ಅವಕಾಶಗಳು ಬಂದಿವೆ, ಅನುಮತಿ ನೀಡಿ
'ಆಜೀವ ನಿಷೇಧ ಅತ್ಯಂತ ಕಠಿಣವಾಗಿದೆ. ಅವರಿಗೆ ಈಗಾಗಲೇ 36 ವರ್ಷ. ನಿಷೇಧದ ಕಾರಣ ಅವರಿಗೆ ಸ್ಥಳೀಯ ಕ್ಲಬ್ ಕ್ರಿಕೆಟ್ ಆಡಲೂ ಸಾಧ್ಯವಾಗುತ್ತಿಲ್ಲ. ಅವರಿಗೆ ಆಡಲು ಆಸಕ್ತಿ ಇದೆ. ಇಂಗ್ಲೆಂಡ್ನಿಂದ ಕೆಲವು ಆಹ್ವಾನವೂ ಬಂದಿವೆ. ಆದರೆ, ಅವರಿಗೆ ಆಡಲು ಅನುಮತಿ ನೀಡದೆ ಇದ್ದರೆ ಈ ಅವಕಾಶಗಳು ಕೈತಪ್ಪಲಿವೆ' ಎಂದು ಖುರ್ಷಿದ್, ಅವರಿಗೆ ಈ ಆಫರ್ಗಳನ್ನು ಒಪ್ಪಿಕೊಳ್ಳಲು ಅನುಕೂಲವಾಗುವಂತೆ ಮಧ್ಯಂತರ ಆದೇಶ ನೀಡಿ ಎಂದು ಕೋರಿದರು.
ಶ್ರೀಶಾಂತ್ ಮೇಲಿನ ನಿಷೇಧ: ಬಿಸಿಸಿಐಗೆ ಸುಪ್ರೀಂನಿಂದ ನೋಟಿಸ್
ಅಜರ್ಗೆ ಅವಕಾಶ ನೀಡಲಾಗಿದೆ
ಇತರೆ ಯಾವ ಕ್ರಿಕೆಟಿಗರನ್ನೂ ಇಷ್ಟು ಕಠಿಣವಾಗಿ ನಡೆಸಿಕೊಂಡಿಲ್ಲ ಎಂದ ಖುರ್ಷಿದ್, ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಇದೇ ರೀತಿ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಅವರ ಪ್ರಕರಣವನ್ನು ಉಲ್ಲೇಖಿಸಿದರು.
ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಜರುದ್ದೀನ್ ಅವರಿಗೆ ಬಿಸಿಸಿಐ ಅವಕಾಶ ನೀಡಿದೆ ಎಂದು ವಿವರಿಸಿದರು.
ಎಸ್ ಶ್ರೀಶಾಂತ್ ಕ್ರಿಕೆಟ್ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಬಿಸಿಸಿಐ
ಕಠಿಣ ಸಂದೇಶ ರವಾನೆ
ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಪರವಾಗಿ ಹಾಜರಾದ ಹಿರಿಯ ವಕೀಲ ಪರಾಗ್ ತ್ಯಾಗಿ, ಕ್ರಿಕೆಟ್ನಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇತರೆ ಆಟಗಾರರಿಗೆ ಕಠಿಣ ಸಂದೇಶ ರವಾನಿಸುವ ಸಲುವಾಗಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.
ವಿಚಾರಣೆ ಮುಂದೂಡಿಕೆ
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಅವರನ್ನು ಖುಲಾಸೆಗೊಳಿಸಿದ ತೀರ್ಪನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಮೊದಲು ಬಗೆಹರಿಯಲಿ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ ಮೂರವೇ ವಾರಕ್ಕೆ ಮುಂದೂಡಿತು.
2013ರ ಐಪಿಎಲ್ ಪ್ರಕರಣ
2013ರ ಐಪಿಎಲ್ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಆಜೀವ ನಿಷೇಧ ವಿಧಿಸಲಾಗಿದೆ.
ಕ್ರಿಕೆಟಿಗರಾದ ಅಜಿಂತ್ ಚಾಂಡಿಲ ಮತ್ತು ಅಂಕೀತ್ ಚವಾಣ್ ಹಾಗೂ ಇತರರೊಂದಿಗೆ ಶ್ರೀಶಾಂತ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ನಿಷೇಧ ತೆರವಿಗೆ ಬಿಸಿಸಿಐ ನಕಾರ
ಚಾಂಡಿಲ, ಚವಾಣ್ ಮತ್ತು ಶ್ರೀಶಾಂತ್ ಅವರೊಂದಿಗೆ ಎಲ್ಲ 36 ಆರೋಪಿಗಳ ವಿರುದ್ಧದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ 2015ರ ಜುಲೈನಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆರೋಪ ಮುಕ್ತ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದ್ದರೂ, ಶ್ರೀಶಾಂತ್ ವಿರುದ್ಧದ ಆಜೀವ ನಿಷೇಧವನ್ನು ತೆರವುಗೊಳಿಸಲು ಬಿಸಿಸಿಐ ನಿರಾಕರಿಸಿತ್ತು.
ಕೇರಳ ಹೈಕೋರ್ಟ್ನ ಏಕ ವ್ಯಕ್ತಿ ನ್ಯಾಯಪೀಠ ಕಳೆದ ವರ್ಷದ ಆಗಸ್ಟ್ 7ರಂದು ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿತ್ತು. ಆದರೆ, ಬಿಸಿಸಿಐ ಅರ್ಜಿಯ ಆಧಾರದಲ್ಲಿ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠ ಮತ್ತೆ ನಿಷೇಧವನ್ನು ಹೇರಿತ್ತು.