ಐಪಿಎಲ್ 2020ಯಲ್ಲಿ ಕೆಕೆಆರ್ ಪರವಾಗಿ ಮಿಂಚು ಹರಿಸಿದ್ದ ತಮಿಳುನಾಡು ಮೂಲದ ರಿಸ್ಟ್ ಸ್ಪಿನ್ನರ್ ವರುಣ್ ಚಕ್ರವರ್ತಿ ಹೊಸ ಜೀವಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘ ಕಾಲದ ಪ್ರೇಯಸಿಯೊಂದೊಗೆ ವರುಣ್ ವಿವಾಹ ಬಂಧನಕ್ಕೆ ಒಳಗಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಈ ವರ್ಷವನ್ನು ವರುಣ್ ಚಕ್ರವರ್ತಿ ಮತ್ತಷ್ಟು ಸ್ಮರಣೀಯವಾಗಿಸಿದ್ದಾರೆ.
ಚೆನ್ನೈನಲ್ಲಿ ಕುಟುಂಬದ ಆಪ್ತ ವಲಯದ ಹಾಜರಿಯಲ್ಲಿ ವರುಣ್ ಚಕ್ರವರ್ತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಹಾಗೂ ಕ್ರಿಕೆಟಿಗರು ತಮಿಳುನಾಡಿದ ಈ ಕ್ರಿಕೆಟರ್ಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.
ಆಸೀಸ್ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್
ಈ ಬಾರಿಯ ಐಪಿಎಲ್ನಲ್ಲಿ ವರುಣ್ ಚಕ್ರವರ್ತಿ ಕೊಲ್ಕತಾ ನೈಟ್ ರೈಡರ್ಸ್ ಪರ ಅದ್ಭುತ ದಾಳಿಯನ್ನು ಸಂಘಟಿಸಿ ಮಿಂಚಿದ್ದರು. 13 ಪಂದ್ಯಗಳನ್ನು ಆಡಿದ ವರುಣ್ 17 ವಿಕೆಟ್ ಪಡೆದಿದ್ದರು. 20.94 ಸರಾಸರಿ ಹಾಗೂ 6.85ರ ಎಕಾನಮಿಯಲ್ಲಿ ವರುಣ್ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ವರುಣ್ ಚಕ್ರವರ್ತಿ ಪ್ರದರ್ಶನ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಯಿತು. ಹೀಗಾಗಿ ಐಪಿಎಲ್ನ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯಗಾಗಿ ಸೀಮಿತ ಓವರ್ಗಳ ತಂಡಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾದರು. ಆದರೆ ದುರಾದೃಷ್ಟವಶಾತ್ ಭುಜದ ನೋವಿನ ಕಾರಣದಿಂದಾಗಿ ಟೀಮ್ ಇಂಡಿಯಾ ಜೊತೆಗೆ ಪ್ರಯಾಣಿಸುವ ಅವಕಾಶ ಕಳೆದುಕೊಂಡರು.