— Rishobpuant (rishobpuant) April 18, 2022 |
ಕೆಕೆಆರ್ vs ಆರ್ಆರ್ ಪಂದ್ಯದಲ್ಲಿ ಆಗಿದ್ದೇನು?
ಮಂಗಳವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿತ್ತು ಕೆಕೆಆರ್ ತಂಡ. ಆರಂಭಿಕ ಆಟಗಾರ ಆರೋನ್ ಫಿಂಚ್ ಸ್ಪೋಟಕ ಬ್ಯಾಟಿಂಗ್ ಮೂಲಕ ಉತ್ತಮ ಆರಂಭವನ್ನು ನೀಡಿದ್ದರು. ಆದರೆ 9ನೇ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದ ಪ್ರಸಿದ್ಧ್ ಕೃಷ್ಣ ಈ ಓವರ್ನ ಅಂತಿಮ ಎಸೆತದಲ್ಲಿ ಆರೋನ್ ಫಿಂಚ್ ಅವರನ್ನು ಔಟ್ ಮಾಡಿದ್ದರು. ವಿಕೆಟ್ ಕಳೆದುಕೊಂಡು ಫಿಂಚ್ ಫೆವಿಲಿಯನ್ ಕಡೆಗೆ ಸಾಗುವ ಸಂದರ್ಭದಲ್ಲಿ ಪ್ರಸಿದ್ಧ್ ಕೃಷ್ಣ ಹಾಗೂ ಆರೋನ್ ಫಿಂಚ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅರೋನ್ ಫಿಂಚ್ಗೆ ಕೃಷ್ಣ ಸರಿಯಾಗಿಯೇ ತಿರುಗೇಟು ನೀಡಿದ್ದರು.
ಕೆಎಲ್ ರಾಹುಲ್ ಹೇಳಿದ್ದೇನು?
ಇನ್ನು ಈ ಪಂದ್ಯದ ನಂತರ ಪ್ರಸಿದ್ಧ್ ಕೃಷ್ಣ ತಮ್ಮ ಫೊಟೊವನ್ನು ಹಂಚಿಕೊಂಡು ಗೆಲುವನ್ನು ಸಂಭ್ರಮಿಸಿದ್ದರು ಕೆಎಲ್ ರಾಹುಲ್. ಈ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಕೆಎಲ್ ರಾಹುಲ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ಈಸಿ ಟೈಗರ್. ಯಾಕ್ ಜಗಳ ಆಡ್ತೀಯಾ" ಎಂದು ಪ್ರಸಿದ್ಧ್ ಕೃಷ್ಣ ಅವರನ್ನು ಕೆಎಲ್ ರಾಹುಲ್ ಕಾಲೆಳೆದಿದ್ದಾರೆ.
ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಪಂದ್ಯ
ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದವು. ಆರ್ಆರ್ ಪರವಾಗಿ ಮೊದಲಿಗೆ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿ ಮಿಂಚಿದರು., ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಬಟ್ಲರ್ ಎರಡನೇ ಶತಕ ಸಿಡಿಸಿದ್ದಾರೆ. ಇನ್ನು ರನ್ ಬೆನ್ನಟ್ಟುವ ಸಂದರ್ಭದಲ್ಲಿ ಆರೋನ್ ಫಿಂಚ್ ಹಾಗೂ ಕೆಕೆಆರ್ ನಾಯಕ ಶ್ರೇಯಸ್ ಐಯ್ಯರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದ್ದರು. ನಂತರ ಯುಜುವೇಂದ್ರ ಚಾಹಲ್ ಅವರ ಅದ್ಭುತ ಓವರ್ ಕೆಕೆಆರ್ ಓಟಕ್ಕೆ ತಡೆಯಾದರು. ಈ ಒಂದು ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಹಿತ 4 ವಿಕೆಟ್ ಸಂಪಾದಿಸಿದ್ದರು ಯುಜಿ. ಇದರಲ್ಲಿ ಶ್ರೇಯಸ್ ಐಯ್ಯರ್ ವಿಕೆಟ್ ಕೂಡ ಒಂದು. ಚಾಹಲ್ ಈ ಪಂದ್ಯದಲ್ಲಿ ಐದು ವಿಕೆಟ್ ಸಂಪಾದಿಸಿದ್ದರು. ಈ ಆಘಾತದ ಬಳಿಕವೂ ಕೆಕೆಆರ್ ಸುಲಭವಾಗಿ ಸೋಲೊಪ್ಪಿಕೊಂಡಿರಲಿಲ್ಲ. ಉಮೇಶ್ ಯಾದವ್ ಬ್ಯಾಟಿಂಗ್ನಲ್ಲಿಯೂ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದರು. ಆದರೆ ಅಂತಿಮ ಓವರ್ನಲ್ಲಿ ಮತ್ತೆ ಆರ್ಆರ್ ಮೇಲುಗೈ ಸಾಧಿಸಿ ಗೆಲುವು ತನ್ನದಾಗಿಸಿಕೊಂಡಿತು.