1 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿರುವ ಕೃಷ್ಣ
ಮೆಗಾ ಹರಾಜಿನಲ್ಲಿ 1 ಕೋಟಿ ಮೂಲ ಬಹುಮಾನ ಹೊಂದಿರುವ ಪ್ರದೀಪ್ ಕೃಷ್ಣ ಅವರಿಗೆ ಫ್ರಾಂಚೈಸಿಗಳು ಕೋಟ್ಯಂತರ ರೂಪಾಯಿ ಸುರಿಯುವುದು ಖಚಿತ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ಪ್ರಸಿದ್ಧ್ ಕೃಷ್ಣಗಾಗಿ ಹರಾಜಿನಲ್ಲಿ ಸ್ಪರ್ಧಿಸಬಹುದೆಂದು ಅವರು ನಿರೀಕ್ಷಿಸುತ್ತಾರೆ. ಅಲ್ಲದೆ, ಹರಾಜಿನಲ್ಲಿ ಪ್ರದೀಪ್ 8 ರಿಂದ 10 ಕೋಟಿ ರೂ.ವರೆಗೂ ಬಿಕರಿಯಾಗುವ ಸಾಧ್ಯತೆಯಿದೆ.
ಏಕೆಂದರೆ ಪ್ರಸಿದ್ಧ ಕೃಷ್ಣ ಭಾರತದ ಪರ ಮೊದಲ 7 ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಬೌಲರ್ ಎಂಬ ಸಾಧನೆಯನ್ನು ಸಹ ಮಾಡಿದ್ದಾರೆ. ಈ ಮೊದಲು ಜಸ್ಪ್ರೀತ್ ಬುಮ್ರಾ ಮತ್ತು ಮಾಜಿ ಬೌಲರ್ ಅಜಿತ್ ಅಗರ್ಕರ್ 16 ವಿಕೆಟ್ ಕಬಳಿಸಿದ್ರು. ಆದ್ರೆ ಪ್ರಸಿದ್ಧ ಕೃಷ್ಣ 18 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ.
IPL 2022 Auction Live Updates: ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭ
ಯುಜವೇಂದ್ರ ಚಹಾಲ್ ಮೇಲೂ ಕಣ್ಣಿಟ್ಟಿವೆ ಫ್ರಾಂಚೈಸಿ
ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಪ್ರಸಿದ್ಧ ಕೃಷ್ಣ ಅಷ್ಟೇ ಅಲ್ಲದೆ ಮಿಂಚಿದ ಯುಜವೇಂದ್ರ ಚಹಾಲ್, ದೀಪಕ್ ಹೂಡಾ, ದೀಪಕ್ ಚಹಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಹರಾಜಿನಲ್ಲಿ ಭಾರಿ ಬಿಡ್ ಪಡೆಯಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ವಿಶೇಷವಾಗಿ ಚಹಾಲ್ ಅವರು ಸರಣಿಯಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಬೇಗನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಇದರೊಂದಿಗೆ ಎಲ್ಲಾ ತಂಡಗಳು ಹರಾಜಿನಲ್ಲಿ ಚಹಾಲ್ಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.
ವಿಂಡೀಸ್ ಆಟಗಾರರಿಗೆ ಹೆಚ್ಚಿನ ಡಿಮ್ಯಾಂಡ್
ಭಾರತದ ಆಟಗಾರರ ಜೊತೆಗೆ ಏಕದಿನ ಸರಣಿಯಲ್ಲಿ ಮಿಂಚಿದ್ದ ವೆಸ್ಟ್ ಇಂಡೀಸ್ ಆಟಗಾರರು ಕೂಡ ಮೆಗಾ ಹರಾಜಿನಲ್ಲಿ ಆಕರ್ಷಿಸಿದ್ದಾರೆ. ಆಲ್ರೌಂಡರ್ ಫರ್ಫಾಮೆನ್ಸ್ ನೀಡಿದ ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್ ಮತ್ತು ಅಲ್ಜಾರಿ ಜೋಸೆಫ್ ಮುಂದಿನ ಸಾಲಿನಲ್ಲಿದ್ದಾರೆ. ಸರಣಿಯಲ್ಲಿ ಹೋಲ್ಡರ್ ವಿಕೆಟ್ ಕಬಳಿಸಿ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಮೊದಲ ಏಕದಿನ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದರು. ಒಡಿಯನ್ ಸ್ಮಿತ್ ಕೂಡ ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್ನಲ್ಲಿ ಮಿಂಚಿದ್ದರು. ಅಲ್ಜಾರಿ ಜೋಸೆಫ್ ಬೌಲಿಂಗ್ ನಲ್ಲಿ ಎಲ್ಲರನ್ನ ಆಕರ್ಷಿಸಿದ್ದಾರೆ.