ರಿಷಭ್ ಪಂತ್ ನೋ ಬಾಲ್ ಕಿರಿಕ್
ಇತ್ತೀಚೆಗಷ್ಟೇ ನಡೆದ ಡೆಲ್ಲಿ ಕ್ಯಾಪಿಲಟ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ನೋ ಬಾಲ್ ವಿವಾದ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿದೆ. ಅಂತಿಮ ಓವರ್ನಲ್ಲಿ ನೋ ಬಾಲ್ ನೀಡದಿರುವ ಅಂಪೈರ್ ನಿರ್ಧಾರಕ್ಕೆ ಗಂರ ಆದ ರಿಷಭ್ ಪಂತ್ ಕೋಚ್ ಪ್ರವೀಣ್ ಆಮ್ರೆರನ್ನು ಪ್ರತಿಭಟಿಸಲು ಕಳುಹಿಸಿ ವಿವಾದಕ್ಕೆ ಗುರಿಯಾಗಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಗೆಲುವಿಗೆ ಕೊನೆ ಓವರ್ನಲ್ಲಿ 36 ರನ್ಗಳ ಅವಶ್ಯವಿತ್ತು. ಒಬೆದ್ ಮೆಕಾಯ್ ಎಸೆದ ಕೊನೆ ಓವರ್ನ 3 ಎಸೆತಗಳನ್ನು ರಾವ್ಮನ್ ಪೊವೆಲ್ ಸಿಕ್ಸರ್ಗೆ ಅಟ್ಟಿದ್ದರು. ಈ ಮೂಲಕ ಸೋಲುವ ಪಂದ್ಯದಲ್ಲಿ ದೆಹಲಿಗೆ ಗೆಲುವಿನ ಆಸೆಯನ್ನು ಹೆಚ್ಚಿಸಿದ್ದರು. ಆದರೆ ಮೆಕಾಯ್ ಅವರ 3ನೇ ಎಸೆತ ವಿವಾದಕ್ಕೆ ಕಾರಣವಾಯಿತು.
ವಿರಾಟ್ ಕೊಹ್ಲಿಯ ಎಲ್ಬಿಡಬ್ಲ್ಯೂ ವಿವಾದ
ಪ್ರಸಕ್ತ ಐಪಿಎಲ್ ಸರಣಿಯಲ್ಲಿ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಮುಂಬೈ - ಆರ್ಸಿಬಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಮೀಪಿಸುತ್ತಿದ್ದಂತೆ ಎಲ್ಬಿಡಬ್ಲ್ಯೂ ಮೂಲಕ ಔಟಾದರು. ಆದರೆ ಆ ಬಳಿಕ ತೋರಿಸಿರುವ ವಿಡಿಯೋದಲ್ಲಿ ಚೆಂಡು ಬ್ಯಾಟ್ಗೆ ಬಡಿದಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಲಕ್ನೋ ಬ್ಯಾಟ್ಸ್ ಮನ್ ಮಾರ್ಕಸ್ ಸ್ಟೋಯ್ನಿಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ವೈಟ್ ಗೆರೆಯಿಂದ ಹೊರಗೆ ಹೋದ ಚೆಂಡನ್ನೂ ವೈಡ್ ನೀಡಲಿಲ್ಲ. ಹೀಗಾಗಿ ಆಟದ ಅಂತ್ಯ ಬದಲಾಯಿತು.
IPL 2022: ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿದ್ದರೂ ನಾಲ್ಕನೇ ವಾರ ಅವಕಾಶ ಸಿಗದೇ ಬೆಂಚ್ ಕಾದ ಆಟಗಾರರಿವರು!
ಅಂಪೈರ್ಸ್ ಸಂಬಳ ಎಷ್ಟಿರಬಹುದು?
