ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಸೀಸನ್ನ 15ನೇ ಋತುವಿನಲ್ಲಿ ಕೆಲವು ಯುವ ಆಟಗಾರರು ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕೆಲವು ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಭಯಬಿಟ್ಟು ಬ್ಯಾಟ್ ಬೀಸುತ್ತಿದ್ದಾರೆ ಮತ್ತು ಅತ್ಯಂತ ಒತ್ತಡದ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲೆವು ಎಂಬುದನ್ನು ತೋರಿಸಿದ್ದಾರೆ. ಅಂತಹ ಆಟಗಾರರಲ್ಲಿ ಪಂಜಾಬ್ ಕಿಂಗ್ಸ್ನ ವಿಕೆಟ್ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಒಬ್ಬರು. ಜಿತೇಶ್ ಶನಿವಾರ ನಡೆದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅಜೇಯ 38 ರನ್ ಬಾರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ಶಿಬಿರ ತೊರೆದು ದಿಢೀರ್ ತವರಿಗೆ ಪ್ರಯಾಣಿಸಿದ ಶಿಮ್ರಾನ್ ಹೆಟ್ಮೆಯರ್; ಕಾರಣ?
ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಜಿತೇಶ್ ಶರ್ಮಾ ಆಟಕ್ಕೆ ಮನಸೋತಿದ್ದು, ಹೆಚ್ಚಿನ ಮೆಚ್ಚುಗೆಯನ್ನು ನೀಡಿದ್ದಾರೆ. ಜಿತೇಶ್ ಶರ್ಮಾ ಅವರು ಡೆಲ್ಲಿ ಕ್ಯಾಪಿಟಲ್ಸ್ ನಾಯಕ- ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಮುಂಬೈನ ಇಶಾನ್ ಕಿಶನ್ಗಿಂತ ವೀರೇಂದ್ರ ಸೆಹ್ವಾಗ್ರನ್ನು ಹೆಚ್ಚು ಪ್ರಭಾವಿಸಿದ್ದಾರೆ.
"ಐಪಿಎಲ್ನಲ್ಲಿ ಜಿತೇಶ್ ಶರ್ಮಾ ಸ್ವಲ್ಪ ಪ್ರಭಾವಿತರಾಗಿದ್ದಾರೆ, ಆದ್ದರಿಂದ ನಾವು ಅವರನ್ನು ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕೇ? ಎಂದು ನಾನು ಕೇಳುತ್ತಿದ್ದೇನೆ. ಏಕೆಂದರೆ ಯಾರು ರನ್ ಗಳಿಸಿದರೂ, ನಾವು ಅವರನ್ನು ವಿಶ್ವಕಪ್ಗೆ ಸಂಭಾವ್ಯ ಆಟಗಾರರ ವಿಭಾಗದಲ್ಲಿ ಇರಿಸುತ್ತೇವೆ. ಆದರೆ ನಿಸ್ಸಂದೇಹವಾಗಿ ಅವರು ಆಡಿದ್ದಾರೆ," ಎಂದರು ಸೆಹ್ವಾಗ್ ತಿಳಿಸಿದರು.
ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ವಿಕೆಟ್ ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ ಇದ್ದಾರೆ. ಆದರೆ ಅವರೆಲ್ಲರಿಗಿಂತ ನನ್ನನ್ನು ಹೆಚ್ಚು ಪ್ರಭಾವಿಸಿದ ಯಾರಾದರೂ ಇದ್ದರೆ ಅದು ಜಿತೇಶ್ ಶರ್ಮಾ ಎಂದು ವೀರೇಂದ್ರ ಸೆಹ್ವಾಗ್ ಕ್ರಿಕ್ಬಝ್ನಲ್ಲಿ ಹೇಳಿದರು.
"ಜಿತೇಶ್ ಶರ್ಮಾಗೆ ಯಾವುದೇ ಭಯವಿಲ್ಲ, ಅವನು ಬ್ಯಾಟ್ಗೆ ಬಂದು ತನ್ನನ್ನು ತಾನು ವ್ಯಕ್ತಪಡಿಸುತ್ತಾನೆ. ಕವರ್ಗಳ ಮೇಲೆ ಯಾವ ಬಾಲ್ನಲ್ಲಿ ಶಾಟ್ ಆಡಬೇಕು, ಮಿಡ್-ಆಫ್ ಮತ್ತು ಮಿಡ್-ಆನ್ನಲ್ಲಿ ನಾನು ಯಾವ ಬಾಲ್ ಆಡಬೇಕು ಎಂದು ಅವರಿಗೆ ತಿಳಿದಿದೆ".
"ಅವರು ಯುಜ್ವೇಂದ್ರ ಚಾಹಲ್ಗೆ ಹೊಡೆದರು. ಇದೇ ರೀತಿ ವಿವಿಎಸ್ ಲಕ್ಷ್ಮಣ್ ಅವರು ಶೇನ್ ವಾರ್ನ್ ವಿರುದ್ಧ ಹೇಗೆ ಹೊಡೆಯುತ್ತಿದ್ದದು ನನಗೆ ನೆನಪಿಗೆ ಬಂತು. ಹೀಗಾಗಿ ಜಿತೇಶ್ ಶರ್ಮಾ ನನ್ನನ್ನು ಸ್ವಲ್ಪಮಟ್ಟಿಗೆ ಪ್ರಭಾವಿಸಿದ್ದಾರೆ. ನಾನು ಅವರನ್ನು ಟಿ20 ವಿಶ್ವಕಪ್ಗಾಗಿ ಎರಡನೇ ವಿಕೆಟ್ಕೀಪರ್-ಬ್ಯಾಟರ್ ಆಗಿ ಆಸ್ಟ್ರೇಲಿಯಾಕ್ಕೆ ಹೋಗಲು ಬಯಸುತ್ತೇನೆ," ಎಂದು ಮಾಜಿ ಆಟಗಾರ ಅಭಿಪ್ರಾಯಪಟ್ಟರು.
ಜಿತೇಶ್ ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಲಿಯಾಮ್ ಲಿವಿಂಗ್ಸ್ಟೋನ್ಗಿಂತ ಮೊದಲು ಬ್ಯಾಟಿಂಗ್ಗೆ ಬಂದಿದ್ದರು. ಬಲಗೈ ಬ್ಯಾಟರ್ ಕೇವಲ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಾಯದಿಂದ 38 ರನ್ ಗಳಿಸಿ, ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 189/5 ರನ್ ಗಳಿಸಲು ಸಹಾಯ ಮಾಡಿದರು.
ಆದಾಗ್ಯೂ, ರಾಜಸ್ಥಾನವು ಆರು ವಿಕೆಟ್ಗಳು ಮತ್ತು ಎರಡು ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಜಿತೇಶ್ ಶರ್ಮಾ ಹೋರಾಟ ವ್ಯರ್ಥವಾಯಿತು.