ಟೀಮ್ ಇಂಡಿಯಾಗೆ ಈತ ಆಯ್ಕೆಯಾದರೆ ಆಶ್ಚರ್ಯವಿಲ್ಲ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿರುವ ಯುವ ವೇಗಿ ಉಮ್ರಾನ್ ಮಲಿಕ್ ಕುರಿತು ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಿಡ್ಡೇ ಸಂದರ್ಶನದಲ್ಲಿ ಮಾತನಾಡಿರುವ ಗಂಗೂಲಿ "150 ಕಿ.ಮೀ. ವೇಗದಲ್ಲಿ ಎಷ್ಟು ಬೌಲರ್ಗಳು ಚೆಂಡನ್ನು ಎಸೆಯಬಲ್ಲರು? ಹೆಚ್ಚು ಮಂದಿ ಇಲ್ಲ. ಈತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ನನಗೇನು ಆಶ್ಚರ್ಯವಿಲ್ಲ. ನಾವು ಈ ಬೌಲರ್ನ್ನು ಬಳಸುವಾಗ ನಿಗಾ ವಹಿಸಿ ಜಾಗರೂಕತೆಯಿಂದ ಬಳಸಬೇಕು" ಎಂದು ಉಮ್ರಾನ್ ಮಲಿಕ್ ಕುರಿತು ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 18 ವಿಕೆಟ್ಗಳನ್ನು ಪಡೆದಿದ್ದಾರೆ.
ಗಂಗೂಲಿ ಮನಗೆದ್ದ ಮತ್ತೋರ್ವ ಬೌಲರ್ ಈತ
ಉಮ್ರಾನ್ ಮಲಿಕ್ ಜೊತೆಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಕುಲ್ದೀಪ್ ಸೇನ್ ಬೌಲಿಂಗ್ ಕೂಡ ನನಗೆ ಇಷ್ಟವಾಯಿತು ಎಂದು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿರುವ ಕುಲ್ದೀಪ್ ಸೇನ್ 8 ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಮೂವರ ಆಯ್ಕೆ ಆಯ್ಕೆಗಾರರಿಗೆ ಬಿಟ್ಟದ್ದು
ಇನ್ನೂ ಮುಂದುವರೆದು ಮಾತನಾಡಿದ ಗಂಗೂಲಿ ಟಿ ನಟರಾಜ್ ಕೂಡ ಕಮ್ಬ್ಯಾಕ್ ಮಾಡಿದ್ದು, ತಂಡದಲ್ಲಿ ಈಗಾಗಲೇ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇದ್ದಾರೆ. ಹೀಗಾಗಿ ಉಮ್ರಾನ್ ಮಲಿಕ್, ಕುಲ್ದೀಪ್ ಸೇನ್ ಮತ್ತು ಟಿ ನಟರಾಜನ್ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ನಿರ್ಧಾರ ಆಯ್ಕೆಗಾರರಿಗೆ ಬಿಟ್ಟದ್ದು ಎಂದಿದ್ದಾರೆ.