ಈ ಆಟಗಾರನ ಅಲಭ್ಯತೆ ತಂಡಕ್ಕೆ ಸಮಸ್ಯೆಯಾಗಿದೆ
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 2 ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದಿರುವ ಹರ್ಭಜನ್ ಸಿಂಗ್ ಅದರಲ್ಲಿ ಮೊದಲನೇ ಸಮಸ್ಯೆ ದೀಪಕ್ ಚಹರ್ ಆಡುವ ಬಳಗದಲ್ಲಿ ಇಲ್ಲದೇ ಇರುವುದು ಎಂದಿದ್ದಾರೆ. ದೀಪಕ್ ಚಹರ್ ಇದ್ದಿದ್ದರೆ ಪವರ್ ಪ್ಲೇ ಓವರ್ಗಳಲ್ಲಿಯೇ ಎದುರಾಳಿ ತಂಡಗಳ ವಿಕೆಟ್ ಉರುಳಿಸಿ ಒತ್ತಡವನ್ನು ಹೇರುತ್ತಿದ್ದರು ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದಾರೆ.
ತಂಡಕ್ಕೆ ಕಾಡುತ್ತಿದೆ ಮತ್ತೊಂದು ಸಮಸ್ಯೆ
ಇನ್ನೂ ಮುಂದುವರಿದು ಮಾತನಾಡಿರುವ ಹರ್ಭಜನ್ ಸಿಂಗ್ ಪಂದ್ಯದ ಮಧ್ಯಮ ಓವರ್ಗಳಲ್ಲಿ ಅಂದರೆ 7ರಿಂದ 15 ಓವರ್ಗಳಲ್ಲಿ ಯಶಸ್ವಿಯಾಗಿ ಬೌಲಿಂಗ್ ಮಾಡಿ ವಿಕೆಟ್ ಪಡೆಯಬಲ್ಲಂತಹ ಸಾಮರ್ಥ್ಯವಿರುವ ಸ್ಪಿನ್ನರ್ ಕೊರತೆ ತಂಡವನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.
ಈ ಸಮಸ್ಯೆಗೆ ಸದ್ಯಕ್ಕಿಲ್ಲ ಪರಿಹಾರ
ಹರ್ಭಜನ್ ಸಿಂಗ್ ತಿಳಿಸಿರುವ ಪ್ರಕಾರ ದೀಪಕ್ ಚಹರ್ ಅಲಭ್ಯತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಮಟ್ಟದಲ್ಲಿಯೇ ಹೊಡೆತವನ್ನು ನೀಡಿದೆ. ಇನ್ನು ಗಾಯದ ಸಮಸ್ಯೆಗೊಳಗಾಗಿರುವ ದೀಪಕ್ ಚಹರ್ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಈ ತಿಂಗಳ ಕೊನೆಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹೀಗೆ ಇನ್ನೂ ಇಪ್ಪತ್ತು ದಿನಗಳ ನಂತರ ದೀಪಕ್ ಚಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲಿದ್ದು, ಅಲ್ಲಿಯವರೆಗೆ ಹರ್ಭಜನ್ ಸಿಂಗ್ ಬಿಚ್ಚಿಟ್ಟಿರುವ ಈ ಸಮಸ್ಯೆಗೆ ಸರಿಯಾದ ಪರಿಹಾರ ಸಿಗುವುದಿಲ್ಲ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯಗಳಲ್ಲಿಯೂ ಈ ಸಮಸ್ಯೆಯನ್ನು ಎದುರಿಸಲಿದೆ ಎನ್ನಬಹುದು.