ಇಂತಹ ವಿವಾದಾತ್ಮಕ ಫಲಿತಾಂಶಗಳ ಮೂಲಕ ಪಂದ್ಯದ ಫಲಿತಾಂಶವನ್ನು ಬದಲಾಯಿಸುವ ಅಂಪೈರ್ಗಳ ಸಂಬಳವನ್ನು ಕೇಳಿದರೆ ನೀವು ಶಾಕ್ ಆಗುತ್ತೀರಿ. ಐಪಿಎಲ್ ಸರಣಿಯಲ್ಲಿ ಅಂಪೈರ್ಗಳನ್ನು ಒಟ್ಟು 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಂದರೆ ಐಸಿಸಿ ಅಂಪೈರ್ ಅಸೋಸಿಯೇಷನ್ ಸದಸ್ಯರಿಗೆ ಪ್ರತಿ ಪಂದ್ಯಕ್ಕೆ 1,98,000 ರೂ. ಸ್ಯಾಲರಿ ಸಿಗಲಿದೆ.
ಐಸಿಸಿ ಅಂಪೈರ್ ಅಸೋಸಿಯೇಷನ್ ಸದಸ್ಯರಲ್ಲದ ಅಂಪೈರ್ಗೆ ಪ್ರತಿ ಪಂದ್ಯಕ್ಕೆ 59,000 ರೂ. ನೀಡಲಾಗುತ್ತದೆ. ಇದಲ್ಲದೇ ಪ್ರತಿ ಸೀಸನ್ ಗೆ ಬರೋಬ್ಬರಿ 7,33,000 ರೂ.ಗಳನ್ನು ಪ್ರಾಯೋಜಕತ್ವದ ಹಣವಾಗಿ ಅಂಪೈರ್ಸ್ಗೆ ನೀಡಲಾಗುತ್ತದೆ.
ವೃದ್ದಿಮಾನ್ ಸಹಾಗೆ ಬೆದರಿಕೆ ಪ್ರಕರಣ: ಖ್ಯಾತ ಪತ್ರಕರ್ತನಿಗೆ 2 ವರ್ಷಗಳ ಬ್ಯಾನ್ ಶಿಕ್ಷೆ! ಯಾರು ಆ ಪತ್ರಕರ್ತ?
ಐಪಿಎಲ್ 2022 ರಲ್ಲಿ ಭಾರತೀಯ ಅಂಪೈರ್ಗಳು
ಅನಿಲ್ ಚೌಧರಿ, ಸಿ. ಸಂಸುದಿನ್, ವೀರೇಂದ್ರ ಶರ್ಮಾ, ಕೆ.ಎನ್.ಅನಂತಪದ್ಮನಾಬನ್, ನಿತಿನ್ ಮಾನ್, ಎಸ್.ರವಿ, ವಿನೀತ್ ಕುಲಕರ್ಣಿ, ಯಶವಂತ್ ಬರ್ಡೆ, ಉಲ್ಲಾಸ್ ಕಾಂತೆ, ಅನಿಲ್ ತಾಂಡೇಕರ್, ಕೆ. ಶ್ರೀನಿವಾಸನ್, ಬಾಶಿಮ್ ಪದಕ್
ವಿದೇಶಿ ಅಂಪೈರ್ಗಳು
ರಿಚರ್ಡ್ ಇಲ್ಲಿಂಗ್ವರ್ತ್ (ಇಂಗ್ಲೆಂಡ್), ಪಾಲ್ ರಾಫೆಲ್ (ಆಸ್ಟ್ರೇಲಿಯಾ), ಕ್ರಿಸ್ಟೋಫರ್ ಕೆಫಿನ್ (ನ್ಯೂಜಿಲೆಂಡ್)
ಆಟಗಾರರಿಗೆ ದಂಡ ಹಾಕಲಾಗುತ್ತದೆ? ಅಂಪೈರ್ಗೆ ಏನು ಶಿಕ್ಷೆ?
ಪಂದ್ಯದಲ್ಲಿ ಸರಿಯೋ ತಪ್ಪೋ ಏನೇ ಆಗಲಿ ರೆಫರಿಗಳೇ ನಿರ್ಧರಿಸುತ್ತಾರೆ. ಇದನ್ನು ಆಟಗಾರರಿಂದ ಬದಲಾಯಿಸಲು ಸಾಧ್ಯವಿಲ್ಲ. ಆಟಗಾರರು ವಿವಾದಾತ್ಮಕ ವಾದದಲ್ಲಿ ತೊಡಗಿದರೆ ಮಾತ್ರ ದಂಡ ವಿಧಿಸಲಾಗುತ್ತದೆ. ಆದರೆ ತಪ್ಪಾಗಿ ತೀರ್ಪು ನೀಡಿದ ಅಂಪೈರ್ಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.