಸಿಂಗ್ ಹಾಗೂ ಸುನಿಲ್ ನರೈನ್ ಕೆಕೆಆರ್ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಅಂತಿಮ ಓವರ್ನಲ್ಲಿ ಕೆಕೆಆರ್ 21 ರನ್ಗಳಿಸುವ ಕಠಿಣ ಸವಾಲು ಇತ್ತು. ಸ್ಟೋಯ್ನಿಸ್ ಎಸೆದ ಈ ಅಂತಿಮ ಓವರ್ನ ಮೊದಲ ಎಸೆತವನ್ನು ಸ್ಟ್ರೈಕ್ನಲ್ಲಿದ್ದ ರಿಂಕು ಸಿಂಗ್ ಬೌಂಡರಿಗಟ್ಟಿದ್ದರು. ನಂತರದ ಎರಡು ಎಸೆತಗಳು ಸಿಕ್ಸರ್ಗೆ ಅಟ್ಟಲ್ಪಟ್ಟವು. ಈ ಮೂಲಕ ಮೊದಲ ಮೂರು ಎಸೆತಗಳಲ್ಲಿಯೇ 16 ರನ್ಗಳನ್ನು ಗಳಿಸಿತು ಕೆಕೆಆರ್. ಈಗ ಕೆಕೆಆರ್ಗೆ ಅಗತ್ಯವಿದ್ದ ರನ್ ಮೂರು ಎಸೆತಗಳಲ್ಲಿ ಕೇವಲ 5. ನಾಲ್ಕನೇ ಎಸೆತದಲ್ಲಿ ಮತ್ತೆರಡು ರನ್ಗಳು ಕೆಕೆಆರ್ಗೆ ಸೇರ್ಪಡೆಯಾಗಿತ್ತು. ಹೀಗಾಗಿ ಗೆಲ್ಲಲು ಕೆಕೆಆರ್ ಎರಡು ಎಸೆತಗಳಲ್ಲಿ ಮೂರು ರನ್ಗಳನ್ನು ಗಳಿಸಬೇಕಿತ್ತು.
ಆಘಾತ ಅನುಭವಿಸಿದ ಕೆಕೆಆರ್
ಈಗ ಪಂದ್ಯಕ್ಕೆ ಮತ್ತೊಂದು ರೋಚಕ ತಿರುವು ದೊರೆಯಿತು. ಸ್ಪೋಟಕ ಬ್ಯಾಟಿಂಗ್ ಮಾಡುತ್ತೊಇದ್ದ ರಿಂಕು ಸಿಂಗ್ ದೊಡ್ಡ ಹೊಡೆತವನ್ನು ಬಾರಿಸುವ ಯತ್ನದಲ್ಲಿ ವಿಫಲವಾದರು. ಎವಿನ್ ಲೂಯಿಸ್ ಹಿಡಿದ ಅದ್ಭುತ ಕ್ಯಾಚ್ಗೆ ರಿಂಕು ವಿಕೆಟ್ ಒಪ್ಪಿಸಬೇಕಾಯಿತು. ಕೊನೆಯ ಎಸೆತದಲ್ಲಿ ಮೂರು ರನ್ಗಳಿಸುವ ಸವಾಲು ಇದ್ದಾಗ ಉಮೇಶ್ ಯಾದವ್ ಕ್ರೀಸ್ಗೆ ಇಳಿದಿದ್ದರು. ಈ ಎಸೆತದಲ್ಲಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಕೆಕೆಆರ್ ಆಘಾತಕಾರಿ ಸೋಲು ಅನುಭವಿಸಿತು. ಗೆಲುವಿನ ಸನಿಹಕ್ಕೆ ತಲುಪಿದ್ದರೂ ಕೆಕೆಆರ್ಗೆ ಗೆಲುವಿನ ರುಚಿ ಅನುಭವಿಸಲು ಸಾಧ್ಯವಾಗಲಿಲ್ಲ.
|
ಡಗೌಟ್ನಲ್ಲಿ ಗಂಭೀರ್ ಸಂಭ್ರಮ
ಸೋಲುವ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್ಗೆ ಈ ಮೂಲಕ ಎಂಟ್ರಿ ಪಡೆಯಿತು. ಈ ಸಂದರ್ಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಆಕ್ರಮಣಕಾರಿಯಾಗಿ ಸಂಭ್ರಮಿಸುವ ಮೂಲಕ ಆಟದಲ್ಲಿ ತಮ್ಮ ತಲ್ಲೀನತೆಯನ್ನು ವ್ಯಕ್ತಪಡಿಸಿದರು. ಗಂಭೀರ್ ಸಂಭ್ರಮಿಸಿದ ರೀತಿ ಕಂಡು ಅಭಿಮಾನಿಗಳಿಗೂ ಅಚ್ಚರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕಣಕ್ಕಿಳಿದ ಆಡುವ ಬಳಗ
ಕೆಕೆಆರ್: ವೆಂಕಟೇಶ್ ಅಯ್ಯರ್, ಅಭಿಜೀತ್ ತೋಮರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ
ಬೆಂಚ್: ಶೆಲ್ಡನ್ ಜಾಕ್ಸನ್, ಬಾಬಾ ಇಂದ್ರಜಿತ್, ಆರೋನ್ ಫಿಂಚ್, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ಅನುಕುಲ್ ರಾಯ್, ಶಿವಂ ಮಾವಿ, ಪ್ರಥಮ್ ಸಿಂಗ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಹರ್ಷಿತ್ ರಾಣಾ
ಎಲ್ಎಸ್ಜಿ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ನಾಯಕ), ಎವಿನ್ ಲೂಯಿಸ್, ದೀಪಕ್ ಹೂಡಾ, ಮನನ್ ವೋಹ್ರಾ, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್
ಬೆಂಚ್: ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಕೈಲ್ ಮೇಯರ್ಸ್, ಅಂಕಿತ್ ರಾಜ್ಪೂತ್, ಆಂಡ್ರ್ಯೂ ಟೈ, ಕರಣ್ ಶರ್ಮಾ, ಮಯಾಂಕ್ ಯಾದವ್