ಆರಂಭದಲ್ಲಿ ಪಿಚ್ ಸವಾಲಾಗಿತ್ತು
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ "ಈ ಪಿಚ್ನಲ್ಲಿ ಹೊಸ ಚೆಂಡನ್ನು ಎದುರೊಸುವುದು ಬಹಳ ಸವಾಲಾಗಿತ್ತು. ಆದರೆ ಹೆಚ್ಚಿನ ಹಾನಿಯಿಲ್ಲದೆ ನಾವು ಮೊದಲ ಆರು ಓವರ್ಗಳನ್ನು ದಾಟಿದ್ದೆವು. ಇದೊಂದು ರೀತಿ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸೆಶನ್ನಂತೆ ಭಾಸವಾಗಿತ್ತು. ಬೌನ್ಸ್ ಹೆಚ್ಚಾಗಿತ್ತು. 180 ರನ್ಗಳನ್ನು ನಾವು ಗಳಿಸಿದರೆ ಎದುರಾಳಿಗೆ ಸವಾಲೊಡ್ಡಬಹುದು ಎಂದು ನಾವು ಭಾವಿಸಿದ್ದೆವು" ಎಂದಿದ್ದಾರೆ ಫಾಪ್ ಡು ಪ್ಲೆಸಿಸ್.
ತಂಡದ ಪ್ರದರ್ಶನದಿಂದ ಹೆಮ್ಮೆಯಿದೆ
"ಹಾಗಿದ್ದರೂ ನಾನು ನಮ್ಮ ತಂಡದ ಪ್ರದರ್ಶನಕ್ಕೆ ಹೆಮ್ಮೆ ಪಡುತ್ತಿದ್ದೇನೆ. ಆರ್ಸಿಬಿ ತಂಡಕ್ಕೆ ಇದು ಶ್ರೇಷ್ಠವಾದ ಆವೃತ್ತಿಯಾಗಿತ್ತು. ಆರ್ಸಿಬಿ ತಂಡದಲ್ಲಿ ಇದು ನನ್ನ ಮೊದಲ ಆವೃತ್ತಿ. ಇಲ್ಲಿ ನಮಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿರುವುದು ನೋಡಲು ನಿಜಕ್ಕೂ ಹರ್ಷವಾಗುತ್ತಿದೆ.
ಭಾರತ ತಂಡಕ್ಕೆ ಆಯ್ಕೆಯಾದ ಡಿ.ಕೆ, ಹರ್ಷಲ್ ಬಗ್ಗೆ ಫಾಫ್ ಮಾತು
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣಕ್ಕೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್ ಹಾಗೂ ವೇಗಿ ಹರ್ಷಲ್ ಪಟೇಲ್ ಬಗ್ಗೆಯೂ ಫಾಫ್ ವಿಶೇಷ ಮಾತುಗಳನ್ನಾಡಿದ್ದಾರೆ. "ಹರ್ಷಲ್, ಡಿಕೆ ಭಾರತ ತಂಡಕ್ಕೆ ನೀವು ಅರ್ಹವಾಗು ಆಯ್ಕೆಯಾಗಿದ್ದೀರಿ. ಇಂದಿನ ಪಂದ್ಯದಲ್ಲಿ ನಮ್ಮ ತಂಡ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ವಿಫಲವಾದರು ಕೂಡ ನಾನು ಹೆಮ್ಮೆ ಪಡುತ್ತಿದ್ದೇನೆ" ಎಂದಿದ್ದಾರೆ ಫಾಫ್ ಡು ಪ್ಲೆಸಿಸ್.
ಅಭಿಮಾನಿಗಳ ಬೆಂಬಲ ಸ್ಮರಿಸಿದ ನಾಯಕ
ಮುಂದುವರಿದು ಮಾತನಾಡಿದ ಆರ್ಸಿಬಿ ನಾಯಕ ತಂಡದಲ್ಲಿನ ಯುವ ಆಟಗಾರರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಆರ್ಸಿಬಿ ತಂಡದ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. "ನಮ್ಮ ತಂಡದಲ್ಲಿ ಕೆಲ ಅದ್ಭುತ ಯುವ ಆಟಗಾರರು ಇದ್ದಾರೆ. ಮೂರು ವರ್ಷದ ಯೋಜನೆ ನಮ್ಮ ಮುಂದಿದೆ. ಹಾಗಾಗಿ ಈ ಅವಕಾಶವನ್ನು ಮತ್ತಷ್ಟು ಉತ್ತಮವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ರಜತ್ ಎಷ್ಟು ಅದ್ಭುತವಾದ ಆಟವನ್ನು ಪ್ರದರ್ಶಿಸಿದರು ಎಂಬುದನ್ನು ನೀವು ನೋಡಿದ್ದೀರಿ. ಇನ್ನು ನಮ್ಮ ಅಭಿಮಾನಿಗಳನ್ನು ನಾವು ಮರೆಯುವಂತಿಲ್ಲ. ಎಲ್ಲೇ ಹೋದರೂ ಆರ್ಸಿಬಿ-ಆರ್ಸಿಬಿ ಎಂಬ ಘೋಷಣೆಗಳು ಕೇಳಿಸುತ್ತದೆ. ಈ ಘೋಷಣೆಗಳು ನಮ್ಮ ತಂಡದ ಆಟಗಾರರ ಕಿವಿಗೆ ಬೀಳುತ್ತಿದ್ದಂತೆಯೇ ಭಾವುಕರಾಗುತ್ತಾರೆ. ಮುಂಬೈ ಪಂದ್ಯದಲ್ಲಿಯೂ ಈ ಬೆಂಬಲ ದೊರೆಯಿತ್ತು. ನಮ್ಮ ತಂಡದ ಅಭಿಮಾನಿಗಳಿಗೆ ನಮ್ಮ ಧನ್ಯವಾದಗಳು" ಎಂದಿದ್ದಾರೆ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್