ನವದೆಹಲಿ, ಏಪ್ರಿಲ್ 8: ಕೊರೊನಾವೈರಸ್ ಭೀತಿಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಅನ್ನು ಮುಂದೂದೂಡಲಾಗಿದೆ. ಎಲ್ಲಾ ಕ್ರೀಡಾಕೂಟಗಳು ರದ್ದು ಇಲ್ಲವೆ ಮುಂದೂಡಲ್ಪಡುತ್ತಿರುವುದರಿಂದ ಕ್ರೀಡಾಪಟುಗಳ ಆದಾಯ, ವೃತ್ತಿ ಜೀವನಕ್ಕೆ ಸಣ್ಣ ಮಟ್ಟಿನಲ್ಲಿ ತೊಂದರೆಯೂ ಆಗುತ್ತದೆ.
ಕ್ಲಾರ್ಕ್ರ ಶ್ರೇಷ್ಠ 7 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ
ಆದರೆ ಟೀಮ್ ಇಂಡಿಯಾದ ಮಧ್ಯಮ ವೇಗಿ ದೀಪಕ್ ಚಹಾರ್ಗೆ ಐಪಿಎಲ್ 2020 ಮುಂದೂಡಿದ್ದರಿಂದ ಲಾಭವಾಗಿದೆಯಂತೆ. ಬೆನ್ನುನೋವಿನಿಂದ ಬಳಲುತ್ತಿರುವ ಚಾಹರ್, ಐಪಿಎಲ್ ಮುಂದೂಡಿದ್ದರಿಂದ ತನಗೆ ಸಂಪೂರ್ಣ ಚೇತರಿಸಿಕೊಳ್ಳ ಹೆಚ್ಚಿನ ಕಾಲಾವಕಾಶ ಲಭಿಸಲಿದೆ ಎಂದಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ವೇಳೆ ಚಹಾರ್ ಗಾಯ ಮಾಡಿಕೊಂಡಿದ್ದರು.
ವಾರ್ನ್ ಹೆಸರಿಸಿದ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ಇಬ್ಬರು ಭಾರತೀಯರು
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪರ ಆಡುವ ದೀಪಕ್ ಚಹಾರ್, ಗಾಯದಿಂದ ಚೇತರಿಸಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಾಪಸ್ಸಾಗಲು ಹಾತೊರೆಯುತ್ತಿದ್ದಾರೆ. ಸದ್ಯ ಚಹಾರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ ಅವರು ಸಂಪೂರ್ಣ ಫಾರ್ಮ್ಗೆ ಮರಳು ಇನ್ನೊಂದಿಷ್ಟು ಕಾಲಾವಕಾಶ ಬೇಕು.
ಕ್ರಿಕೆಟ್ ಆಡುತ್ತಿದ್ದವರಿಗೆ ದುಬಾರಿ ಫೈನ್ ಹಾಕಿದ ವಿಕ್ಟೋರಿಯಾ ಪೊಲೀಸರು!
'ಮತ್ತೆ ಬೌಲಿಂಗ್ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಸದ್ಯದ ಆಲೋಚನೆಯೇನಂದರೆ ಫಿಟ್ ಆಗಿ ಉಳಿದಿಕೊಳ್ಳೋದು,' ಎಂದು 27ರ ಹರೆಯದ ಚಹಾರ್ ಹೇಳಿಕೊಂಡಿದ್ದಾರೆ. ಮಾರ್ಚ್ 29ರಿಂದ ನಡೆಯಬೇಕಿದ್ದ ಐಪಿಎಲ್ 2020, ಏಪ್ರಿಲ್ 15ರ ಬಳಿಕ ಸದ್ಯಕ್ಕೆ ಮುಂದೂಡಲ್ಪಟ್ಟಿದೆ.